![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 22, 2020, 10:34 PM IST
ಬೀಜಿಂಗ್: ಚೀನಾದಲ್ಲಿ ಭಾರೀ ಮರಣಮೃದಂಗ ಬಾರಿಸಿದ್ದ ಕೋವಿಡ್ 19 ಈಗ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳೂ ಇದನ್ನು ವರದಿ ಮಾಡಿವೆ. ಕೋವಿಡ್ 19 ಕೇಂದ್ರವಾಗಿದ್ದ ವುಹಾಬ್ ಪ್ರಾಂತ್ಯ ಜತೆಗೆ ಕೆಲವು ಪ್ರದೇಶಗಳು ಮಾತ್ರ ಸದ್ಯದ ಮಟ್ಟಿಗೆ ನಿರ್ಬಂಧದಲ್ಲಿದೆ. ಬಿಕೋ ಎನ್ನುತ್ತಿದ್ದ ಚೀನಾದ ರಸ್ತೆಗಳಲ್ಲಿ ಜನ ಸಂಚಾರಗಳು ಮತ್ತೆ ಯಥಾಸ್ಥಿತಿಗೆ ಬರುತ್ತಿವೆ. ವಾಹನಗಳು ಬಿಡುಗಡೆ ಮಾಡುವ ಶಬ್ದಗಳು ಇಲ್ಲದೇ ಹಲವು ದಿನಗಳು ಕಳೆದಿದ್ದು ಮತ್ತೆ ವಾಹನಗಳ ಚಕ್ರಗಳು ರಸ್ತೆಯಲ್ಲಿ ಹಚ್ಚೊತ್ತುತ್ತಿವೆ.
ಕಾರ್ಖಾನೆ, ವಾಹನ ಶಬ್ದಗಳಿಲ್ಲದೇ ಹಕ್ಕಿಗಳ ಚಿಲಿಪಿಲಿಗಳಿಗೆ ಕೆಲವು ದಿನಗಳಾದರೂ ಬೀಜಿಂಗ್ನಲ್ಲಿ ಕಾಣಸಿಗುತ್ತಿತ್ತು. ಆದರೆ ಅವುಗಳು ಈಗ ಯಥಾಸ್ಥಿತಿಗೆ ಬಂದಿವೆ. ಚೀನಾ ಪರೋಕ್ಷವಾಗಿ ಕೋವಿಡ್ 19 ಜತೆಗಿನ ಯುದ್ಧದಲ್ಲಿ ಜಯಭೇರಿ ಭಾರಿಸಿದೆ ಎಂದು ಘೋಷಿಸಿಕೊಂಡಿದೆ.
ಕೋವಿಡ್ 19 ಅಬ್ಬರಕ್ಕೆ ತತ್ತರಿಸಿ ಬಾಗಿಲು ಮುಚ್ಚಿದ್ದ ಅಂಗಡಿಗಳು ಒಂದೊಂದಾಗಿ ತೆರೆಯುತ್ತಿವೆ. ಅಂಗಡಿಗಳ ಮುಂದೆ ಸಾಲುಗಳು ಹೆಚ್ಚಾಗುತ್ತಿದ್ದು, ಅಗತ್ಯ ವಸ್ತುಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಶಾಪಿಂಗ್ ಮಾರ್ಕೆಟ್ಗಳ ಪಾರ್ಕಿಂಗ್ ಏರಿಯಾಗಳು ತುಂಬುತ್ತಿವೆ. ಅಂಗಡಿಗಳ ಎದುರು, ಪಾರ್ಕಿಂಕ್ ಜಾಗಗಳು, ಅಪಾರ್ಟ್ಮೆಂಟ್, ಮನೆಗಳ ಮುಂಭಾಗ ವಾಚ್ಮನ್ಗಳು ತಮ್ಮ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ರಾತ್ರಿಹೊತ್ತು ವಿದ್ಯುತ್ ದೀಪಗಳ ಬೆಳಕನ್ನು ಮಾತ್ರ ಕಾಣುತ್ತಿದ್ದ ರಸ್ತೆಗಳಲ್ಲೀಗ ವಾಹನ ಬೆಳಕು ಹರಿಯುತ್ತಿವೆ. ಇವುಗಳನ್ನು ಚೀನ ಬಿಡುಗಡೆ ಮಾಡಿದ ಸ್ಯಾಟಲೇಟ್ ಇಮೇಜ್ನಲ್ಲಿ ತೋರಿಸಲಾಗಿದೆ.
ಬೀಜಿಂಗ್ನ ಬಹುತೇಕ ರೆಸ್ಟೋರೆಂಟ್ಗಳು ಮತ್ತೆ ತೆರೆಯುತ್ತಿವೆ. ಕೋವಿಡ್ 19 ತೀವ್ರತೆ ಕಡಿಮೆಯಾಗುತ್ತಿದೆ ಎಂದು ಅಲ್ಲಿನ ಸರಕಾರ ಕೆಲವು ಪ್ರದೇಶಗಳಿಗೆ ಸೂಚಿಸಿದೆ. ಸಹಜವಾಗಿ ಇದರಿಂದ ಅಲ್ಲಿನ ಅಂಗಡಿ ಮುಂಗಟ್ಟುಗಳು ತೆರೆಯಲು ಕಾರಣವಾಗಿದೆ. ಕೆಲವೆಡೆ ಮುಂದಿನ 2 ವಾರಗಳಲ್ಲಿ ಶಾಲಾ ಕಾಲೇಜುಗಳು ತೆರೆಯಲಿದ್ದು ಅದಕ್ಕೆ ಸಂಬಂಧಪಟ್ಟ ತಯಾರಿಯನ್ನು ಮಾಡಲಾಗಿದೆ. ಶಾಂಘೈನಲ್ಲಿ ಸಿನೆಮಾ ಥಿಯೇಟರ್ಗಳು ತೆರೆಯಲಿದ್ದು, ಆದರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.