ಮೆಟ್ರೋ ಬೋಗಿಗಳ ಪೂರೈಕೆಗೆ ಚೀನಾ ವಿಘ್ನ


Team Udayavani, Apr 7, 2020, 1:16 PM IST

ಮೆಟ್ರೋ ಬೋಗಿಗಳ ಪೂರೈಕೆಗೆ ಚೀನಾ ವಿಘ್ನ

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮಾರ್ಗಗಳಿಗೆ ಅಗತ್ಯವಿರುವ ಬೋಗಿಗಳು ಮತ್ತು ಟನಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ)ಗೆ ಬೇಕಾದ ಬಿಡಿಭಾಗಗಳು ಇವೆರಡೂ “ಕೋವಿಡ್ 19 ವೈರಸ್‌’ನ ಮೂಲ ಚೀನಾದಿಂದ ಬರಬೇಕಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಪೂರೈಕೆಯಲ್ಲಿ ಕನಿಷ್ಠ ಮೂರ್‍ನಾಲ್ಕು ತಿಂಗಳು ವಿಳಂಬವಾಗಲಿದ್ದು, ಯೋಜನಾ ಪ್ರಗತಿ ಮೇಲೆ ಇದು ಪರಿಣಾಮ ಬೀರಲಿದೆ.

ಮೆಟ್ರೋ ಎರಡನೇ ಹಂತದ ವಿಸ್ತರಿಸಿದ ಮಾರ್ಗಗಳು ಮತ್ತು ಒಂದು ಹೊಸ ಮಾರ್ಗಕ್ಕೆ ಒಟ್ಟಾರೆ 36 ರೈಲು (216 ಬೋಗಿಗಳು)ಗಳನ್ನು ಪೂರೈಸುವ ಗುತ್ತಿಗೆಯನ್ನು ಚೀನಾ ಮೂಲದ ಕಂಪನಿಗೆ ನೀಡಲಾಗಿದೆ. ಈ ರೈಲುಗಳು ಮುಂದಿನ ವರ್ಷ ಅಕ್ಟೋಬರ್‌ -ನವೆಂಬರ್‌ನಿಂದ ಪೂರೈಕೆ ಆರಂಭವಾಗಲಿದೆ. ಆದರೆ, ಇದರ ತಯಾರಿಕೆ ಘಟಕ ಆಂಧ್ರ ಪ್ರದೇಶದ ಶ್ರೀಸಿಟಿಯಲ್ಲೇ ನಿರ್ಮಾಣ ಆಗಬೇಕು. ಹಾಗೂ ತಯಾರಿಕೆಗಾಗಿ ಉಪಯೋಗಿಸುವ ಬಿಡಿಭಾಗಗಳಲ್ಲಿ ಶೇ. 75ರಷ್ಟು “ಮೇಕ್‌ ಇನ್‌ ಇಂಡಿಯಾ’ ಆಗಿರಬೇಕು ಎಂಬ ಷರತ್ತು ಕೂಡ ಇದೆ. 36 ರೈಲುಗಳಲ್ಲಿ ಮೊದಲ ಹಂತದಲ್ಲಿ ನಾಲ್ಕು ರೈಲುಗಳು ಹಾಗೂ ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಅಬ್ಬಬ್ಟಾ ಎಂದರೆ ಒಂಬತ್ತು ರೈಲುಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲು ಅವಕಾಶ ಇದೆ. ಉಳಿದ 27 ರೈಲುಗಳನ್ನು ಕಡ್ಡಾಯವಾಗಿ ಸ್ಥಳೀಯವಾಗಿಯೇ ತಯಾರಾಗಬೇಕು. ಇದಕ್ಕಾಗಿ 70 ಎಕರೆ ಭೂಮಿಯನ್ನು ಚೀನಾದ ಸಿಆರ್‌ಆರ್‌ಸಿ ನಂಜಿಂಗ್‌ ಪುಝೆನ್‌ ಕೊ-ಲಿ., ಕಂಪನಿಗೆ ನೀಡಲಾಗುತ್ತಿದೆ. ಘಟಕಕ್ಕಾಗಿ ನುರಿತ ತಜ್ಞರ ತಂಡ ಸಿದ್ಧಪಡಿಸಲಾಗುತ್ತಿದೆ. ಆ ತಂಡವು ಇಲ್ಲಿಗೆ ಬರಲು ವೀಸಾ ಸಿಗಬೇಕು. ಅಲ್ಲದೆ, ಶೇ. 75ರಷ್ಟು ಬಿಡಿ ಭಾಗಗಳ ಪೂರೈಕೆಗೆ ಇಲ್ಲಿನ ಕಂಪನಿಗಳು ಕೂಡ ಸಜ್ಜಾಗಿರಬೇಕಾಗುತ್ತದೆ. ಕೋವಿಡ್ 19 ವೈರಸ್‌ ಹಾವಳಿ ನಂತರ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾರಂಭವಾಗಲು ಸಮಯ ಹಿಡಿಯುತ್ತದೆ.

ಸದ್ಯಕ್ಕೆ ಸಮಸ್ಯೆ ಆಗದು: 36 ರೈಲುಗಳ ಪೈಕಿ 21 ರೈಲುಗಳು ವಿಸ್ತರಿಸಿದ ಮಾರ್ಗ ಅದರಲ್ಲೂ ವಿಶೇಷವಾಗಿ ಬೈಯಪ್ಪನಹಳ್ಳಿ-ವೈಟ್‌ ಫೀಲ್ಡ್‌ ಹಾಗೂ ನಾಗಸಂದ್ರ- ಬೆಂಗಳೂರು ಅಂತಾರಾಷ್ಟ್ರೀಯ ವಸ್ತು  ಪ್ರದರ್ಶನ ಕೇಂದ್ರ (ಬಿಐಇಸಿ) ಮಾರ್ಗಗಳ ನಡುವೆ ಕಾರ್ಯಾಚರಣೆ ಮಾಡಲಿವೆ. ಉಳಿದ 15 ರೈಲುಗಳು ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ ನಡುವೆ ಬಳಕೆ ಆಗಲಿವೆ. ಹಾಗಾಗಿ, ವರ್ಷಾಂತ್ಯಕ್ಕೆ ಲೋಕಾರ್ಪಣೆ ಆಗಲಿರುವ ಕನಕಪುರ ರಸ್ತೆ ಮತ್ತು ಕೆಂಗೇರಿ ಮಾರ್ಗಗಳಲ್ಲಿ ಯಾವುದೇ ಸಮಸ್ಯೆ ಆಗದು ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಎಂಜಿನಿಯರೊಬ್ಬರು ತಿಳಿಸಿದರು.  ಆದರೆ, ಈಗಿರುವ ರೈಲುಗಳೇ ವಿಸ್ತರಿಸಿದ ಮಾರ್ಗ ತಲುಪಿ ಬರಬೇಕಾದರೆ, ಹೆಚ್ಚು ಸಮಯ ಹಿಡಿಯುತ್ತದೆ. ಆಗ, ಫ್ರಿಕ್ವೆನ್ಸಿ (ರೈಲುಗಳ ನಡುವಿನ ಅಂತರದ ಸಮಯ) ಕಡಿಮೆ ಮಾಡಬೇಕಾಗುತ್ತದೆ. ಇದರಿಂದ ದಟ್ಟಣೆ ಹೆಚ್ಚಾಗಿ, ಪ್ರಯಾಣಿಕರು ಪರದಾಡುತ್ತಾರೆ.

ಸುರಂಗ ಕಾರ್ಯವೂ ವಿಳಂಬ: ಚೀನಾದಿಂದ ಟಿಬಿಎಂಗಳು ಬಂದಿವೆ. ಆದರೆ, ಅದನ್ನು ನಿರ್ವಹಣೆ ಮಾಡುವ ಸಮರ್ಪಕ ತಂಡ ಚೀನಾದಿಂದ ಇನ್ನೂ ಬರಬೇಕಿದೆ. ಅಲ್ಲದೆ, ಹಲವು ಬಿಡಿಭಾಗಗಳು ಕೂಡ ಅದೇ ದೇಶದಿಂದ ಪೂರೈಕೆ ಆಗಬೇಕಾಗುತ್ತದೆ. ಈ ಮಧ್ಯೆ ಲಾಕ್‌ಡೌನ್‌ ಅವಧಿ ವಿಸ್ತರಣೆ ಮಾತುಗಳು ಕೇಳಿ ಬರುತ್ತಿವೆ. ಪರಿಣಾಮ ಸುರಂಗ ಕೊರೆಯುವ ಕಾರ್ಯವೂ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿಂದೆ ನಿಗದಿಪಡಿಸಿದ್ದ ಗಡುವಿನ ಪ್ರಕಾರ ಕಳೆದ ಫೆಬ್ರವರಿಯಿಂದಲೇ ಕಾಮಗಾರಿ ಶುರು ಆಗಬೇಕಿತ್ತು.

 

ಮೂರು- ನಾಲ್ಕು ತಿಂಗಳು ವಿಳಂಬ :  ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ಬಂದರುಗಳು ಸ್ಥಗಿತಗೊಂಡಿದ್ದು, ಚೀನಾ ಸೇರಿದಂತೆ ಯಾವುದೇ ಹಡಗುಗಳಿಗೆ ಅವಕಾಶ ನೀಡುತ್ತಿಲ್ಲ. ಜತೆಗೆ ವಿದೇಶಗಳಿಂದ ಬರುವವರಿಗೆ ವೀಸಾ ಕೂಡ ನಿರ್ಬಂಧಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಯೋಜನೆಯಲ್ಲಿ ಕನಿಷ್ಠ ಮೂರ್‍ನಾಲ್ಕು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಇದು ಎರಡನೇ ಹಂತದ ರೈಲು ಸೇವೆ ಮೇಲೆ ಪರಿಣಾಮ ಬೀರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮೂಲಗಳು ತಿಳಿಸಿವೆ.

 

2021ರ ಜನವರಿ ಒಳಗೆ ಘಟಕ ನಿರ್ಮಾಣ ಗುರಿ ಚೀನಾ ಮೂಲದ ಕಂಪನಿ ಮುಂದಿದೆ. ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಆ ಪ್ರಗತಿಗೆ ತುಸು ಹಿನ್ನಡೆ ಆಗಿರಬಹುದು. ಆದರೆ, ನಮ್ಮಲ್ಲಿಯೂ ಕೆಲಸ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಅಲ್ಲಿಗೆ ಸರಿಹೋಗುತ್ತದೆ. ಹಾಗೊಂದು ವೇಳೆ ಈಗಿರುವ ಸ್ಥಿತಿ ಒಂದು ವೇಳೆ ಇನ್ನಷ್ಟು ದಿನ ಮುಂದುವರಿದರೆ, ಅದು ವಿಳಂಬದ ರೂಪದಲ್ಲಿ ಅದು ಪರಿಣಮಿಸುವ ಸಾಧ್ಯತೆ ಇದೆ. – ಅಜಯ್‌ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌

 

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.