![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Apr 21, 2020, 1:17 PM IST
ನೀವು ಮನೆಯಲ್ಲೋ, ಆಫಿಸಲ್ಲೋ ಕೆಲಸ ಮಾಡುವಾಗ, ಆಗಾಗ ಪಿತ್ತ, ವಾಕರಿಕೆ ಬಂದ್ಹಂಗೆ ಆಗೋದು, ತಲೆನೋವು ಬಂದು ವಾಂತಿ ಮಾಡೋದು ಎಲ್ಲಾ ಆಗಿಬಿಡುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾದಂತೆ, ಇವೆಲ್ಲ ಮತ್ತಷ್ಟು ಹೆಚ್ಚಾಗುತ್ತವೆ. ಅಂಥ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು, ಇಲ್ಲೊಂದಷ್ಟು ಟಿಪ್ಸ್ ಇದೆ. ಮೊದಲು ಜೀರಿಗೆಯನ್ನು ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ.
ಅದಕ್ಕೆ ಸ್ವಲ್ಪ ಸಾವಯವ ಬೆಲ್ಲ ಹಾಕಿಕೊಂಡು, ಬಿಸಿ ಇರುವಾಗಲೇ ಒಂದು ಲೋಟ ಕುಡಿಯಿರಿ. ಪಿತ್ತಕ್ಕೆ ಜೀರಿಗೆ ರಾಮಬಾಣ. ಎಷ್ಟೇ ವಾಂತಿಯ ಲಕ್ಷಣ ಇದ್ದರೂ, ನಿಧಾನಕ್ಕೆ ಇಳಿದು ಹೋಗುತ್ತದೆ. ಪಿತ್ತದಿಂದ ಉಂಟಾಗುವ ತಲೆನೋವು ಕೂಡ, ಇದರಿಂದ ಗುಣವಾಗುತ್ತದೆ. ಈ ಪಿತ್ತದ ಇನ್ನೊಂದು ಮುಖ ಅಂದರೆ, ಹೊಟ್ಟೆ ನೋವು ಬರಿಸೋದು. ಇದಕ್ಕೆ ಜೀರಿಗೆ ಕೆಲಸ ಮಾಡೋಲ್ಲ. ಜಾಯಿಕಾಯಿ ಇರಲೇಬೇಕು. ಇದರಲ್ಲಿ ಔಷಧೀಯ ಗುಣಗಳು ಇವೆ. ಆಂಟಿ ಆಕ್ಸಿಡೆಂಟ್ನಿಂದಾಗಿ ಹೊಟ್ಟೆ ನೋವು ಬೇಗ ಗುಣವಾಗುತ್ತದೆ. ಹೊಟ್ಟೆ ನೋವು, ಅನಗತ್ಯವಾಗಿ ತಿಂದು ಉಂಟಾಗುವ ಅಜೀರ್ಣದಿಂದಲೂ ಬರಬಹುದು.
ಜಾಯಿಕಾಯಿಗೆ ಅಜೀರ್ಣವನ್ನು ಓಡಿಸುವ ತಾಕತ್ತು ಇದೆ. ಬಿ. ಕಾಂಪ್ಲೆಕ್ಸ್, ವಿಟಮಿನ್ “ಸಿ’ ಗುಣ ಇರುವುದರಿಂದ ಪಿತ್ತದಿಂದ ಉಂಟಾಗುವ ಸುಸ್ತು, ಹೊಟ್ಟೆನೋವಿನ ಬಳಲಿಕೆ ಯಾವುದೂ
ಆಗುವುದಿಲ್ಲ. ಪಿತ್ತದ ಇನ್ನೊಂದು ಮುಖ ಎಂದರೆ, ಕಫ ಕಟ್ಟುವುದು. ಇದು ಹೆಚ್ಚಾದರೆ, ಉಸಿರಾಡಲು ಕೂಡ ಆಗದಷ್ಟು ಕಾಡುತ್ತದೆ. ಹೀಗಾಗಿ, ಜಾಯಿಕಾಯಿ ಪೀಸ್ನ ಜೊತೆ, ಒಂದೇ ಒಂದು ಕಲ್ಲುಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡಿದರೆ, ಕಫ ಹೋಗುತ್ತದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.