ಜಯರಾಜ್‌ ಬಯೋಪಿಕ್‌ನಲ್ಲಿ ಅಜಿತ್‌

ಅಪ್ಪನ ಕಥೆಯಲ್ಲಿ ಮಗನ ನಟನೆ

Team Udayavani, Mar 20, 2020, 10:42 AM IST

ಜಯರಾಜ್‌ ಬಯೋಪಿಕ್‌ನಲ್ಲಿ  ಅಜಿತ್‌

ನನ್ನ ತಂದೆಯನ್ನು ನಾನು ನೋಡಿಲ್ಲ. ಅಪ್ಪ ತೀರಿದಾಗ ನನಗೆ ಎಂಟು ತಿಂಗಳು. ಅಪ್ಪನ ಬಗ್ಗೆ ನಾನು ಬೇರೆಯವರಿಂದ ಕೇಳಿದ್ದೇ ಹೆಚ್ಚು. ಬಹುತೇಕ ನಿರ್ದೇಶಕರು ಬಂದು ನಮ್ಮ ತಂದೆಯ ಬಯೋಪಿಕ್‌ ಮಾಡಬೇಕು ಅನ್ನುತ್ತಿದ್ದರು…

“ಒಂದು ವೇಳೆ ನಾನು ಇಲ್ಲಿಗೆ ಬರದೇ ಹೋಗಿದ್ದರೆ, ಪ್ರಶ್ನೆಯಾಗಿಯೇ ಉಳಿಯುತ್ತಿದ್ದೆನೇನೋ? ಒಳ್ಳೆಯ ಕ್ರಿಕೆಟರ್‌ ಆಗಬೇಕು ಅಂದುಕೊಂಡಿದ್ದೆ. ಆದರೆ, ಸಿನಿಮಾ ಮೇಲಿನ ಒಲವು ಹೆಚ್ಚಾಯ್ತು. ಇಲ್ಲೇ ಏನಾದರೂ ಪ್ರೂವ್‌ ಮಾಡಬೇಕು ಅಂತ ಬಂದಿದ್ದೇನೆ…

– ಇದು ಹೊಸ ಪ್ರತಿಭೆ ಅಜಿತ್‌ ಮಾತು. ಅಷ್ಟಕ್ಕೂ ಯಾರು ಈ ಅಜಿತ್‌? ಈ ಪ್ರಶ್ನೆ ಸಹಜ. ಒಂದು ಕಾಲದಲ್ಲಿ ಭೂಗತ ಲೋಕದಲ್ಲಿ ಹೆಸರು ಮಾಡಿದ್ದ ಜಯರಾಜ್‌ ಪುತ್ರನೇ ಈ ಅಜಿತ್‌. ಹೌದು, ಅಜಿತ್‌ ಜಯರಾಜ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿ ವರ್ಷವೇ ಕಳೆದಿದೆ. ಇದುವರೆಗೂ ಅಜಿತ್‌ ಜಯರಾಜ್‌ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರು ಹೀರೋ ಇರುವ ಚಿತ್ರಗಳಲ್ಲೇ ನಟಿಸಿದ್ದ ಅವರೀಗ ಫ‌ುಲ್‌ಫ್ಲೆಡ್ಜ್ ಹೀರೋ ಆಗುತ್ತಿದ್ದಾರೆ ಅನ್ನೋದು ವಿಶೇಷ. ಅದರಲ್ಲೂ ಅವರ ತಂದೆಯ ಬಯೋಪಿಕ್‌ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ಹೊಸ ಸುದ್ದಿ.

ಅಜಿತ್‌ ಅವರ ತಂದೆ ಜಯರಾಜ್‌ ಅವರ ಬಯೋಪಿಕ್‌ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗೆ ನೋಡಿದರೆ, ಅಜಿತ್‌ ಅವರಿಗೆ ಈ ಹಿಂದೆಯೇ, ಅವರ ತಂದೆಯ ಬಯೋಪಿಕ್‌ನಲ್ಲಿ ನಟಿಸುವ ಅವಕಾಶ ಬಂದಿತ್ತಂತೆ. ಆ ಕುರಿತು ಹೇಳುವ ಅವರು, “ನನ್ನ ತಂದೆಯನ್ನು ನಾನು ನೋಡಿಲ್ಲ. ಅಪ್ಪ ತೀರಿದಾಗ ನನಗೆ ಎಂಟು ತಿಂಗಳು. ಅಪ್ಪನ ಬಗ್ಗೆ ನಾನು ಬೇರೆಯವರಿಂದ ಕೇಳಿದ್ದೇ ಹೆಚ್ಚು. ಬಹುತೇಕ ನಿರ್ದೇಶಕರು ಬಂದು ನಮ್ಮ ತಂದೆಯ ಬಯೋಪಿಕ್‌ ಮಾಡಬೇಕು ಅನ್ನುತ್ತಿದ್ದರು. ನನಗೆ ಅವರ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಆದರೆ, “ಅಗ್ನಿ’ ಶ್ರೀಧರ್‌ ಅಂಕಲ್‌ ನನ್ನ ಜೊತೆಗಿದ್ದರು. ನಮ್ಮ ಫ್ಯಾಮಿಲಿಗೂ ಗೊತ್ತಿದ್ದವರು. ಅವರು ತಂದೆ ಜಯರಾಜ್‌ ಅವರ ಬಯೋಪಿಕ್‌ ಮಾಡ್ತೀನಿ ಅಂದಾಗ, ನಾನು ಬೇರೇನೂ ಮಾತಾಡಲೇ ಇಲ್ಲ. ಅವರಿಗೆ ನಮ್ಮ ತಂದೆ ಬಗ್ಗೆ ಗೊತ್ತು. ಶ್ರೀಧರ್‌ ಅಂಕಲ್‌ “ನಿನಗೊಂದು ಸರ್‌ಪ್ರೈಸ್‌ ಕೊಡ್ತೀನಿ’ ಅಂತ ಹೇಳಿದ್ದರು. ತಂದೆಯ ಬಯೋಪಿಕ್‌ ಶುರು ಮಾಡಿ, “ಈ ಚಿತ್ರದಲ್ಲಿ ನೀನು ಪ್ರಮುಖ ಪಾತ್ರ ಮಾಡುತ್ತಿದ್ದೀಯಾ’ ಅಂದಾಗಲೇ ಖುಷಿಯಾಯ್ತು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಅಜಿತ್‌.

ಸದ್ಯ ಅಜಿತ್‌ ಆರು ಚಿತ್ರಗಳನ್ನು ಮುಗಿಸಿದ್ದಾರೆ. ಈ ಬಗ್ಗೆ ಮಾತನಾಡುವ ಅಜಿತ್‌, “ಎಂಟು ಕಥೆ ಕೇಳಿದ್ದೇನೆ. ಯಾವುದನ್ನೂ ಆಯ್ಕೆ ಮಾಡಿಲ್ಲ. ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮೇ ತಿಂಗಳಲ್ಲಿ ಹೊಸದೊಂದು ಚಿತ್ರ ಶುರುವಾಗಲಿದೆ. ಇನ್ನು, ನನಗೆ ಸುದೀಪ್‌ ಸರ್‌ ಬ್ಯಾಕ್‌ಬೋನ್‌. ಅವರು ನನ್ನ ಅಣ್ಣನಂತೆ. ನಾನು ಸಿನಿಮಾ ರಂಗಕ್ಕೆ ಬರುವ ಆಸೆ ವ್ಯಕ್ತಪಡಿಸಿದಾಗ, “ಒಳ್ಳೆಯ ಆಯ್ಕೆ’ ಮುಂದುವರೆಸು ಅಂತ ಸಪೋರ್ಟ್‌ ಮಾಡುತ್ತಿದ್ದಾರೆ’ ಎನ್ನುತ್ತಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

ಇಂದಿನಿಂದ ತೆರೆಯಲ್ಲಿ ಅನ್ನ ಪ್ರಸಾದ

Anna Movie; ಇಂದಿನಿಂದ ತೆರೆಯಲ್ಲಿ ‘ಅನ್ನ’ ಪ್ರಸಾದ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.