![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 14, 2020, 1:41 PM IST
ಕಲಬುರಗಿ: ಕೋವಿಡ್-19 ಸೋಂಕಿನಿಂದ ಈಗಾಗಲೇ ಮೂರು ಸಾವುಗಳಿಂದ ತಲ್ಲಣಿಸಿರುವ ಕಲಬುರಗಿಯಲ್ಲಿ ಮಂಗಳವಾರ ಮತ್ತೆ ಮೂರು ಹೊಸ ಪ್ರಕರಣಗಳು ದೃಢ ಪಟ್ಟಿವೆ. 10 ವರ್ಷದ ಬಾಲಕಿ ಸೇರಿ ಮೂವರಲ್ಲಿ ಮಹಾಮಾರಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್-19 ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಕೋವಿಡ್-19 ಸೋಂಕಿನಿಂದಲೇ ಏ.7ರಂದು ಮೃತಪಟ್ಟ ಹಣ್ಣಿನ ವ್ಯಾಪಾರಿ ಸಂಪರ್ಕಕ್ಕೆ ಬಂದ ಹತ್ತು ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಈ ಹಿಂದೆ ಈ ವ್ಯಕ್ತಿಯ ಸೊಸೆ ಹಾಗೂ ಆತ ಚಿಕಿತ್ಸೆ ಪಡೆದ ಬಹಮನಿ ಖಾಸಗಿ ಆಸ್ಪತ್ರೆಯ ಆಯಾಗೆ ಕೋವಿಡ್-19 ಸೋಂಕು ಖಚಿತವಾಗಿತ್ತು.
ಆದರೆ, ಈಗ ಸೋಂಕು ಪತ್ತೆಯಾದ ಇಬ್ಬರು ಯಾರು ಎಂಬುವುದು ಗೊತ್ತಾಗಬೇಕಿದೆ. ಮೃತ ವ್ಯಕ್ತಿಯ ಕುಟುಂಬದವರೋ ಅಥವಾ ಮನೆ ಪಕ್ಕದವರೋ, ಇಲ್ಲವೇ ಹಣ್ಣು ಖರೀದಿ ಮಾಡಿದವರೋ ಎಂಬ ಬಗ್ಗೆ ಮಾಹಿತಿ ಸಿಗಬೇಕಿದೆ.
ಇನ್ನು, ಕೋವಿಡ್-19 ಸೋಂಕಿನಿಂದಲೇ ಸೋಮವಾರ ಸಂಜೆ ಸಾವನ್ನಪ್ಪಿದ ಬಟ್ಟೆ ವ್ಯಾಪಾರಿಯ 51 ವರ್ಷದ ಸಹೋದರನಿಗೂ ಹೆಮ್ಮಾರಿ ಸೋಂಕು ದೃಢಪಟ್ಟಿದ್ದು, ಬಿಸಿಲೂರು ಜನತೆಯಲ್ಲಿ ಅಕ್ಷರಶಃ ಮತ್ತಷ್ಟು ತಲ್ಲಣ ಉಂಟಾಗಿದೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.