ಮುಂದಿನ ಋತುವಿನ ಸಿದ್ಧತೆಯಲ್ಲಿ ಸೇವಂತಿಗೆ ಕೃಷಿಕರು
Team Udayavani, Apr 20, 2020, 5:52 AM IST
ಹೆಮ್ಮಾಡಿ: ಕೋವಿಡ್ 19 ಲಾಕ್ಡೌನ್ ಆರಂಭಕ್ಕೂ ಮೊದಲೇ ಹೆಮ್ಮಾಡಿ ಸೇವಂತಿಗೆ ಸೀಸನ್ ಮುಗಿಯುತ್ತ ಬಂದಿದ್ದು, ಬೆರಳೆಣಿಕೆಯಷ್ಟು ಮಂದಿ ಬೆಳೆಗಾರರಿಗೆ ಮಾತ್ರ ಕೊನೆಯಲ್ಲಿ ಸ್ವಲ್ಪ ಮಟ್ಟಿಗೆ ಇದರಿಂದ ತೊಂದರೆ ಉಂಟಾಗಿತ್ತು. ಈಗಾಗಲೇ ಸೇವಂತಿಗೆ ಸೀಸನ್ ಮುಗಿದಿದ್ದು, ಮುಂದಿನ ಋತುವಿಗಾಗಿ ಗಿಡಗಳನ್ನು ಸುಟ್ಟು, ಆ ಗದ್ದೆಗಳಲ್ಲಿ ಸುಡುಮಣ್ಣು ತಯಾರಿಯಲ್ಲಿ ಕೃಷಿಕರು ನಿರತರಾಗಿದ್ದಾರೆ.
ಸಾಮಾನ್ಯವಾಗಿ ಹೆಮ್ಮಾಡಿ ಸೇವಂತಿಗೆ ಸೀಸನ್ ಎಪ್ರಿಲ್ ಆರಂಭದವರೆಗೆ ಇರುತ್ತದೆ. ಆದರೆ ಈ ಬಾರಿ ಬಹುತೇಕ ಬೇಗನೆ ಮುಗಿದಿದ್ದು, ಕೋವಿಡ್ 19 ಲಾಕ್ಡೌನ್ನಿಂದ 4-5 ಮಂದಿ ಕೃಷಿಕರಿಗೆ ಮಾತ್ರ ಸ್ವಲ್ಪ ತೊಂದರೆಯಾಗಿತ್ತು. ಮುಂದಿನ ಋತು ಆಗಸ್ಟ್ನಲ್ಲಿ ಆರಂಭವಾದರೂ, ಸುಡುಮಣ್ಣು ತಯಾರಿಯೆಲ್ಲ ಈಗಿನಿಂದಲೇ ಆರಂಭವಾಗುತ್ತದೆ ಎನ್ನುವುದಾಗಿ ಸೇವಂತಿ ಬೆಳೆಗಾರರಾದ ರಾಜು ಹೇಳಿದರು.
ನಷ್ಟ ಪರಿಹಾರ ನೀಡಿ
ಈ ಬಾರಿ ಮೋಡ, ಅಕಾಲಿಕ ಮಳೆ, ಚಳಿ ಕಡಿಮೆ ಇದ್ದ ಕಾರಣ ಸೇವಂತಿಗೆ ಸೀಸನ್ ಅಷ್ಟೇನು ಫಲಪ್ರದವಾಗಿರಲಿಲ್ಲ. ಹೆಚ್ಚಿನ ಬೆಳೆಗಾರರಿಗೆ ನಷ್ಟವೇ ಆಗಿದೆ. ಸರಕಾರ ಸೇವಂತಿಗೆ ಬೆಳೆಗಾರರಿಗೂ ಕೂಡ ನಷ್ಟ ಪರಿಹಾರ ನೀಡಬೇಕು ಎಂದು ಹೆಮ್ಮಾಡಿ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scheme: ದಂಡ ಸಹಿತ ಪಾನ್-ಆಧಾರ್ ಜೋಡಿಸಿದವರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ!
Space Wonder: ಇಂದು ವಿಶೇಷ ಸೂಪರ್ಮೂನ್
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್ ಮಿಲಾದ್
Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.