ಕೊರೊನಾ ನೆಗೆಟಿವ್‌ ದೃಢಪತ್ರವಿಲ್ಲದೆ ಸಮುದ್ರದಲ್ಲೇ ಬಾಕಿ!

ಕ್ಯಾಲಿಫೋರ್ನಿಯಾ ಹಡಗಿನಲ್ಲಿ 131 ಭಾರತೀಯರ ಸಂಕಷ್ಟ; ಇಬ್ಬರು ದ.ಕ. ಯುವಕರು

Team Udayavani, Mar 17, 2020, 5:38 AM IST

careful-of-corona-2

ಮಂಗಳೂರು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ ಬಂದರಿನಲ್ಲಿ “ಗ್ರ್ಯಾಂಡ್‌ ಪ್ರಿನ್ಸೆಸ್‌- ಯುಎಸ್‌ಎ’ ಎನ್ನುವ ಹಡಗಿನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರು ಮೂಲದ ಇಬ್ಬರು ಯುವಕರು ಸಹಿತ 131 ಮಂದಿ ಭಾರತೀಯರು ಭಾರತಕ್ಕೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮನ್ನು ಕೂಡಲೇ ಹಡಗಿನಿಂದ ರಕ್ಷಣೆ ಮಾಡುವುದಕ್ಕೆ ತುರ್ತು ಕ್ರಮವನ್ನು ಭಾರತ ಸರಕಾರ ಕೈಗೊಳ್ಳುವಂತೆ ಕೋರಿ ತುಳು ಹಾಗೂ ಹಿಂದಿ ಭಾಷೆಯಲ್ಲಿ ಆಡಿಯೋ ಹಾಗೂ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿದ್ದಾರೆ.

ಪ್ರಮಾಣಪತ್ರವಿಲ್ಲದೆ ಸಮಸ್ಯೆ
ಮಂಗಳೂರಿನ ನಟೇಶ್‌ ಮತ್ತು ಇನ್ನೋರ್ವ ಯುವಕ ಒಂದೂವರೆ ವರ್ಷಗಳಿಂದ ಯುಎಸ್‌ಎಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ವಿವಿಧ ರಾಜ್ಯಗಳ ಇತರ 130 ಮಂದಿ ಉದ್ಯೋಗದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಕೊರೊನಾದಿಂದಾಗಿ ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ದೇಶಗಳ ಯುವಕರನ್ನು ಅವರ ದೇಶದ ಸರಕಾರಗಳು ಸ್ವದೇಶಕ್ಕೆ ಕರೆಸಿಕೊಂಡಿವೆ. ಆದರೆ ಭಾರತ ಸರಕಾರವು ಭಾರತದ ಯುವಕರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಕೊರೊನಾ ನೆಗೆಟಿವ್‌ ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರ ಬೇಕೆಂದು ಕೇಳುತ್ತಿರುವುದರಿಂದ ಯುವಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಭಾರತಕ್ಕೆ ಮರಳಲು ಸೋಮವಾರ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್‌ನಲ್ಲಿ ಕುಳಿತಿದ್ದ ಯುವಕರನ್ನು ಭಾರತ ಸರಕಾರಕ್ಕೆ ಕೊರೊನಾ ನೆಗೆಟಿವ್‌ ಎಂದು ಸಾಬೀತುಪಡಿಸುವ ದೃಢಪತ್ರ ಬೇಕೆಂಬ ಕಾರಣಕ್ಕೆ ಮತ್ತೆ ಹಿಂದೆ ಕರೆಸಲಾಗಿದೆ. ಯುಎಸ್‌ಎಯಲ್ಲಿ ತಪಾಸಣೆ ಮಾಡಲಾಗುತ್ತಿದೆ, ಇಂತಹ ಪ್ರಮಾಣಪತ್ರ ನೀಡುವುದಿಲ್ಲ ಎಂದು ಯುಎಸ್‌ಎ ಸರಕಾರ ಹೇಳಿದೆ. ಆದರೆ ಭಾರತ ಸರಕಾರ ಪ್ರಮಾಣಪತ್ರ ಬೇಕೆಂದು ಕೇಳುತ್ತಿರುವುದರಿಂದ ನಾವು ಸಂಕಷ್ಟಕ್ಕೊಳಗಾಗಿದ್ದೇವೆ. ಭಾರತಕ್ಕೆ ಬರುವ ಬಗ್ಗೆ ದಾರಿ ತಿಳಿಯುತ್ತಿಲ್ಲ ಎಂದು ಆಡಿಯೋ ಮತ್ತು ವೀಡಿಯೋ ಮಾಡಿ ಯುವಕರು ಅಲವತ್ತುಕೊಂಡಿದ್ದಾರೆ.

ಶಿಪ್‌ನಲ್ಲಿ ಬಂದಿಯಾಗುತ್ತೇವೆ!
“ನಾವು ಕೆಲಸ ಮಾಡುತ್ತಿರುವ ಹಡಗು ಮಂಗಳವಾರ ಸಂಜೆ ಓಕ್‌ಲ್ಯಾಂಡ್‌ ಬಂದರಿನಿಂದ ಹೊರಟು 70 ಕಿ.ಮೀ. ದೂರದಲ್ಲಿ ಪ್ರತ್ಯೇಕಿಸಿ ನಿಲುಗಡೆ ಮಾಡಲಾಗುತ್ತದೆ. ಈಗ ಈ ಶಿಪ್‌ನಲ್ಲಿದ್ದು, ಶಿಪ್‌ ಹೊರಟ ಮೇಲೆ 14 ದಿನ ಅದರಿಂದ ಹೊರಗಡೆ ಬರದಂತೆ ಬಂದಿ ಮಾಡಲಾಗುತ್ತದೆ. ಆ ನಂತರದಲ್ಲಿ ನಮ್ಮನ್ನು ಸಂಪರ್ಕಿ ಸುವುದಕ್ಕೂ ಕಷ್ಟವಾಗಲಿದೆ. ಹೀಗಾಗಿ ಮಂಗಳವಾರ ಶಿಪ್‌ ಹೊರಡುವು ದರೊಳಗೆ ಭಾರತ ಸರಕಾರವು ಇಲ್ಲಿಂದ ರಕ್ಷಿಸುವುದಕ್ಕೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು’ ಆ ಯುವಕರು ವೀಡಿಯೋದಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸರಕಾರದ ಎಲ್ಲ ಪ್ರತಿನಿಧಿಗಳಿಗೆ ಈ ಬಗ್ಗೆ ವೀಡಿಯೋ, ಆಡಿಯೋ, ಟ್ವೀಟರ್‌ ಸಹಿತ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಾಕಿ ಗಮನಕ್ಕೆ ತಂದಿದ್ದಾರೆ.

ಟಾಪ್ ನ್ಯೂಸ್

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.