![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Apr 19, 2020, 4:03 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರು ಹೆಗ್ಡಾಳ್ ಗ್ರಾಮದ ರೈತರ ಮಲ್ಲಿಗೆ ಹೂವಿನ ತೋಟಗಳಿಗೆ ಶಾಸಕ ಭೀಮಾನಾಯ್ಕ ಭೇಟಿ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು
ಹಗರಿಬೊಮ್ಮನಹಳ್ಳಿ: ಶಿವಮೊಗ್ಗ ಮಾರುಕಟ್ಟೆಗೆ ಮಲ್ಲಿಗೆ ಮೊಗ್ಗು ಸಾಗಣೆಗೆ ವಾಹನದ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ತಿಳಿಸಿದರು.
ತಾಲೂಕಿನ ಪಿಂಜಾರಹೆಗ್ಡಾಳ್ ಗ್ರಾಮದ ಮಲ್ಲಿಗೆ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ತೋಟಗಾರಿಕೆ ಬೆಳೆನಷ್ಟ ಪರಿಹಾರಕ್ಕೆ ಸಿಎಂ ಬಳಿ ಚರ್ಚೆ ನಡೆಸಲಾಗುವುದು. ಕೊಟ್ಟೂರಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಮಾರಾಟಕ್ಕೆ ಅನುವು ಮಾಡಲು ತಹಸೀಲ್ದಾರ್ಗೆ ಸೂಚನೆ ನೀಡಿದರು. ಒಟ್ಟು 600 ಎಕರೆ ಪ್ರದೇಶದಲ್ಲಿ ನಿತ್ಯ 4 ಟನ್ಗೂ ಹೆಚ್ಚು ಮಲ್ಲಿಗೆ ಒಕ್ಕಣೆಯಾಗುತ್ತಿದೆ. ಗಂಗಾವತಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ರೈತರಿಗೆ ಅಡ್ಡಿಪಡಿಸಿದಂತೆ ದೂರವಾಣಿಯಲ್ಲೇ ಕೋರಿದರು. ಶಾಸಕರ ಕ್ರಮಕ್ಕೆ ಮಲ್ಲಿಗೆ ಬೆಳೆಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆಗಾರರಾದ ಜೆ.ಎಂ. ವೀರಸಂಗಯ್ಯ, ಆರ್. ಎಸ್. ಬಸವರಾಜ, ಹೆಗಾxಳ್ ರಾಮಣ್ಣ ಇತರರು ಒತ್ತಾಯಿಸಿದರು. ನಾಗಭೂಷಣ, ಹನುಮಂತಪ್ಪ, ವೆಂಕಟೇಶ, ಬಿ.ಕೆ. ಬಸವರಾಜ, ಹೆಗ್ಡಾಳ್ ರಾಜ ಮುಂತಾದ ಬೆಳೆಗಾರರಿದ್ದರು. ತಹಶೀಲ್ದಾರ್ ಆಶಪ್ಪ ಪೂಜಾರ್, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ| ಜಿ. ಪರಮೇಶ್ವರ, ಎಡಿಎ ಹುಸೇನ್ ಸಾಬ್ ರೈತರಿಂದ ಮಾಹಿತಿ ಪಡೆದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ಹಾಲ್ದಾಳ್ ವಿಜಯಕುಮಾರ, ಪವಾಡಿ ಹನುಮಂತಪ್ಪ ಇತರರಿದ್ದರು.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.