ಮೂಡುಬಿದಿರೆ: ಸುಂಟರಗಾಳಿ, ಮನೆಗಳಿಗೆ ಹಾನಿ, ನಷ್ಟ
Team Udayavani, Apr 20, 2020, 5:50 AM IST
ಮೂಡುಬಿದಿರೆ: ರವಿವಾರ ಸಂಜೆ ಮೂಡುಬಿದಿರೆ ಹಾಗೂ ಪರಿಸರದಲ್ಲಿ ಎದ್ದ ಸುಂಟರಗಾಳಿಯಿಂದ 25ಕ್ಕೂ ಅಧಿಕ ಮನೆಗಳ ಸೂರು ಹಾರಿಹೋಗಿದ್ದು ಅಡಿಕೆ, ರಬ್ಬರ್ ತೋಟಗಳಿಗೂ ಹಾನಿಯಾಗಿದೆ. ಕಲ್ಲಬೆಟ್ಟು ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದೆ.
ಹೊಸಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮೂಡುಬಿದಿರೆ ಪುರಸಭಾ ಗಡಿಭಾಗ ಕೇಂಪ್ಲಾಜೆಯಲ್ಲಿರುವ ಮೀನಾಕ್ಷಿ ಆಚಾರ್ಯ ಅವರ ಮನೆಯ ಛಾವಣಿ ಸಂಪೂರ್ಣ ಹಾರಿಹೋಗಿವೆ.
ಶ್ರೀ ಮಹಾವೀರ ಕಾಲೇಜು ಬಳಿ ಪಿಲಿಪಂಜರದ ಬಳಿ 5 ಮನೆಗಳಿಗೆ ಹಾನಿಯಾಗಿದೆ. ಕಲ್ಲಬೆಟ್ಟು ಬಂಗಾರಪದವು ಪರಿಸರದಲ್ಲಿ 9 ಮನೆಗಳಿಗೆ ಹಾನಿಯಾಗಿದೆ. ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ , ಸ್ಫೂರ್ತಿ ವಿಶೇಷ ಶಾಲೆಯ ಪ್ರವರ್ತಕ ಪ್ರಕಾಶ್ ಶೆಟ್ಟಿಗಾರ್ ಬಳಗದವರು ಸ್ಥಳೀಯರ ಸಹಕಾರದೊಂದಿಗೆ ಮನೆಗಳಿಗೆ ಶೀಟ್ ಹೊದೆಸಲು ಸಹಕರಿಸಿದ್ದಾರೆ.
ಬಗ್ಗಜಾಲು ಪ್ರದೇಶದಲ್ಲಿ 5 ಮನೆಗಳ ಸೂರು ಗಾಳಿಗೆ ಹಾರಿಹೋಗಿವೆ. ಹುಡ್ಕೊà ಕಾಲನಿಯಲ್ಲಿ ಶಾಂತಾ ಅವರ ಮನೆಯ ಮುಕ್ಕಾಲಂಶ ಸಿಮೆಂಟ್ ಶೀಟ್ ಎಲ್ಲೋ ಹೋಗಿ ಬಿದ್ದಿವೆ. ಹತ್ತಿರದ ಶಿವಪ್ಪ ಅವರ ಮನೆಯ ಶೀಟ್ಗಳೂ ಕೆಳಗೆ ಬಿದ್ದಿವೆ. ವೇಣುಗೋಪಾಲ ಕಾಲನಿಯಲ್ಲಿ ಮುಖ್ಯ ರಸ್ತೆಗೆ ಬಿದ್ದ ಮರವನ್ನು ಸಾರ್ವಜನಿಕರು ತೆರವುಗೊಳಿಸಿದ್ದಾರೆ.
ಕಟೀಲೇಶ್ವರೀ ಕನ್ಸ್ಟ್ರಕ್ಷನ್ ಆವರಣದ ಹಲಸಿನ ಮರ ಮನೆಯ ಎದುರಿನ ಚಪ್ಪರದ ಮೇಲೆ ಬಿದ್ದಿದೆ. ಮರಿಯಾಡಿಯ ಹಲವು ಮನೆಗಳಿಗೆ ಹಾನಿಯಾಗಿದೆ. ಸುರೇಂದ್ರನ್ ಅವರ ಅಡಿಕೆ, ರಬ್ಬರ್ ತೋಟ, ಬಿರಾವುನಲ್ಲಿ ಅಡಿಕೆ ಮರಗಳು ನೆಲಕಚ್ಚಿವೆ. ಮೂಡುಬಿದಿರೆ ಪೇಟೆಯಲ್ಲಿ ಸ್ವರಾಜ್ಯ ಮೈದಾನದ ತಗಡಿನ ತಾತ್ಕಾಲಿಕ ಚಪ್ಪರ ಹಾರಿ ಹೋಗಿದೆ. ತರಕಾರಿ ಮಾರುಕಟ್ಟೆಗೂ ಹಾನಿಯಾಟಾಗಿದೆ.
ಮಾಜಿ ಸಚಿವ ಕೆ. ಅಭಯಚಂದ್ರ, ತಹಶೀಲ್ದಾರ್ ಅನಿತಾ ಲಕ್ಷ್ಮೀ, ಪುರಸಭಾ ಸದಸ್ಯರು ಸುಂಟರಗಾಳಿ ಪೀಡಿತ ವಿವಿಧೆಡೆಗಳಿಗೆ ಭೇಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.