ಮಲೆನಾಡಿನಲಿ ಮರುಕಳಿಸಿದೆ ಸಂಭ್ರಮ: ನೋವಿನ ನಡುವೆಯೂ ನಲಿವು…


Team Udayavani, Apr 22, 2020, 4:44 PM IST

ಮಲೆನಾಡಿನಲಿ ಮರುಕಳಿಸಿದೆ ಸಂಭ್ರಮ

ಸಾಂದರ್ಭಿಕ ಚಿತ್ರ

ಕೋವಿಡ್‌ - 19 ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಜಾರಿಯಾದ ಕಾರಣದಿಂದ, ನಗರದ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿವೆ. ಜನಜೀವನವು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದೆ. ನಗರದ ಬೀದಿಗಳು ಬಿಕೋ ಎನ್ನುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಮಲೆನಾಡಿನ ಹಳ್ಳಿಗಳಲ್ಲಿ ಸಂಭ್ರಮ ತುಂಬಿಕೊಂಡಿದೆ. ಲಾಕ್‌ಡೌನ್‌ ಜಾರಿಯಾಗುವ ಸುಳಿವು ಸಿಕ್ಕ ಬಹಳಷ್ಟು ಜನರು, ನಗರ ಬಿಟ್ಟು ತಂತಮ್ಮ ಊರಿಗೆ ಬಂದಿದ್ದರಿಂದ, ಹೆಚ್ಚು ಕಡಿಮೆ ವೃದ್ಧಾಶ್ರಮದಂತಿದ್ದ ಹಳ್ಳಿಮನೆಗಳು, ಈಗ ಮಕ್ಕಳು- ಮೊಮ್ಮಕ್ಕಳ ಕಲರವದಿಂದ ತುಂಬಿಹೋಗಿವೆ. ಹಿರಿಯ ಸಂಬಂಧಿಯೊಬ್ಬರು ಕರೆ ಮಾಡಿ, “ಪ್ರತಿವರ್ಷ ಮಕ್ಕಳು ಊರಿಗೆ ಬರುತ್ತಿದ್ದರೂ ಟ್ಯೂಶನ್‌, ಆ ಕೆಲಸ, ಈ ಕೆಲಸವೆಂದು ಎರಡೇ ದಿನಗಳಲ್ಲಿ ವಾಪಸು ಹೊರಟುಬಿಡುತ್ತಿದ್ದರು. ಈಗ ಹಾಗಿಲ್ಲ. ಎಲ್ಲರೂ ಇಲ್ಲೇ ಇದ್ದಾರೆ. ಎಲ್ಲರೂ ಮನೆಯ ಸುತ್ತಲಿನ ಬೆಟ್ಟ, ತೋಟ ತಿರುಗಿ ಹಳ್ಳಿಯಲ್ಲಿ ಸಿಗುವ ಸಂಪಿಗೆ, ನೇರಳೆ, ಮುಳ್ಳೆಹಣ್ಣು, ಮುರುಗಲು ಮುಂತಾದ ಹಣ್ಣುಗಳನ್ನು ಇಷ್ಟಪಟ್ಟು ಸವಿಯುವುದು, ಖುಷಿ ಎನಿಸುತ್ತದೆ..’ ಎಂದು ಸಂತಸ ಹಂಚಿಕೊಂಡರು.

ಕೆಲಸದ ಒತ್ತಡ ಹಾಗೂ ಸಮಯದ ಕೊರತೆಯಿಂದಾಗಿ ಪಿಜ್ಜಾ, ಬರ್ಗರ್‌, ಹೋಟೆಲು ಊಟ ,ಸಿದ್ಧ ಆಹಾರದ ಪಾರ್ಸಲ್‌ಗ‌ಳಿಗೆ ಮೊರೆಹೋಗುತ್ತಿದ್ದ ನಗರವಾಸಿ ಮಹಿಳೆಯರು, ಈಗ ಮಲೆನಾಡಿನ ಮನೆಗಳಲ್ಲಿ ರುಚಿರುಚಿಯಾದ ತಾಜಾ ಅಡುಗೆ ಮಾಡಿ ಸವಿಯುತ್ತಿದ್ದಾರೆ. ಮನೆಯ ಸುತ್ತಮುತ್ತ ದೊರಕುವ ದೊಡ್ಡಪತ್ರೆ, ಎಲೆಗುರಿಗೆ, ಮಜ್ಜಿಗೆ ಹುಲ್ಲು, ಬಸಳೆ, ಹರಿವೆ, ನೆಲನೆಲ್ಲಿ, ಒಂದೆಲಗ, ಮುಂತಾದ ಸೊಪ್ಪುಗಳನ್ನು, ಹಲಸು, ಮಾವು, ಬಾಳೆದಿಂಡು, ಮರಗೆಣಸು ಮುಂತಾದವುಗಳನ್ನು ಅಡುಗೆಯಲ್ಲಿ ಬಳಸುತ್ತಿದ್ದಾರೆ. ಔಷಧ ಗುಣ ಹೊಂದಿರುವ ಸೊಪ್ಪುಗಳು, ಹಣ್ಣುಗಳನ್ನು ಆಹಾರದಲ್ಲಿ ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರೊಂದಿಗೆ, ಅವಶ್ಯ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ.

ನಿಸರ್ಗದತ್ತ ಶುದ್ಧ ಗಾಳಿ, ನೀರು ಆಹಾರಗಳಿಂದ ವಂಚಿತರಾಗುತ್ತಿದ್ದ ನಗರವಾಸಿಗಳಿಗೆ ಲಾಕ್‌ಡೌನ್‌ ಕೆಲವು ವಿಚಾರಗಳಲ್ಲಿ ನಷ್ಟ ಉಂಟುಮಾಡಿದ್ದರೂ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ವರವಾಗಿದೆ. ಜೊತೆಗೆ ಹಳ್ಳಿಯ ಆಹಾರ ಪದ್ಧತಿಯನ್ನು ಯುವಜನತೆ ಮತ್ತೂಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.

ರೇಖಾ ಭಟ್‌ ಹೊನ್ನಗದ್ದೆ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.