ಶೈನ್‌ ಶೆಟ್ಟಿ ಹಿರಿ ಕನಸು

ಮತ್ತೆ ಕಿರುತೆರೆಗೆ ಹೋಗಲ್ಲ, ಸಿನಿಮಾವೇ ನನ್ನ ಆದ್ಯತೆ

Team Udayavani, Mar 20, 2020, 10:45 AM IST

ಶೈನ್‌ ಶೆಟ್ಟಿ ಹಿರಿ ಕನಸು

ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ ಖಂಡಿತ ಅವುಗಳನ್ನು ಸಿನಿಮಾ ಮಾಡಲು ಯೋಚನೆ ಮಾಡುತ್ತೇನೆ.

ಇತ್ತೀಚೆಗಷ್ಟೆ ಬಿಗ್‌ಬಾಸ್‌ ಮನೆಯಿಂದ ವಿಜೇತರಾಗಿ ಹೊರಬಂದಿರುವ ಶೈನ್‌ ಶೆಟ್ಟಿ ಸದ್ಯ ಹೊಸ ಜೋಶ್‌ನಲ್ಲಿ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಯಾಗಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಶೈನ್‌ ಶೆಟ್ಟಿ ನಾಯಕ ನಟನಾಗಿ ಎರಡು ಚಿತ್ರಗಳಲ್ಲಿ ಅಭಿನಯಿಸಲು ರೆಡಿಯಾಗಿದ್ದು, ಆ ಚಿತ್ರಗಳ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಆ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಹೋರಬೀಳುವ ಸಾಧ್ಯತೆ ಇದೆ. ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಶೈನ್‌ ಶೆಟ್ಟಿ ತಮ್ಮ ಮುಂದಿನ ಸಿನಿ ನಡೆಯ ಕುರಿತು ಒಂದಷ್ಟು ಮಾತನಾಡಿದ್ದಾರೆ.

“ಬಿಗ್‌ಬಾಸ್‌ ಮನೆಯಿಂದ ಗೆದ್ದು ಹೊರಬಂದ ಮೇಲೆ ಸಹಜವಾಗಿಯೇ ಒಂದಷ್ಟು ಸಿನಿಮಾಗಳ ಆಫ‌ರ್ ಬರುತ್ತಿರುವುದೇನೋ ನಿಜ. ಆದ್ರೆ ಹಾಗೆ ಬಂದ ಎಲ್ಲ ಆಫ‌ರ್‌ಗಳನ್ನು ಏಕಾಏಕಿ ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಎರಡು ಒಳ್ಳೆಯ ಸಬೆjಕ್ಟ್‌ನ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಆ ಸಿನಿಮಾಗಳ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಇದೇ ಮಾರ್ಚ್‌ನಲ್ಲೇ ಆ ಸಿನಿಮಾ ಶುರುವಾಗಬೇಕಿತ್ತು. ಆದ್ರೆ ಈಗ ಎಲ್ಲಾ ಕಡೆ ಕೊರೊನಾ ಭಯ ಇರುವುದರಿಂದ ಸ್ವಲ್ಪ ಕಾಲ ಎಲ್ಲವನ್ನೂ ಪೋಸ್ಟ್‌ಪೋನ್‌ ಮಾಡಲಾಗಿದೆ. ಆದಷ್ಟು ಬೇಗ ಆ ಸಿನಿಮಾಗಳ ಟೈಟಲ್‌, ನನ್ನ ಕ್ಯಾರೆಕ್ಟರ್‌ ಎಲ್ಲವನ್ನೂ ರಿವೀಲ್‌ ಮಾಡುತ್ತೇವೆ’ ಎನ್ನುತ್ತಾರೆ ಶೈನ್‌ ಶೆಟ್ಟಿ.

ಇನ್ನು ಶೈನ್‌ ಶೆಟ್ಟಿಗೆ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಿಗಿಂತ ಕಂಟೆಂಟ್‌ ಆಧರಿತ ಚಿತ್ರಗಳ ಕಡೆಗೆ ಹೆಚ್ಚಿನ ಒಲವಿದೆಯಂತೆ. ಈ ಬಗ್ಗೆ ಅವರೇ ಹೇಳು ವಂತೆ, “ನನಗೆ ಎಲ್ಲರೂ ಮಾಡುವಂಥ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳು, ಅಂಥ ಪಾತ್ರಗಳನ್ನು ಮಾಡುವುದರಲ್ಲಿ ಆಸಕ್ತಿಯಿಲ್ಲ. ಆದಷ್ಟು ಕಂಟೆಂಟ್‌ ಆಧಾರಿತ, ರಿಯಾಲಿಸ್ಟಿಕ್‌ ಸಬ್ಜೆಕ್ಟ್ ಆಧಾರಿತ ಸಿನಿಮಾಗಳನ್ನು ಮಾಡಬೇಕು. ಅಂಥ ಸಿನಿಮಾಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿದೆ. ಅದರಲ್ಲೂ ಬಯೋಪಿಕ್‌ ಮಾಡಲು ತುಂಬಾನೇ ಆಸೆ ಇದೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಮಾಡ್ತೀನಿ’ ಎನ್ನುತ್ತಾರೆ.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮೂಲಕವೇ ಪ್ರಸಿದ್ದಿ ಪಡೆದ ಶೈನ್‌ ಶೆಟ್ಟಿ ಮತ್ತೆ ಕಿರುತೆರೆ ಕಡೆಗೆ ಹೋಗುತ್ತಾರಾ ಎಂಬ ಪ್ರಶ್ನೆಗೆ ಅವರಿಂದ “ಇಲ್ಲ’ ಎನ್ನುವ ಉತ್ತರ ಬರುತ್ತದೆ. “ನಾನು ಸಂಪೂರ್ಣವಾಗಿ ಸಿನಿಮಾ ಕಡೆಗೆ ಬರಬೇಕು ಎನ್ನುವ ಉದ್ದೇಶದಿಂದಲೇ ಸೀರಿಯಲ್‌ನಿಂದ ಹೊರಬಂದೆ. ಕಿರುತೆರೆ ನನಗೆ ಸಾಕಷ್ಟು ಹೆಸರು, ಜನಪ್ರಿಯತೆ ಎಲ್ಲ ತಂದು ಕೊಟ್ಟಿದ್ದರೂ, ಮತ್ತೆ ಕಿರುತೆರೆಗೆ ಹೋಗುವ ಯಾವುದೇ ಯೋಚನೆಯಿಲ್ಲ. ಸದ್ಯಕ್ಕೆ ನನ್ನ ಗಮನ ಏನಿದ್ದರೂ ಸಿನಿಮಾದ ಕಡೆಗೆ’ ಎನ್ನುತ್ತಾರೆ ಶೈನ್‌ ಶೆಟ್ಟಿ.

ಸದ್ಯ ಶೈನ್‌ ಶೆಟ್ಟಿ ತಾವು ಒಪ್ಪಿಕೊಂಡಿರುವ ಎರಡು ಚಿತ್ರ ಗಳನ್ನು ಶುರು ಮಾಡುವುದಕ್ಕೂ ಮೊದಲು, “ದೂಂಡಾ’ ಎನ್ನುವ ಮ್ಯೂಸಿಕ್‌ ಆಲ್ಬಂ ಒಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಡ್ಯಾನಿಯಲ್‌ ಮತ್ತು ಸುಹಿತ್‌ ಬಂಗೇರ ಸಂಗೀತ ಸಂಯೋಜಿಸಿ, ನಿರ್ಮಿಸುತ್ತಿರುವ ಈ ಮ್ಯೂಸಿಕ್‌ ಆಲ್ಬಂನಲ್ಲಿ ಶೈನ್‌ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬೆನ್ನಿ ದಯಾಳ್‌ ಈ ಮ್ಯೂಸಿಕ್‌ ಆಲ್ಬಂನ ಗೀತೆಗೆ ಧ್ವನಿಯಾಗಿದ್ದು, ನಾರ್ಥ್-ಈಸ್ಟ್‌ ರಾಜ್ಯದ ಬುಡಕಟ್ಟು ಜನರ ಮೋಡಿ ವಿದ್ಯೆಯ ಕುರಿತಾಗಿ ಮೂಡಿಬರುತ್ತಿರುವ “ದೂಂಡಾ’ ಮ್ಯೂಸಿಕ್‌ ಆಲ್ಬಂನ ಬಹುತೇಕ ಚಿತ್ರೀಕರಣ ನಾರ್ಥ್-ಈಸ್ಟ್‌ ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲೆ ನಡೆಯಲಿದೆಯಂತೆ.

“ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರುವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ ಖಂಡಿತ ಮಾಡಲು ಯೋಚನೆ ಮಾಡುತ್ತೇನೆ. ಸದ್ಯಕ್ಕಂತೂ ಈಗ ಒಪ್ಪಿಕೊಂಡಿರುವ ಎರಡು ಸಿನಿಮಾಗಳನ್ನು ಮುಗಿಸುವುದರ ಕಡೆಗೆ ನನ್ನ ಗಮನ’ ಎನ್ನುತ್ತಾರೆ ಶೈನ್‌ ಶೆಟ್ಟಿ.

ಜಿ.ಎಸ್‌.ಕಾರ್ತಿಕ್‌ ಸುಧನ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

ಇಂದಿನಿಂದ ತೆರೆಯಲ್ಲಿ ಅನ್ನ ಪ್ರಸಾದ

Anna Movie; ಇಂದಿನಿಂದ ತೆರೆಯಲ್ಲಿ ‘ಅನ್ನ’ ಪ್ರಸಾದ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.