ಇಟಲಿಯಲ್ಲಿ 80 ವರ್ಷ ಮೆಲ್ಪಟ್ಟವರಿಗೆ ಚಿಕಿತ್ಸೆ ಇಲ್ಲ; ಭೀಕರತೆ ತೆರೆದಿಟ್ಟ ಕೇರಳದ ನರ್ಸ್!


Team Udayavani, Mar 22, 2020, 10:13 PM IST

ಇಟಲಿಯಲ್ಲಿ 50 ವರ್ಷ ಮೆಲ್ಪಟ್ಟವರಿಗೆ ಚಿಕಿತ್ಸೆ ಇಲ್ಲ  

ಸಾಂದರ್ಭಿಕ ಚಿತ್ರ.

ರೋಮ್‌: “80 ವರ್ಷ ಮೇಲ್ಪಟ್ಟ ಕೋವಿಡ್‌ 19 ಸೊಂಕಿತರಿಗೆ ಚಿಕಿತ್ಸೆ ನೀಡುವುದು ಬೇಡ. 80 ವರ್ಷ ಕೆಳಗಿನವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಉಪಚರಿಸಿದರೆ ಸಾಕು’ ಇದು ಇಟಲಿ ಆರೋಗ್ಯ ಇಲಾಖೆ ಅಲ್ಲಿನ ಆಸ್ಪತ್ರೆಗಳಿಗೆ ನೀಡಿರುವ ಸೂಚನೆ. ಇಟಲಿಯಲ್ಲಿ ಕೋವಿಡ್‌ 19 ವೇಗವಾಗಿ ವ್ಯಾಪ್ತಿಸುತ್ತಿದೆ. ಅಪಾರ ಪ್ರಮಾಣದ ಸಾವು ನೋವುಗಳಿಂದ ತತ್ತರಿಸಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೇರಳ ಮೂಲದ ನರ್ಸ್‌ ಒಬ್ಬರು ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಇಟಲಿಯ ಶೇ. 25ರಷ್ಟು ಜನರು 80 ವರ್ಷಗಳಿಗೆ ಮೇಲ್ಪಟ್ಟವರಾಗಿದ್ದಾರೆ. ಆದರೆ ವಯಸ್ಸಿನ ಎಲ್ಲೆ ಇಲ್ಲದೇ ಹರಡಿರುವ ಕೋವಿಡ್‌ 19ಗೆ 80 ವರ್ಷ ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಕೋವಿಡ್‌ 19ಕ್ಕೆ ಸೂಕ್ತವಾದ ಚಿಕಿತ್ಸೆ ಇಲ್ಲದೇ ಇರುವ ಕಾರಣಕ್ಕೆ ಅವರು ಬದುಕುವ ಸಾಧ್ಯತೆ ತುಂಬಾ ಕಡಿಮೆ. ಈ ಕಾರಣಕ್ಕೆ ಯಾರನ್ನು ಆಸ್ಪತ್ರೆಗೆ ಸೇರಿಸಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎಂದು ಅಲ್ಲಿನ ಆಸ್ಪತ್ರೆಯ ವೈದ್ಯರು ನಿರ್ಧರಿಸುತ್ತಿದ್ದಾರೆ. ಹಲವು ದಿನಗಳಿಂದ 80 ವರ್ಷ ಕೆಳಗಿನ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ.

ಮುಖ್ಯವಾಗಿ ಇಟಲಿಯ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ತುಂಬಾ ಕಾಡುತ್ತಿದೆ. ಇದು ಪರೋಕ್ಷವಾಗಿ ಅಲ್ಲಿನ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ. ಅಸೌಖ್ಯಗೊಂಡರೆ ಆಸ್ಪತ್ರೆಯಲ್ಲಿ ದಾಖಲಾಗುವುದು ತುಂಬಾ ಕಷ್ಟ. ಇಂತಹ ಮರಣಶಯ್ಯದ ನಿರೀಕ್ಷೆಯಲ್ಲಿದ್ದ ಇಟಲಿ ಆಸ್ಪತ್ರೆಗಳಲ್ಲಿ ಜಾಗದ ಕೊರತೆ ಸಾವಿನ ಕ್ಷಿಪ್ರ ಏರಿಕೆಗೆ ಕಾರಣವಾಗಿದೆ.

ಐಸಿಯುಗಳು ಭರ್ತಿ
ಬಹುತೇಕ ಆಸ್ಪತ್ರೆಗಳ ಐಸಿಯುಗಳು ಭರ್ತಿಯಾಗಿವೆ. ಆಸ್ಪತ್ರೆಗಳಲ್ಲಿ 240 ಐಸಿಯು ಬೆಡ್‌ಗಳಿದ್ದು, ಸುಮಾರು 2,500 ಮಂದಿ ಅಗತ್ಯವಾಗಿ ಐಸಿಯು ಚಿಕಿತ್ಸೆಯ ಅಗತ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಐಸಿಯುನಲ್ಲಿ ಚಿಕಿತ್ಸೆ ದೊರೆತರೆ ಮಾತ್ರ ಅವರು ಜೀವಿಸುವ ಸಾಧ್ಯತೆ ಹೆಚ್ಚು. ಆದರೆ ಸ್ಥಳಾವಕಾಶದ ಕೊರತೆಯಿಂದ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ.

ಅಲ್ಲಿನ ವಾರ್ಡ್‌ಗಳನ್ನು, ರೋಗಿಗಳ ವೈಟಿಂಗ್‌ ಹಾಲ್‌, ಆಪರೇಶನ್‌ ಥಿಯೇಟರ್‌, ರೆಸ್ಟ್‌ ರೂಮ್‌ಗಳನ್ನು ಐಸಿಯುಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಒಟ್ಟು 240 ಐಸಿಯು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. ಖಾಲಿ ಜಾಗಗಳನ್ನು ಐಸಿಯುಗಳನ್ನಾಗಿ ಪರಿವರ್ತಿಸಲಾಗಿದ್ದರೂ, ಅಗತ್ಯ ಸಂಖ್ಯೆಯಲ್ಲಿ ವೆಂಟಿಲೇಟರ್‌ಗಳು, ಆಕ್ಸಿಜನ್‌ ಸಿಲಿಂಡರ್‌ಗಳು ಇಲ್ಲದೇ ಸಮಸ್ಯೆಯಾಗುತ್ತಿವೆ. ಲಭ್ಯವಿರುವ ಆ್ಯಂಬುಲೆನ್ಸ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲೂ ವೆಂಟಿಲೇಟರ್‌ನ ಸಮಸ್ಯೆ ಕಂಡುಬಂದಿವೆ.

ಕಣ್ಣಮುಂದೆಯೇ ವೆಂಟಿಲೇಟರ್‌ ಬದಲಾವಣೆ
ವೆಂಟಿಲೇಟರ್‌, ಆಕ್ಸಿಜನ್‌ ಸಿಲಿಂಡರ್‌ಗಳ ಸಮಸ್ಯೆಯಿಂದ ನರ್ಸ್‌ಗಳು ತೀವ್ರವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ವೆಂಟಿಲೇಟರ್‌ ತೆಗೆದರೆ ಸಾಯುತ್ತಾನೆ ಎಂಬ ಅರಿವಿದ್ದರೂ, ಒಬ್ಬನಿಂದ ವೆಂಟಿಲೇಟರ್‌ ತೆಗೆದು ಮತ್ತೂಂದು ಬದುಕಬಲ್ಲ ರೋಗಿಗೆ ಅಳವಡಿಸಲಾಗುತ್ತದೆ. ವೆಂಟಿಲೇಟರ್‌ ಪೂರೈಕೆ ನಿಂತ ಬಳಿಕ ಹೆಚ್ಚೆಂದರೆ 30 ನಿಮಿಷದಿಂದ 1 ಗಂಟೆಗಳ ಕಾಲ ಬದುಕಬಲ್ಲರು.

ಎಲ್ಲೆಲ್ಲೂ ಸೋಂಕಿತರೇ
ಕಾರಿಡಾರ್‌ಗಳು, ಆಸ್ಪತ್ರೆಗಳ ಮೆಟ್ಟಿಲುಗಳು, ವಾಹನಗಳನ್ನು ಪಾರ್ಕ್‌ ಮಾಡುವ ಜಾಗಗಳಲ್ಲಿ ಕೋವಿಡ್‌ 19 ರೋಗಿಗಳು ಜೀವನ್ಮರಣದ ವ್ಯವಸ್ಥೆಯಲ್ಲಿ ನರಳಾಡುತ್ತಿದ್ದಾರೆ. ಆಸ್ಪತೆಯಲ್ಲಿ ಸ್ಥಳದ ಅವಕಾಶ ಇಲ್ಲದಿರುವ ಅರಿವಿದ್ದರೂ ಜನ ಮಾತ್ರ ಆಸ್ಪತ್ರೆಯತ್ತ ಮುಖಮಾಡುತ್ತಿರುವುದು ಕಡಿಮೆಯಾಗಿಲ್ಲ.

ಈ ಸ್ಥಿತಿ ಬರದೇ ಇರಲಿ ಎಂದ ಕೇರಳದ ನರ್ಸ್‌
ಇಟಲಿಯ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಕೇರಳ ಮೂಲದ ನರ್ಸ್‌ ಒಬ್ಬರು ಅಲ್ಲಿನ ನರಕಯಾತನೆಯನ್ನು ವಾಟ್ಸ್‌ಆ್ಯಪ್‌ ವಾಯ್ಸ ಮೂಲಕ ಹಂಚಿಕೊಂಡಿದ್ದಾರೆ. ಐಸಿಯು, ವಾರ್ಡ್‌ಗಳಲ್ಲಿ ವೆಂಟಿಲೇಟರ್‌ ಅಳವಡಿಸುವ ಕರ್ತವ್ಯ ಅವರದ್ದು. ಬದುಕುವ ಸಾಧ್ಯತೆ ಕಡಿಮೆ ಇರುವ ಸೋಂಕಿತನಿಂದ ವೆಂಟಿಲೇಟರ್‌ ತೆಗೆಯುವಾಗ ಸೋಂಕಿತ ಸಾವಿನ ಭಯದಲ್ಲಿ ನೋಡುವ ನೋಟ ಯಾರಿಗೂ ಬೇಡ ಎಂದಿದ್ದಾರೆ. ಅಂತಹ ಕಠೊರ ಪರಿಸ್ಥಿತಿ ತಾಯ್ನಾಡಿಗೆ ಬರದೇ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.