ದೇವರನ್ನು ಮುಟ್ಟಿದ ನಿರಕ್ಷರಿ

ಬಾರೋ ಸಾಧಕರ ಕೇರಿಗೆ

Team Udayavani, Apr 21, 2020, 1:09 PM IST

ದೇವರನ್ನು ಮುಟ್ಟಿದ ನಿರಕ್ಷರಿ

1486ರಲ್ಲಿ ಬಂಗಾಳದಲ್ಲಿ ಹುಟ್ಟಿದ ಚೈತನ್ಯ ಮಹಾಪ್ರಭುಗಳು, ವೈಷ್ಣವ ಪಂಥವನ್ನು ಭಾರತದ ಉದ್ದಗಲಕ್ಕೆ ಹರಡಿದ ಮಹಾಸಂನ್ಯಾಸಿ. ಅವರು, ಜನಸಾಮಾನ್ಯರ ಜೊತೆ ಬೆರೆಯುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ದೇವರ ಸಾಕ್ಷಾತ್ಕಾರಕ್ಕೆ ಪಾಂಡಿತ್ಯದ ಅಗತ್ಯವಿಲ್ಲ, ಚೈತನ್ಯರು ಜಗತ್ತಿಗೆ ನೀಡಿದ ಮಂತ್ರ ಕೇವಲ ಹದಿನಾರು ಶಬ್ದಗಳದ್ದು: ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ | ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ || ಈ ಮಂತ್ರದಲ್ಲಿ ಬರುವ ಅನನ್ಯ ಶಬ್ದಗಳು ಮೂರೇ: ಹರೇ, ರಾಮ, ಕೃಷ್ಣ!

ಚೈತನ್ಯರು ತಮ್ಮ ಎಳವೆಯಲ್ಲೇ ಸಾಂಸಾರಿಕ ಬಂಧನ ಕಡಿದುಕೊಂಡು, ಸಂತ ಜೀವನವನ್ನು ಆತುಕೊಂಡರು. ಒಡಿಶಾದ ಪುರಿಯಲ್ಲಿ ತಮ್ಮ ಜೀವಿತದ ಬಹುಕಾಲವನ್ನು ಕಳೆದರು. ವೃಂದಾವನದಲ್ಲಿ ನೂರಾರು ವರ್ಷಗಳ ಕಾಲ ಮಣ್ಣಿನಡಿ ಹುಗಿದುಹೋಗಿದ್ದ ದೇವಸ್ಥಾನಗಳನ್ನು ಪತ್ತೆಹಚ್ಚಿ, ಪುನರುಜ್ಜೀವಗೊಳಿಸಿದರು. ದಕ್ಷಿಣ ಭಾರತ ಪ್ರವಾಸದ
ಸಂದರ್ಭದಲ್ಲಿ ಅವರು ದೇವಸ್ಥಾನವೊಂದರ ಪ್ರಾಂಗಣದಲ್ಲಿ ಉಪನ್ಯಾಸವೊಂದು ನಡೆಯುತ್ತಿದ್ದ ಸ್ಥಳಕ್ಕೆ ಬಂದರಂತೆ. ಪ್ರವಚನಕಾರರು ವೇದಿಕೆಯ ಮೇಲೆ ಶ್ರೀಕೃಷ್ಣನ ವಿಗ್ರಹವನ್ನಿಟ್ಟು, ತಾವು ಕೆಳಗೆ ನೆಲದಲ್ಲಿ ಕೂತು ಗೀತೆಯ ಪ್ರವಚನ ನಡೆಸುತ್ತಿದ್ದರಂತೆ. ನೂರಾರು ಸಂಖ್ಯೆಯಲ್ಲಿ ಜನ ಸೇರಿತ್ತು. ಆ ಸಭೆಯ ಕೊನೆಯಲ್ಲಿ ಒಬ್ಬ ಭಕ್ತ ಕೂತಿದ್ದ. ನೋಡಿದರೆ ಆತನೇನೂ ವೇದಶಾಸOಉಗಳನ್ನು ಓದಿಕೊಂಡವನಂತೆ ಕಾಣುತ್ತಿರಲಿಲ್ಲ. ತೋಟಗದ್ದೆಗಳಲ್ಲಿ ಕೆಲಸ ಮಾಡುವ ಶ್ರಮಜೀವಿಯಂತಿದ್ದ.

ಶಾಸ್ತ್ರ ಉಗ್ರಂಥಗಳನ್ನು ಓದುವುದಿರಲಿ, ಅಕ್ಷರಾಭ್ಯಾಸವೂ ಅವನಿಗೆ ಮರೀಚಿಕೆ. ಆದರೆ, ಆತ ತನ್ಮಯನಾಗಿ ಪ್ರವಚನ ಕೇಳುತ್ತ ಭಕ್ತಿಪರವಶತೆಯಿಂದ ಕಣ್ಣೀರುಗರೆಯುತ್ತಿದ್ದ. ಚೈತನ್ಯರು ಅವನ ಬಳಿ ಬಂದು “ಮಗೂ, ನೀನೇಕೆ ಕಣ್ಣೀರು ಹಾಕುತ್ತಿರುವೆ? ಪ್ರವಚನದ ಯಾವ ಸಂದೇಶ ನಿನ್ನನ್ನು ಇಷ್ಟೊಂದು ಗಾಢವಾಗಿ ತಟ್ಟಿತು?’ ಎಂದು ಕೇಳಿದರು.

ಆಗ ಆ ಭಕ್ತ, “ಸ್ವಾಮಿ, ಪ್ರವಚನದ ಸಂದೇಶ ನನಗೆ ಅರ್ಥವಾಗುವುದೆಲ್ಲಿ? ಅದು ವಿದ್ವಾಂಸರಿಗೆ ಮೀಸಲಾದ ಕೆನೆಮೊಸರು. ನನಗೆ ಅಲ್ಲಿ ವೇದಿಕೆಯಲ್ಲಿ ಕಾಣುತ್ತಿರುವುದು ಕೃಷ್ಣ, ಅರ್ಜುನ ಇಬ್ಬರೇ! ರಥದಲ್ಲಿ ಕೂತಿರುವ ಶ್ರೀಕೃಷ್ಣನ ದಿವ್ಯಮೂರ್ತಿಯನ್ನು ಕಂಡು ನನಗೇ ಗೊತ್ತಿಲ್ಲದಂತೆ ಕಣ್ಣೀರು ಇಳಿದುಬರುತ್ತಿದೆ’ ಎಂದನಂತೆ. ಈ ಪ್ರಕರಣವನ್ನು ಉದಾಹರಿಸಿ, ಚೈತನ್ಯರು ತಮ್ಮ ಶಿಷ್ಯರಿಗೆ ಹೇಳಿದರು: ಓದು-ಬರಹ ತಿಳಿಯದ ಆ ಭಕ್ತನೇ ನಿಜವಾದ ಜ್ಞಾನಿ. ಜ್ಞಾನದ ಏಣಿ ಬಳಸಿ ಉಳಿದವರು ಮುಟ್ಟಬಯಸಿದ್ದನ್ನು, ಆತ ಭಕ್ತಿಯ ಶಕ್ತಿಯಿಂದ ಮುಟ್ಟಿ ತಬ್ಬಿಕೊಂಡಾಗಿತ್ತು.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.