ಸಂತೆಯಲ್ಲಿ ನಿಂತರೂನು ನೋಡು ನೀನು ನನ್ನನ್ನೇ


Team Udayavani, Mar 17, 2020, 4:28 AM IST

see-me

ಸ್ವಾರ್ಥ ಎಂಬ ಪದ ಕೇಳಿದ್ದೆನಾದರೂ ಸ್ಪಷ್ಟ ಅರ್ಥ ನನಗೆ ಈಗ ಸಿಗುತ್ತಿದೆ. ಅದಕ್ಕೆ ಕಾರಣ ಪ್ರೀತಿ. ಅದನ್ನು ಕೊಟ್ಟವಳು ನೀನು. ಅದಕ್ಕಾಗಿ ಅಭಿಮಾನ ಪಡಲೋ, ಆ ಪ್ರೀತಿಯಲ್ಲಿಯೇ ನನ್ನ ಮನಸು ಗಿರಿಕಿ ಹೊಡೆಯುತ್ತಿದೆಯಲ್ಲ ಎಂದು ಬೇಜಾರು ಪಟ್ಟುಕೊಳ್ಳಲೋ ಎಂಬಂತಹ ಸಂದಿಗ್ಧತೆ. ನನ್ನಷ್ಟಕ್ಕೆ ನಾನಿದ್ದೆ. ಆಗಲೇ ನೀನು ನನ್ನ ಬಾಳಲ್ಲಿ ಪ್ರವೇಶಿಸಿದೆ. ಬರಡಾಗಿದ್ದ ಈ ಹೃದಯದಲ್ಲಿ ಪ್ರೀತಿಯ ಸಸಿ ಮೊಳಕೆಯೊಡೆಯುವಂತೆ ಮಾಡಿದೆ. ಹೊಸದಾದ ಲೋಕವೊಂದನ್ನು ತೆರೆದಿಟ್ಟೆ. ಕುಂತರೂ ನಿಂತರೂ ನಿಂದೇ ಧ್ಯಾನ. ಸದಾ ನನ್ನೆದುರಿನಲ್ಲಿಯೇ ಇರಬೇಕು. ನನ್ನೊಂದಿಗೆ ನಮ್ಮ ಮುಂದಿನ ಜೀವನದ ಬಗ್ಗೆ ಮಾತನಾಡುತ್ತಿರಬೇಕು ಎಂದೆಲ್ಲಾ ಮನಸು ಬಯಸುತ್ತಿತ್ತು. ಅದೇನು ಮೋಡಿಯೋ ಏನೋ, ನೀ ಕಂಡರೆ ಗೆಲುವಾಗುತಿದ್ದೆ. ಆಗಲೇ ಪ್ರಾರಂಭವಾದ್ದು ನೀನು ಸದಾ ನನ್ನೊಂದಿಗಿರಬೇಕೆಂಬ ಸ್ವಾರ್ಥ. ಮನಸಿನ ನಾಗಾಲೋಟ ಬರೀ ಇಲ್ಲಿಗೇ ನಿಲ್ಲುತ್ತಿಲ್ಲ. ನಿನ್ನ ಮನಸು ಕೂಡಾ ಸದಾ ನನ್ನನ್ನೇ ಬಯಸುತ್ತಿರಬೇಕು ಎಂದು ನಿರೀಕ್ಷಿಸಿದವ ನಾನು. ನಿನ್ನೆ ದಿನ ನಿನ್ನ ತುಂಬಾ ನೆನಪು ಮಾಡಿಕೊಂಡೆ ಎಂದಾಗ, ಮಂಗನಂತೆ ಮನಸು ಹುಚ್ಚೆದ್ದು ಕುಣಿಯುತ್ತದೆ. ಐ ಮಿಸ್‌ ಯೂ ಕಣೋ ಎಂದಾಗ ಕೆಟ್ಟ ಖುಷಿಯಾಗುತ್ತದೆ. ನನ್ನೆದುರಿನಲ್ಲಿ ಬೇರೊಬ್ಬ ಹುಡುಗನ ಬಗ್ಗೆ ಹೆಮ್ಮೆ ಪಡಬಾರದು. ಕೊನೆಗೆ ಅವನ ಹೆಸರು ಕೂಡಾ ಹೇಳಬಾರದು ಎನ್ನುವಂತಹ ಸ್ಯಾಡಿಸ್ಟ್‌ ಮನೋಭಾವ ಬೆಳೆಯುವದಕ್ಕೆ ಕಾರಣ ಈ ಪ್ರೀತಿನಾ? ತಿಳಿಯುತ್ತಿಲ್ಲ. ನಾನು ಮಾಡ್ತಿರೋ, ವಿಚಾರಿಸೋ ರೀತಿ ಇದೆಯಲ್ಲ, ಅದು ತಪ್ಪು ಅಂತ ಮನಸು ಹೇಳುತಿದ್ದರೂ ನಾನು ಬದಲಾಗ್ತಿàನಾ? ನೋ ಛಾನ್ಸ್‌! ಸ್ವಾರ್ಥದ ಹಿಂದಿರೋ ಆ ಪ್ರೀತಿಯ ಶಕ್ತಿನೇ ಅಂತಹದ್ದೇನೋ.

ನಾಲ್ಕು ಜನ ಹುಡುಗಿಯರ ಜೊತೆ ಹರಟುತ್ತ, ನಗುತ್ತ ಹೊರಟಿರುವದನ್ನು ನೋಡುತಿದ್ದರೆ ನನ್ನ ಹೊಟ್ಟೆಯಲ್ಲಿ ಖಾರ ಕಲಸಿದಷ್ಟು ಹೊಟ್ಟೆಕಿಚ್ಚು. ನಿನ್ನ ಕಣ್ಣು ನನ್ನನ್ನು ಹುಡುಕುವುದ ಬಿಟ್ಟು ನಿನಗೆ ನಗು ಬಂದದ್ದಾದರೂ ಹೇಗೆ ಅಂತ. ನಾನೇಕೆ ಹೀಗಾದೆ? ನನ್ನ ಮನೋಭಾವವೇಕೆ

ಬದಲಾಯಿತು? ಅದಕ್ಕೆ ಕಾರಣ ನೀನು ಹಾಗೂ ನಿನ್ನ ಪ್ರೀತಿ. ಕೊನೆಯದಾಗಿ ಹೇಳ್ತಿದ್ದೀನಿ. ಸಂತೆಯಲ್ಲಿದ್ದರೂ ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ. ಲವ್‌ ಯೂ ಎ ಲಾಟ್‌.

ಭೋಜರಾಜ ಸೊಪ್ಪಿಮಠ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.