ಊಟವಿಲ್ಲದೇ ನರಳಿದ ಕಾರ್ಮಿಕರು
Team Udayavani, Apr 2, 2020, 2:36 PM IST
ಕೆಜಿಎಫ್: ಕೂಲಿ ಅರಿಸಿ ಬಿಹಾರದಿಂದ ಬಂದಿದ್ದ ಕಟ್ಟಡ ನಿರ್ಮಾಣ ಎಂಟು ಕಾರ್ಮಿಕರು ಲಾಕ್ಡೌನ್ನಿಂದಾಗಿ ದಾರಿ ಕಾಣದೆ ಅತಂತ್ರರಾಗಿ ಮೂರು ದಿನಗಳಿಂದ ಹಸಿವಿನಿಂದ ನರಳಿದ ಘಟನೆ ನಡೆದಿದೆ.
ನಗರದ ಹೊರವಲಯದ ಕಂಗಾಂಡ್ಲ ಹಳ್ಳಿಯ ಕೋಳಿಫಾರಂನ ಶೆಡ್ನಲ್ಲಿದ್ದಎಲ್ಲಾ ಕಾರ್ಮಿಕರನ್ನು ಕಷ್ಟಪಟ್ಟು ಹುಡುಕಿದ ರೋಟರಿ ಸಂಸ್ಥೆ ಬುಧವಾರ ಅವರಿಗೆ ಊಟು ನೀಡಿ, ಹಸಿವು ಮುಕ್ತರನ್ನಾಗಿ ಮಾಡಿದೆ. 15 ದಿನಗಳ ಹಿಂದೆ ಬಿಹಾರ್ನ ಮೋತಿಹಾರ್ನಿಂದ ಯಶವಂತಪುರಕ್ಕೆ ರೈಲಿನಲ್ಲಿ ಬಂದಿದ್ದ ಎಂಟು ಕಾರ್ಮಿಕರು ಗುತ್ತಿಗೆದಾರನೊಬ್ಬನ ಸಂಪರ್ಕದಿಂದಾಗಿ ಕೋಲಾರಕ್ಕೆ ಬಂದು ಅಲ್ಲಿ ಎರಡು ದಿನ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದರು.
ಕೋವಿಡ್ 19 ದಿಂದ ಲಾಕ್ಡೌನ್ ಆದ ತಕ್ಷಣ ಕಾಮಗಾರಿ ನಿಲ್ಲಿಸಿದ ಮೇಸ್ತ್ರಿಅವರಿಗೆ ದುಡ್ಡು ಕೊಟ್ಟು ಕಳಿಸಿದ್ದ. ಅಲ್ಲಿಂದ ಬಿಹಾರದ ಮೂಲದ ಇತರ ಕಾರ್ಮಿಕರ ನೆರವು ಪಡೆದು ಕಂಗಾಂಡ್ಲಹಳ್ಳಿಗೆ ಬಂದು ಕೋಳಿಫಾರಂ ಶೆಡ್ನಲ್ಲಿ ಉಳಿದುಕೊಂಡರು. ಕೋವಿಡ್ 19 ಕರ್ಫ್ಯೂ ಇದ್ದುದರಿಂದ ಅವರಿಗೆ ಕೆಲಸ ಸಿಗಲಿಲ್ಲ. ಕೈಯಲ್ಲಿ ದುಡ್ಡು ಖಾಲಿಯಾಗಿದ್ದರಿಂದ, ಆಹಾರ ಪದಾರ್ಥ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವರಲ್ಲಿದ್ದ ಬಿಜಯ್ ಚೌಧರಿ ಎಂಬಾತ ಕೋವಿಡ್ 19 ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿವಿವರಣೆ ಮಾಡಿದ. ಸಹಾಯವಾಣಿ ಮೂಲಕ ಮಾಹಿತಿ ಪಡೆದ ರೋಟರಿ ಡಾ.ಜಯರಾಂ, ಕೆಜಿಎಫ್ನ ರೋಟರಿ ಸಂಸ್ಥೆಗೆ ತಿಳಿಸಿದರು.
ಸಂಸ್ಥೆಯ ಅ.ಮು. ಲಕ್ಷ್ಮೀನಾರಾಯಣ, ಕ್ಯಾಸಂಬಳ್ಳಿಯ ದಿವಾಕರ ಎಂಬಾತನ ಜೊತೆಗೂಡಿ ಎಲ್ಲೆಡೆ ಹುಡುಕಿ, ಕೊನೆಗೆ ಶೆಡ್ನಲ್ಲಿ ಅವರನ್ನು ಪತ್ತೆ ಮಾಡಿ, ಆಹಾರ ಧಾನ್ಯ ವಿತರಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.