ಯುಗಾದಿಗೂ ಕೋವಿಡ್ 19 ಕಾರ್ಮೋಡ
Team Udayavani, Mar 25, 2020, 4:07 PM IST
ಚಿಕ್ಕೋಡಿ: ವಿಶ್ವ ವ್ಯಾಪಿ ಹಬ್ಬಿರುವ ಮಹಾಮಾರಿ ಕೋವಿಡ್ 19 ವೈರಸ್ ಅಬ್ಬರದಿಂದ ಯುಗಾದಿ ಅಮಾವಾಸ್ಯೆ ಮಂಕಾಗಿದೆ. ಹೀಗಾಗಿ ಅಮಾವಾಸ್ಯೆಯಂದು ಜನಜಂಗುಳಿಯಿಂದ ಕೂಡಿರುತ್ತಿದ್ದ ಗಡಿ ಭಾಗದ ದೇವಸ್ಥಾನಗಳು ಭಕ್ತರಿಲ್ಲದೇ ಭಣಗುಡುತ್ತಿವೆ.
ಯುಗಾದಿ ಅಮಾವಾಸ್ಯೆ ಮತ್ತು ಯುಗಾದಿ ಹಬ್ಬವನ್ನು ಭಾರತೀಯರು ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ. ಆದರೆ ಪ್ರಸಕ್ತ ವರ್ಷದಲ್ಲಿ ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಪರಿಣಾಮ ಕೇಂದ್ರ-ರಾಜ್ಯ ಸರ್ಕಾರ ದೇವಸ್ಥಾನಗಳನ್ನು ಬಂದ್ ಮಾಡಿವೆ. ಹೀಗಾಗಿ ಯುಗಾದಿ ಅಮಾವಾಸ್ಯೆಯನ್ನು ಭಕ್ತರು ಮನೆಯಲ್ಲಿಯೇ ಇದ್ದುಕೊಂಡು ಪೂಜೆ, ಪುನಸ್ಕಾರ, ನೈವೇದ್ಯ ಮಾಡಿದ್ದಾರೆ.
ಯುಗಾದಿ ಅಮಾವಾಸ್ಯೆ ಮತ್ತು ಯುಗಾದಿ ಪಾಡ್ಯ ನಿಮಿತ್ತ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ, ತೋರಣಹಳ್ಳಿಯ ಹನುಮಾನ ದೇವಸ್ಥಾನ, ಯಕ್ಸಂಬಾದ ಬೀರೇಶ್ವರ, ಪಟ್ಟಣಕುಡಿ ಸೂರ್ಯನಾರಾಯಣ ದೇವಸ್ಥಾನ, ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದಲ್ಲಿ ಯುಗಾದಿಯನ್ನು ಭಕ್ತರು ಅದ್ಧೂರಿಯಾಗಿ ಆಚರಿಸುತ್ತಿದ್ದರು.
ಆದರೆ ಭಕ್ತರ ಸಂಭ್ರಮ ಹಾಗೂ ಯುಗಾದಿ ಹಬ್ಬಕ್ಕೆ ಕೋವಿಡ್ 19 ವೈರಸ್ ತಣ್ಣೀರೆರಚಿದೆ. ಬೇವು-ಬೆಲ್ಲದ ಬಾಂಧವ್ಯದ ಯುಗಾದಿ ಹಬ್ಬವನ್ನು ಗಡಿ ಭಾಗದ ಜನರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದರು. ಆದರೆ ಕೋವಿಡ್ 19 ವೈರಸ್ದಿಂದ ಇಡೀ ರಾಜ್ಯ ಲಾಕ್ ಡೌನ್ ಇರುವುದರಿಂದ ಜನ ಮನೆಯಿಂದ ಹೊರಬರುತ್ತಿಲ್ಲ, ಕೊರೊನಾ ಮಹಾಮಾರಿಗೆ ಯುಗಾದಿ ಹಬ್ಬ ಸಿಹಿ-ಕಹಿ ಆಗದೇ ಕೇವಲ ಕಹಿ ಆಗಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಉದ್ಯಮಿ ಹ*ತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಬಂಧನ
Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ
Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ
Bailhongal: ಕರೆಂಟ್ ಶಾಕ್ ತಗುಲಿ ಮಹಿಳೆ ಸಾವು
Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.