ರೇಷ್ಮೆ ಗೂಡು ಮಾರುಕಟ್ಟೆ ಎಷ್ಟು ಸುರಕ್ಷಿತ?


Team Udayavani, Mar 21, 2020, 5:51 PM IST

rn-tdy-1

ರಾಮನಗರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯ ಸಾವಿರಾರು ಮಂದಿ ಸೇರುವ ಸ್ಥಳವಾಗಿದ್ದು , ಕೋವಿಡ್ 19 ವೈರಸ್‌ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳಿದ್ದು, ರೈತರಿಗೆ ಇದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರೀಕ ವಲಯದಲ್ಲಿ ವ್ಯಕ್ತವಾಗಿದೆ.

ದಿನನಿತ್ಯ ಈ ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆಹೊರೆಯ ರಾಜ್ಯಗಳಿಂದಲೂ ರೇಷ್ಮೆ ಕೃಷಿಕರು ಗೂಡು ಮಾರಲು ಬರುತ್ತಾರೆ. ಗೂಡು ಖರೀದಿಸಲು ರೀಲರ್‌ಗಳು ಸಂಖ್ಯೆಯೂ ಕಡಿಮೆ ಏನಿಲ್ಲ. ಹೀಗಾಗಿ ಇಲ್ಲಿ ನಿತ್ಯ ಸಾವಿರಾರು ಮಂದಿ ಸೇರುವ ತಾಣವಾಗಿದೆ. ಜಿಲ್ಲಾಡಳಿತ ಮತ್ತು ಮಾರುಕಟ್ಟೆಯ ಅಧಿಕಾರಿಗಳು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜಿಕರು ಆಗ್ರಹಿಸಿದ್ದಾರೆ.

ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ವ್ಯಕ್ತಿಗಳ ನಡುವೆ ಕನಿಷ್ಠ 2 ಮೀಟರ್‌ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚಿಸುತ್ತಲೇ ಇದೆ. ಆದರೆ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಈ ವ್ಯವಸ್ಥೆ ಕಷ್ಟ ಸಾಧ್ಯ. ಮೇಲಾಗಿ ರೇಷ್ಮೆ ಕೃಷಿಕರು ಅಕ್ಷರ ಕಲಿತವರಲ್ಲ. ಇಲ್ಲಿ ಬಹುತೇಕರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವಿಲ್ಲ. ದೂರದ ಊರುಗಳಿಂದ ಸಾರ್ವಜನಿಕರ ವ್ಯವಸ್ಥೆಯಲ್ಲೇ ಇಲ್ಲಿಗೆ ಬರುತ್ತಾರೆ. ಇಲ್ಲಿ ತಂಗಲು ವಿಶೇಷ ವ್ಯವಸ್ಥೆ ಇಲ್ಲ. ಶೌಚಾಲಯ ಹೊರತುಪಡಿಸಿ ಸ್ನಾನ ಮಾಡಲು ಅವಕಾಶವಿಲ್ಲ. ಹೀಗಾಗಿ ವೈಯಕ್ತಿಕ  ಸ್ವಚ್ಛತೆ ಇಲ್ಲಿ ಮರೀಚಿಕೆ.

ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ: ರೇಷ್ಮೆ ಗೂಡು ಹರಾಜು ಬೆಳಗ್ಗೆ ಮುಗಿದರೂ, ರೈತರು ಸಂಜೆವರೆಗೆ ಕೆಲವೊಮ್ಮೆ ಎರಡು ಮೂರು ದಿನಗಳವರೆಗೂ ಹರಾಜು ಮೊತ್ತವನ್ನು ಪಡೆಯಲು ಕಾಯಬೇಕಾಗುತ್ತದೆ. ಇಲ್ಲಿ ರೈತರು ತಂಗುವ ವ್ಯವಸ್ಥೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಅವರ ಆರೋಗ್ಯ ಹತ್ತಾರು ಬಗೆಯಲ್ಲಿ ಕೆಡುವ ಸಾಧ್ಯತೆ ಇದ್ದು, ಇವರ ರಕ್ಷಣೆಗೆ ಸ್ಥಳೀಯ ಆಡಳಿತ ಮತ್ತು ಗೂಡು ಮಾರುಕಟ್ಟೆಯ ಅಧಿಕಾರಿಗಳೇ ನಿರ್ವಹಿಸ ಬೇಕಾಗಿದೆ. ಆದರೆ ದುರಾದೃಷ್ಠವಶಾತ್‌ ಈ ವಿಚಾರದಲ್ಲಿ ಈ ಅಧಿಕಾರಿಗಳು ಸ್ವತಂತ್ರವಾಗಿ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಇಲ್ಲ. ಎಲ್ಲದಕ್ಕೂ ಸರ್ಕಾರದ ಅನುಮತಿಯೇ ಬೇಕಾಗಿದೆ. ಈ ವಿಚಾರಗಳು ಸ್ಥಳೀಯ ಘಟಾನುಘಟಿ ರಾಜಕೀಯ ನಾಯಕರಿಗೆಗೊತ್ತಿದ್ದರೂ, ಯಾವುದೊಂದು ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ.

ಮಾರುಕಟ್ಟೆ ಮುಚ್ಚಿದರೆ? : ರೇಷ್ಮೆ ಕೃಷಿ ಮತ್ತು ರೀಲಿಂಗ್‌ ಉದ್ಯಮ ಜಿಲ್ಲೆಯ ಆರ್ಥಿ ಕತೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಉದ್ಯಮ. ಹಾಗೊಮ್ಮೆ ರೇಷ್ಮೆ ಗೂಡು ಮಾರುಕಟ್ಟೆಯನ್ನು ಮುಚ್ಚಿಬಿಟ್ಟರೆ ಜಿಲ್ಲೆಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿ ಜನಜೀವನ ಅಸ್ತ್ಯವ್ಯಸ್ತವಾಗುವುದು ನಿಸ್ಸಂಶಯ. ಕಳೆದೊಂದು ವಾರದಿಂದ ರೇಷ್ಮೆ ಗೂಡು ದರಗಳು ಕುಸಿಯುತ್ತಿದ್ದು, ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ.

ರೇಷ್ಮೆ ಫಿಲೇಚರ್‌ಗಳು ಸುರಕ್ಷಿತವಲ್ಲ! :  ಕೋವಿಡ್ 19  ವೈರಸ್‌ ಸೋಂಕು ಮಾನವ ದೇಹದ ಉಸಿರಾಟದ ವ್ಯವಸ್ಥೆಯನ್ನೇ ಹಾಳಗೆಡುವ ಮಹಾಮಾರಿ. ರೇಷ್ಮೆ ಗೂಡಿನಿಂದ ನೂಲು ತೆಗೆಯುವ ವೇಳೆ ಉತ್ಪತ್ತಿಯಾಗುವ ಅಲೆರ್ಜನ್‌ಗಳು ( ಅಲರ್ಜಿ ಉಂಟು ಮಾಡುವ ವೈರಾಣು) ಕೆಮ್ಮು, ಆಸ್ತಮಾಗಳಿಗೆ ಕಾರಣವಾಗುವುದು ಹೊಸ ವಿಚಾರವೇನಲ್ಲ. ಆಕಸ್ಮಿಕವಾಗಿ ಈ ಶ್ರಮಿಕ ಕಾರ್ಮಿಕ ವರ್ಗಕ್ಕೆ ಸೋಂಕು ತಗುಲಿದರೆ ದೇಹದ ಮೇಲಾಗುವ ಪರಿಣಾಮ ಘೋರ.

 

- ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

BY Election: ಚನ್ನಪಟ್ಟಣ ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna: ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna ಗರಿಗೆದರಿದ ʼಕೈʼ ಕಸರತ್ತು; ಡಿಕೆ ಸುರೇಶ್‌ ಪರವಾಗಿ ಎಂ.ಸಿ.ಅಶ್ವಥ್ ಚಂಡಿಕಾಯಾಗ

1-yog

Channapatna By Election; ಮೈತ್ರಿ ಅಭ್ಯರ್ಥಿ ನಾನೆ: ಸಿ.ಪಿ.ಯೋಗೇಶ್ವರ್ ವಿಶ್ವಾಸದ ನುಡಿ

1-bb-ele

Channapatna By Election; 3 ಸಾವಿರ ಮಂದಿಗೆ ಸಿದ್ದ ಮಾಡಿದ್ದ ಬಿರಿಯಾನಿ ವಶಕ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.