ಎಲ್ಲ ದಿನಗಳೂ ಮಹಿಳಾ ದಿನಗಳೇ!


Team Udayavani, Mar 20, 2020, 5:00 AM IST

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಸಾಂದರ್ಭಿಕ ಚಿತ್ರ

ಹೆಣ್ಣನ್ನು ದೇವತೆಯೆಂದು ಪೂಜಿಸುವ ಭಾರತದಲ್ಲಿ ನಿಜ ಅರ್ಥದಲ್ಲಿ ಅವಳನ್ನು ಹಾಗೆ ನಡೆಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ದೇವತೆಯೆಂದು ಪೂಜಿಸಬೇಕು ಎನ್ನುವುದು ಆಶಯವಷ್ಟೇ. ಆ ಆಶಯ ವಾಸ್ತವ ರೂಪದಲ್ಲಿ ಇನ್ನೂ ಗೋಚರಿಸಿಲ್ಲ.

ಇಂದಿಗೂ ಮಹಿಳೆ ಮೇಲೆ ದೌರ್ಜನ್ಯ ನಡೆಯುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಹೆಣ್ಣನ್ನು ವ್ಯವಸ್ಥಿತವಾಗಿ ಗಂಡು ತನಗೆ ಬೇಕಾದಂತೆ ಬಳಸಿಕೊಳ್ಳುವ ಹುನ್ನಾರ ಭದ್ರವಾಗಿಯೇ ಇದೆ. “ಗಂಡು ಶ್ರೇಷ್ಠ’ ಎಂಬ ಪರಿಕಲ್ಪನೆಯು, ಗಂಡಸರ ಆಳುವ ಪರಿಕಲ್ಪನೆಯೇ ಆಗಿದೆ. ಅವಳನ್ನು ಅಸಮರ್ಥಳೆಂದು ಹೇಳುತ್ತ, ಅವಳಲ್ಲಿ ಕೀಳರಿಮೆ ಹುಟ್ಟಿಸಿ ಶೋಷಣೆಗೆ ಗುರಿಪಡಿಸುವುದು ಪುರುಷಪ್ರಧಾನ ವ್ಯವಸ್ಥೆಯ ಮಾದರಿ. ಮಹಿಳೆಯರೂ ಇದನ್ನು ಒಪ್ಪಿಕೊಂಡೇ ಬದುಕುತ್ತಿದ್ದಾರೆ !

ಉದಾಹರಣೆಗೆ ಹೇಳಬೇಕೆಂದರೆ, ಭಾರತದ ಆರ್ಥಿಕ ಕ್ಷೇತ್ರದಲ್ಲಿ ಸಿದ್ಧ ಉಡುಪು ಉದ್ಯಮಕ್ಕೆ ಆದ್ಯತೆ ಇದೆ. ಈ ಉದ್ಯಮಗಳಲ್ಲಿ ಕೆಲಸಮಾಡುವ ಉದ್ಯೋಗಿಗಳಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿ. ಈ ಕಾರಣದಿಂದಲೇ ಈ ಉದ್ಯಮ ಬೆಳೆಯಲು ಹಾಗೂ ಇಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಬಂಡವಾಳಶಾಹಿಗಳು ಉತ್ಸುಕರಾಗಿದ್ದಾರೆ. ವಿಶ್ವವಿಖ್ಯಾತ “ವಾಲ್‌ಮಾರ್ಟ್‌’, “ಟೆಸ್ಕೋ’, “ಮಾರ್ಕ್ಸ್ ಆ್ಯಂಡ್‌ ಸ್ಪೆನ್ಸರ್‌’ ಮುಂತಾದವು ಮುಖ್ಯ ಕಂಪೆನಿಗಳು. ಇಲ್ಲಿ ಮಹಿಳಾ ನೌಕರರಿಗೆ ಕಡಿಮೆ ಸಂಬಳ ನೀಡಿ ಅವರಿಂದ ಹೆಚ್ಚಿನ ಅವಧಿ ತನಕ ದುಡಿಸಿಕೊಳ್ಳುತ್ತಾರೆ ಎಂಬ ವರದಿಗಳನ್ನು ಓದಿದ್ದೇವೆ.

ಮಹಿಳೆಯರು ಪ್ರತಿಭಟಿಸದೇ ಮೌನವಾಗಿ ಮೇಲ್ವಿಚಾರಕರ, ಮ್ಯಾನೇಜರುಗಳ ಆದೇಶಗಳನ್ನು ಪಾಲಿಸುತ್ತಾರೆ ಎಂಬ ಕಾರಣಕ್ಕೆ ಮಹಿಳಾ ಉದ್ಯೋಗಿಗಳನ್ನೇ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅದು ಮೇಲ್ವಿಚಾರಕರು ಮಾಡುವ ಶೋಷಣೆಯೂ ಆಗಿರುತ್ತದೆ. ಒಂದು ಉದಾಹರಣೆ ಹೇಳಬೇಕೆಂದರೆ, 9 ವರ್ಷದಿಂದ ಒಂದು ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕಳೊಬ್ಬಳು ಗರ್ಭಿಣಿಯಾಗಿದ್ದರೂ ಅವಳಿಗೆ ಹೆರಿಗೆ ರಜೆ ಸಿಗಲಿಲ್ಲ. ಹೆರಿಗೆ ನೋವು ಉಂಟಾದರೂ ಆಕೆಗೆ ಮನೆಗೆ ಹೋಗಲು ಬಿಡಲಿಲ್ಲ. ಕೊನೆಗೆ ಕೆಲಸದ ಸ್ಥಳದಲ್ಲಿಯೇ ಮಗು ಹೊರಬಂದು ತೀರಿಹೋಯಿತು. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದರೆ ಸಮಸ್ಯೆ ಸೃಷ್ಟಿಯಾದೀತು ಎಂಬ ಕಾರಣಕ್ಕೆ ಅದನ್ನು ಗುಟ್ಟಾಗಿ ಇರಿಸಲಾಯಿತು. ಇಂಥ ದೌರ್ಜನ್ಯದ ಉದಾಹರಣೆಗಳು ಅನೇಕ ಇವೆ. ಆದರೆ, ಆಡಳಿತ ವರ್ಗ ಈ ಬಗ್ಗೆ ಕಾಳಜಿ ವಹಿಸಿಕೊಳ್ಳುವುದಿಲ್ಲ.

“ಸಮಾನ ಕೆಲಸಕ್ಕೆ ಸಮಾನ ವೇತನ’ ಹೆಚ್ಚಿನ ಉದ್ಯೋಗಸ್ಥ ಮಹಿಳೆಯರಿಗೆ ಸಿಗುವುದಿಲ್ಲ. ಇದು ಭಾರತದ ಕತೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೇ ಕತೆ. ಹಿಂದೆಲ್ಲ ಟೆಕ್ಸ್‌ ಟೈಲ್‌ ಉದ್ಯಮದಲ್ಲಿ ದುಡಿಯುವ ಮಹಿಳೆಯರ ಸ್ಥಿತಿ ಇನ್ನೂ ಹೀನಾಯವಾಗಿತ್ತು. ಮುಖ್ಯವಾಗಿ ಚಿಕಾಗೋ ನಗರದಲ್ಲಿ ದುಡಿಯುವ ಸ್ಥಳದಲ್ಲಿ ಹೀನಾಯ ಪರಿಸ್ಥಿತಿ ಇತ್ತು. 1907ರಲ್ಲಿ ಚಿಕಾಗೋ ನಗರದ ಟೆಕ್ಸ್‌ ಟೈಲ್‌ ಕಾರ್ಖಾನೆಯ 30,000 ಮಹಿಳಾ ನೌಕರರು ಹೆಚ್ಚಿನ ಕೂಲಿಗಾಗಿ ಹಾಗೂ ಉತ್ತಮ ಸೌಕರ್ಯಗಳಿಗಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾದರು.

ಜರ್ಮನಿಯ ಕ್ಲಾರಾ ಜೆಟಕಿನ್‌ ಹಾಗೂ ರಷ್ಯಾದ ಅಲೆಕ್ಸಾಂಡ್ರಾ ಕೊಲಂಕಾಯ ಎಂಬ ಮಹಿಳೆಯರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ನಂತರ 1910ರಲ್ಲಿ ಅಮೆರಿಕದ ಉದ್ದಗಲಕ್ಕೂ ಸಮಾಜವಾದಿಗಳು ಮಹಿಳಾದಿನ ಆಚರಿಸಿ, ಇಡೀ ಪ್ರಪಂಚದಲ್ಲಿ ಒಂದು ನಿರ್ದಿಷ್ಟ ದಿನವನ್ನು “ಮಹಿಳಾ ದಿನ’ವಾಗಿ ಆಚರಿಸಬೇಕೆಂದು ಕರೆ ಇತ್ತರು.

1977ರಲ್ಲಿ ವಿಶ್ವಸಂಸ್ಥೆ ಮಾರ್ಚ್‌ 8ನ್ನು “ಮಹಿಳಾ ದಿನ’ವಾಗಿ ಆಚರಿಸಬೇಕೆಂದು ಘೋಷಿಸಿದ ನಂತರ ಇಂದು ವಿಶ್ವದಾದ್ಯಂತ ಇದನ್ನು ಆಚರಿಸಲಾಗುತ್ತಿದೆ. ಒಟ್ಟಿನಲ್ಲಿ “ಮಹಿಳಾ ದಿನ’ಮಹಿಳೆಯರ ಸಮಸ್ಯೆಗಳ ಬಗ್ಗೆ ಹಾಗೂ ಸಮಾಜದಲ್ಲಿ ಧನಾತ್ಮಕ ಬೆಳವಣಿಗೆ ತರುವುದರ ಬಗ್ಗೆ ಚಿಂತನೆ ನಡೆಸುವುದು ಹಾಗೂ ಶ್ರಮಿಸುವುದು ಗುರಿ ಆಗಬೇಕು. ಮಹಿಳಾವಾದವೆಂಬುದು ಮಹಿಳೆಯರ ಸ್ಥಿತಿಗತಿ ಬದಲಿಸಬೇಕೆಂಬ ಪ್ರಜ್ಞೆಯಿಂದ ಹೊರಟ ಮಹಿಳಾಪರ ಚಳವಳಿಗಳ ಪ್ರತಿಫ‌ಲವಾಗಿದೆ.

ಇತ್ತೀಚೆಗೆ ಮಾರ್ಚ್‌ ತಿಂಗಳಿಡೀ ಮಹಿಳಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪದ್ಧತಿ ಶುರುವಾಗಿದೆ. ಆದರೆ, ಮಹಿಳೆಯರ ಸ್ಥಿತಿಗತಿ ಸುಧಾರಿಸಬೇಕಾದರೆ ಆಕೆ ಕೆಲಸ ಮಾಡುವ ಕಚೇರಿಗಳಲ್ಲಿ ಆಕೆಗೆ ಸಮಾನತೆ, ಗೌರವ ಲಭಿಸಬೇಕು. ಮನೆಯಲ್ಲಿ ಆಕೆಯನ್ನು ಗೌರವದಿಂದ ನಡೆಸಿಕೊಳ್ಳಬೇಕು ಎನ್ನುವ ಶಿಕ್ಷಣ ನೀಡಬೇಕು.

ಕೆ. ತಾರಾ ಭಟ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಬನ್‌-ಪ್ರಿಯೆ

ಬನ್‌-ಪ್ರಿಯೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.