![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 18, 2020, 5:59 AM IST
ತೆಕ್ಕಟ್ಟೆ: ಕೋವಿಡ್-19 ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭ ದಲ್ಲಿಯೇ ವಾರಾಹಿ ಎಡದಂಡೆ ಕಾಲುವೆ ನೀರು ಕುಂದಾಪುರ ತಾಲೂಕಿನ ಸುಣ್ಣಾರಿ, ದಬ್ಬೆಕಟ್ಟೆ ಗ್ರಾಮಕ್ಕೆ ಹರಿದು ಬಂದಿದ್ದು ಇಲ್ಲಿನ ಸಳ್ವಾಡಿ, ಅಸೋಡು ಸುತ್ತಮುತ್ತಲಿನ ಗ್ರಾಮದಲ್ಲಿನ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು ಅಂತರ್ಜಲ ವೃದ್ಧಿಯಾಗಿದೆ.
ವಾರಾಹಿ ಕಾಲುವೆ ನೀರು ದಬ್ಬೆಕಟ್ಟೆಯ ಸಮೀಪದಲ್ಲಿಯೇ ಹಾದುಹೋದ ಪರಿಣಾಮ ಕಾಲುವೆಯಲ್ಲಿ ಹರಿದುಬಂದ ಹೆಚ್ಚುವರಿ ನೀರನ್ನು ಸಮೀಪದ ತೋಡುಗಳಿಗೆ ಹಾಯಿಸುವ ಕೆಲಸ ನಿರಂತರವಾಗಿ ನಡೆಯುವ ಪರಿಣಾಮ ಗ್ರಾಮದಲ್ಲಿ ನೀರಿನ ಒರತೆ ಹೆಚ್ಚಾಗಿದೆ.
ವಕ್ವಾಡಿ ಗ್ರಾಮಸ್ಥರಿಗೂ ವಾರಾಹಿ ನೀರು
ಕಾಳಾವರ: ಆಸೋಡು, ವಕ್ವಾಡಿ, ದಬ್ಬೆಕಟ್ಟೆ ನಿವಾಸಿಗಳ ಬಹಳಷ್ಟು ನಿರೀಕ್ಷೆ ವಾರಾಹಿ ನೀರಿನ ಹರಿವಿಗೆ ವ್ಯವಸ್ಥೆಗೊಳಿಸಲಾಗಿದ್ದು ಈ ಭಾಗದ ಮಂದಿ ಕಾಳಾವರ ಗ್ರಾ.ಪಂ.ಗೆ ಕೃತಜ್ಞತೆ ಸಲ್ಲಿಸಿರುತ್ತಾರೆ.
ಕಾಳಾವರ ಗ್ರಾ.ಪಂ.ಅಧ್ಯಕ್ಷ ಸುಖಾನಂದ ಹೆಗ್ಡೆ ಅವರ ಮನವಿ ಪುರಸ್ಕರಿಸಿದ ವಾರಾಹಿ ಯೋಜನೆಯ ಮುಖ್ಯ ಎಂಜಿನಿಯರ್ ಎ.17 ರಂದು ದಬ್ಬೆಕಟ್ಟೆ ತೋಡಿನ ಮೂಲಕ ನೀರನ್ನು ಹರಿಯಲು ಬಿಟ್ಟಿರುತ್ತಾರೆ. ಇದರಿಂದಾಗಿ ಆಸೋಡು, ದಬ್ಬೆಕಟ್ಟೆ, ವಕ್ವಾಡಿ, ಹಾಗೂ ಕಾಳಾವರ ಜನರಿಗೆ ಬೇಸಗೆಯಲ್ಲಿ ಬರಿದಾದ ಬಾವಿಯಲ್ಲು ನೀರು ಸಿಗುವಂತಾಗಿದೆ ಹಾಗೂ ಕೃಷಿ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ ಎಂದು ಕಾಳಾವರ ಗ್ರಾ.ಪಂ.ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ ಸ್ಥಳಕ್ಕೆ ಭೇಟಿಯಿತ್ತು ಉದಯವಾಣಿಗೆ ಮಾಹಿತಿ ನೀಡಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.