ಲಿಂಗಾಪುರ-ತಿಮ್ಮಸಾಗರ ಜನರಿಗಿಲ್ಲ ನೀರು


Team Udayavani, Mar 20, 2020, 4:34 PM IST

ಲಿಂಗಾಪುರ-ತಿಮ್ಮಸಾಗರ ಜನರಿಗಿಲ್ಲ ನೀರು

ಸಾಂದರ್ಭಿಕ ಚಿತ್ರ

ಗುಳೇದಗುಡ್ಡ: ಗ್ರಾಮದಲ್ಲಿ ಕಳೆದ ಏಳೆಂಟು ತಿಂಗಳಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯಲು ಜಂಗುಗೊಂಡ ನೀರೇ ಜನರಿಗೆ ಗತಿಯಾಗಿದ್ದು, ನಿತ್ಯವೂ ಶುದ್ಧ ಕುಡಿಯುವ ನೀರಿನ ಘಟಕದ ವೇಸ್ಟ್‌ ನೀರನ್ನು ದಿನಬಳಕೆಗೆ ಬಳಸುವಂತಾಗಿದೆ.

ಕೆಲವಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಲಿಂಗಾಪುರ ಗ್ರಾಮದ ಸದ್ಯದ ಸ್ಥಿತಿ.ಗ್ರಾಮದಲ್ಲಿ ಅಂದಾಜು 3 ಸಾವಿರ ಜನರಿದ್ದು, 450 ಕ್ಕೂ ಹೆಚ್ಚು ಮನೆಗಳಿವೆ. ಆದರೆ ಇಲ್ಲಿ ಹೇಳಿಕೊಳ್ಳುವಷ್ಟು ನೀರಿನ ಸೌಲಭ್ಯವಿಲ್ಲ. ಬಾವಿ ಇದ್ದರೂ ಕುಡಿಯುವ ನೀರಿಲ್ಲ.

ಅರ್ಧ ಇಂಚು ನೀರು: ಗ್ರಾಮದ ಜನರಿಗೆ ನೀರು ಪೂರೈಸುವ ಸಲುವಾಗಿ 6-7 ಕೊಳವೆ ಬಾವಿ ಕೊರೆಸಲಾಗಿತ್ತು. ಆದರೆ, ಅದರಲ್ಲಿ ಎರಡು ಮಾತ್ರ ನೀರು ಬಿದ್ದಿದ್ದು, ಅವು ಕೂಡಾ ತಲಾ ಅರ್ಧ ಇಂಚಿನಷ್ಟು ಮಾತ್ರ ನೀರು ಕೊಡುತ್ತವೆ. ಇದರಿಂದ ಲಭ್ಯವಿರುವ ನೀರಿನಲ್ಲಿಯೇ ಗ್ರಾಮ ಪಂಚಾಯಿತಿಯು ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದೆ. ಗ್ರಾಮದಲ್ಲಿ ಮೂರು ವರ್ಷಗಳಿಂದ ನೀರಿನ ಸಮಸ್ಯೆಯಿದೆ. ಆದರೆ, ಯಾರೊಬ್ಬರು ಗಮನಹರಿಸುತ್ತಿಲ್ಲ.

ವೇಸ್ಟ್‌ ನೀರು: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಆ ಘಟಕದಿಂದ ಫಿಲ್ಟರ್‌ ಆಗಿ ಬಂದ ನಂತರ ಬರುವ ವೇಸ್ಟ್‌ ನೀರನ್ನು ಸಹ ಜನರು ತುಂಬಿಕೊಳ್ಳುತ್ತಿದ್ದಾರೆ. ನೀರಿನ ಸಮಸ್ಯೆ ಇರುವುದರಿಂದ ಶುದ್ಧೀಕರಣ ಘಟಕದ ವೇಸ್ಟ್‌ ನೀರನ್ನು ಸಹ ಅನಿವಾರ್ಯವಾಗಿ ಜನರು ದಿನಬಳಕೆಗೆ ಬಳಸುವಂತಾಗಿದೆ.

ತಿಮ್ಮಸಾಗರದಲ್ಲಿಯೂ ಇದೇ ಗೋಳು: ತಿಮ್ಮಸಾಗರ ಗ್ರಾಮದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ಗ್ರಾಮದಲ್ಲಿಯು ಸಹ ಜನರಿಗೆ ನಿತ್ಯ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ನಿತ್ಯ ಕುಡಿಯುವ ನೀರು ತರಲು ಅರ್ಧ ಕಿ.ಮೀ ದೂರದ ಬಾವಿಯಿಂದ ತರಬೇಕು. ಇನ್ನೂ ಕೊಳವೆಬಾವಿ ನೀರೆ ಜನರಿಗೆ ಆಸರೆಯಾಗಿದ್ದು, ಕೈ ಕೊಟ್ಟರೇ ದೇವರೆ ಗತಿ ಈ ಜನರಿಗೆ. ತಿಮ್ಮಸಾಗರ ಗ್ರಾಮದಲ್ಲಿ ಸುಮಾರು 2 ಸಾವಿರದಷ್ಟು ಜನರಿದ್ದು, 400ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮದಲ್ಲಿ ಎರಡು ಕೊಳವೆಬಾವಿಗಳಿವೆ. ಆದರೆ ಅವುಗಳ ಪೈಪ್‌ ಗಳು ಕುಸಿದ್ದು ಬಿದ್ದಿವೆ. ಅಲ್ಲದೇ ಎರಡು ಬಾವಿಗಳಿದ್ದು, ಒಂದು ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿದ್ದರೆ, ಇನ್ನೊಂದು ಗ್ರಾಮದ ಮುಂಭಾಗದಲ್ಲಿದೆ. ಆದರೆ ಅದು ಇದ್ದು ಇಲ್ಲದಂತಾಗಿದೆ. ಈ ಬಾವಿ ನೀರನ್ನು ಕೇವಲ ದಿನಬಳಕೆ ಉಪಯೋಗಿಸುವಂತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಜನರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ಇನ್ನೂ ಶೌಚಾಲಯಕ್ಕೆ ಎಲ್ಲಿಂದ ನೀರು ತರಬೇಕು ಎಂಬುದು ಗ್ರಾಮಸ್ಥರ ಅಳಲು.

ಸಮಸ್ಯೆ ಬಗೆಹರಿದರೆ ಶಾಶ್ವತ ಪರಿಹಾರ: ಕೆಲವಡಿ ಪಂಚಾಯತ ವ್ಯಾಪ್ತಿಯಲ್ಲಿನ ಕೆಲವಡಿ, ಲಿಂಗಾಪುರ, ತಿಮ್ಮಸಾಗರ ಗುಳೇದಗುಡ್ಡ ರೇಲ್ವೆ ಸ್ಟೇಶನ್‌ ಈ ನಾಲ್ಕು ಗ್ರಾಮಗಳಿಗೆ ಅನಗವಾಡಿಯ ಘಟಪ್ರಭಾ ನದಿಗೆ ಪೈಪ್‌ ಲೈನ್‌ ಮಾಡಿ ಅಲ್ಲಿಂದ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಅನಗವಾಡಿ ಬ್ಯಾರೇಜ್‌ನಲ್ಲಿ ಹಾಕಲಾಗಿದ್ದ ಪೈಪ್‌, ಮೋಟಾರ್‌ ಸುಟ್ಟಿದ್ದು, ಇದರಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ಆ ಪೈಪ್‌ಲೈನ್‌ ದುರಸ್ತಿಗೊಂಡರೇ ಈ ನಾಲ್ಕು ಗ್ರಾಮಗಳಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಯಲಿದೆ.

ಗ್ರಾಮಕ್ಕೆ ಅನಗವಾಡಿಯಿಂದ ನೀರು ಪೂರೈಸಲು ಯೋಜನೆ ಮಾಡಲಾಗಿದೆ. ಆದರೆ ಕಳೆದ ವರ್ಷದ ಪ್ರವಾಹದಿಂದ ಪೈಪ್‌ ಹಾಳಾಗಿದ್ದು, ಆದ್ದರಿಂದ ಇಷ್ಟೇಲ್ಲ ಸಮಸ್ಯೆಯಾಗುತ್ತಿದೆ. ಅನಗವಾಡಿಯಿಂದ ನೀರು ಪೂರೈಸಿ ಸಂಗ್ರಹಿಸಲು ಈಗಾಗಲೇ ಟ್ಯಾಂಕ್‌ ಕೂಡಾ ನಿರ್ಮಾಣವಾಗುತ್ತಿದೆ. 15 ದಿನಗಳಲ್ಲಿ ಲಿಂಗಾಪುರ, ತಿಮ್ಮಸಾಗರ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಈ ವಾರದಲ್ಲಿ ಬಾದಾಮಿ ತಾಲೂಕಿನ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಟೆಂಡರ್‌ ಆಹ್ವಾನಿಸಲಾಗುವುದು. ಆ ನಂತರವೇ ಗ್ರಾಮಗಳಿಗೆ ಟ್ಯಾಕರ್‌ ಮೂಲಕ ನೀರು ಪೂರೈಸಲಾಗುವುದು. ಖಾಸಗಿ ಒಡೆತನದ ಬೊರವೆಲ್‌ಗ‌ಳಿಂದ ನೀರು ಪಡೆದು ಜನರಿಗೆ ನೀರು ಕೊಡಿ. ಒಪ್ಪದಿದ್ದರೇ ಸ್ವಾಧೀನಪಡಿಸಿಕೊಂಡು ಜನರಿಗೆ ನೀರು ಕೊಡಿಸುವ ವ್ಯವಸ್ಥೆ ಮಾಡುವೆ.-ಸುಹಾಸ್‌ ಇಂಗಳೆ, ತಹಶೀಲ್ದಾರ್‌

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.