ಪಾಕಿಸ್ಥಾನ ಸೈಬರ್‌ ಯುದ್ಧ: ಭಾರತವನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸಲು ಕುತಂತ್ರ


Team Udayavani, Apr 24, 2020, 5:59 AM IST

ಪಾಕಿಸ್ಥಾನ ಸೈಬರ್‌ ಯುದ್ಧ: ಭಾರತವನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸಲು ಕುತಂತ್ರ

ಹೊಸದಿಲ್ಲಿ: ಗಡಿಯಲ್ಲಿ ಉಗ್ರಯುದ್ಧ ನಡೆಯುತ್ತಲೇ ಇದೆ. ಇನ್ನೊಂದೆಡೆ ಪಾಕ್‌, ಭಾರತದ ವಿರುದ್ಧ ಸೈಬರ್‌ ಯುದ್ಧವನ್ನೂ ಆರಂಭಿಸಿದೆ.

ಕೋವಿಡ್ 19 ವೈರಸ್ ನೆಪವೊಡ್ಡಿ ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಾ, ಭಾರತ- ಗಲ್ಫ್ ರಾಷ್ಟ್ರಗಳ ಸಂಬಂಧಕ್ಕೆ ಪಾಕ್‌ ಹುಳಿ ಹಿಂಡಲೆತ್ನಿಸುತ್ತಿದೆ.

ಹೂಡಿಕೆ, ಇನ್ನಿತರೆ ಕ್ಷೇತ್ರಗಳಲ್ಲಿ ಭಾರತ- ಗಲ್ಫ್ ರಾಷ್ಟ್ರಗಳ ಸಂಬಂಧ ಬಹಳ ಆಪ್ತವಾಗಿದೆ. ಇದನ್ನು ಸಹಿಸದ ಪಾಕ್‌ ಇದೀಗ, ಟ್ವಿಟರ್‌ನಲ್ಲಿ ಚಾವೋಸ್‌ ಇಂಡಿಯಾ, ಶೇಮ್‌ ಆನ್‌ ಮೋದಿ- ಇತ್ಯಾದಿ ಹ್ಯಾಷ್‌ಟ್ಯಾಗ್‌ ಸೃಷ್ಟಿಸಿ, ಭಾರತಕ್ಕೆ ಇಸ್ಲಾಮ್‌ ವಿರೋಧಿ ಪಟ್ಟ ಕಟ್ಟಲೆತ್ನಿಸುತ್ತಿದೆ. ಪಾಕ್‌ನ ಗುಪ್ತಚರ ಸಂಸ್ಥೆ (ಐಎಸ್‌ಐ) ವ್ಯವಸ್ಥಿತವಾಗಿ ಈ ಷಡ್ಯಂತ್ರದಲ್ಲಿ ತೊಡಗಿಸಿಕೊಂಡಿದೆ ಎಂದು “ಹಿಂದೂಸ್ತಾನ್‌ ಟೈಮ್ಸ್’ ವರದಿ ಮಾಡಿದೆ.

ಷಡ್ಯಂತ್ರ ಹೇಗೆ?: ಸುದ್ದಿ ಮುಟ್ಟಿಸುವವರು, ವರದಿ ಸಂಗ್ರಹಕಾರರು, ಹಂಚಿಕೆದಾರರು- ಈ ಮೂವರು ಭಾರತದಲ್ಲಿನ ಪ್ರತ್ಯೇಕ ಘಟನೆ­ಗಳ ಫೋಟೋ, ವಿಡಿಯೊಗಳನ್ನು ಕಲೆಹಾಕಿ, ವೈರಲ್‌ ಮಾಡುವವರಿಗೆ ದಾಟಿಸುತ್ತಾರೆ. ಅವರು ಇವುಗಳಿಗೆ ಭಾರತ ಇಸ್ಲಾಮ್‌ ವಿರೋಧಿ ಎನ್ನುವಂಥ ಸುಳ್ಳು ವಿವರಣೆ ಸೃಷ್ಟಿಸಿ, ಪ್ರಭಾವ­ ಶಾಲಿಗಳಿಗೆ ಪೋಸ್ಟ್‌ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.

ಅದರಲ್ಲೂ ಒಬ್ಟಾಕೆ, ಕವಿ ಮೊಹಮ್ಮದ್‌ ಇಕ್ಬಾಲ್‌ ಕವಿತೆಯ ಮೂಲಕ ಟ್ವಿಟ್ಟರ್‌ ಖಾತೆ ತೆರೆದಳು. ದಿನ ಮುಗಿಯುವುದರೊಳಗೆ ಆಕೆ 200ಕ್ಕೂ ಹೆಚ್ಚು ಟ್ವೀಟ್‌- ರೀಟ್ವೀಟ್‌ ಮಾಡಿ, ಭಾರತವನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ.

ಪಾಕ್‌ನ ಗ್ಯಾಂಗ್‌ ಎಲ್ಲೆಲ್ಲಿದೆ?: ಗಲ್ಫ್ ರಾಷ್ಟ್ರ­ಗಳಲ್ಲಿ ಹಲವು ಏಜೆಂಟ್‌ಗಳನ್ನು ಪಾಕ್‌ ಹೊಂದಿದೆ. ಬಹ್ರೈರೇನ್‌, ಕುವೈತ್‌, ಒಮನ್‌, ಕತಾರ್‌, ಸೌದಿ ಅರೇಬಿಯಾ, ಯುಎಇಗಳಲ್ಲಿ ಪಾಕ್‌ ಪರ ಟ್ವಿಟ್ಟರ್‌ ಬಳಕೆದಾರರ ಜಾಲವಿದೆ ಎಂದು ವರದಿ ಹೇಳಿದೆ.

ಗಲ್ಫ್ ದೇಶಗಳಲ್ಲಿ ಭಾರತದ ಮೇಲೆ ಪಾಕ್‌ ಅಪಪ್ರಚಾರ ನಡೆಸುವುದು ಇದೇ ಮೊದಲೇನಲ್ಲ. ಹಿಂದೆ ಕಾಶ್ಮೀರದ 370ನೇ ಕಲಂ ರದ್ದು ಮಾಡಿದಾಗಲೂ ಪಾಕ್‌ ಹೀಗೆಯೇ ಅಪಪ್ರಚಾರ ಮಾಡಿತ್ತು.

ಪಾಕ್‌ಗೆ ಅಮೆರಿಕ ಶಾಕ್‌
ಉಗ್ರರನ್ನು ಪೋಷಿಸುತ್ತಿರುವ ಕಾರಣಕ್ಕೆ ಜಾಗತಿಕವಾಗಿ ಕಪ್ಪುಪಟ್ಟಿ ಸೇರುವ ಆತಂಕದಲ್ಲಿರುವ ಪಾಕ್‌ಗೆ, ಅಮೆರಿಕ ಆಘಾತ ನೀಡಿದೆ. ಪರಮಾಣು ಉಪ ಉತ್ಪನ್ನಗಳನ್ನು ರಫ್ತು ಮಾಡಲು, ಅಮೆರಿಕ ಹಿಂದೇಟು ಹೊಡೆದಿದೆ. ಪರಮಾಣು ವಿಚಾರದಲ್ಲಿ ಪಾಕ್‌ ನಡತೆ ಸರಿ ಇಲ್ಲದ ಕಾರಣ, ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

ಕೋವಿಡ್ 19 ವೈರಸ್ ನ ಸಂದಿಗ್ಧತೆಯ ಬಗ್ಗೆ ತಿಳಿಯಲು ಟ್ರಂಪ್‌, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಜತೆ ಫೋನಿನಲ್ಲಿ ಮಾತನಾಡಿದ ಬೆನ್ನಲ್ಲೇ , ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ಯುಎಸ್‌ ನ್ಯೂಕ್ಲಿಯರ್‌ ರೆಗ್ಯುಲೇಟರಿ ಕಮಿಷನ್‌ ನಿಂದ (ಎನ್‌ಆರ್‌ಸಿ) ಪಾಕ್‌ ಮೊದಲಿನಂತೆ ಸಲೀಸಾಗಿ ಪರಮಾಣು ಉಪ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

25 ಸಾವಿರ ಇಮೇಲ್‌ ಐಡಿ, ಪಾಸ್‌ವರ್ಡ್‌ ಲೀಕ್‌!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು (ಎನ್‌ಐಎಚ್‌), ವಿಶ್ವ ಬ್ಯಾಂಕ್‌, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ಗೇಟ್ಸ್‌ ಪ್ರತಿಷ್ಠಾನ ಮತ್ತು ಇತರ ಪ್ರತಿಷ್ಠಿತ, ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಂಬಂಧಿಸಿದ ಸುಮಾರು 25,000 ಇಮೇಲ್‌ ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಕಿಡಿಗೇಡಿಗಳು ಅಂತರ್ಜಾಲದಲ್ಲಿ ಜಗಜ್ಜಾಹೀರು ಮಾಡಿ­ದ್ದಾರೆ. ಈ ವಿಷಯವನ್ನು ಸೈಟ್ ಇಂಟಲಿಜೆನ್ಸ್‌ ಗ್ರೂಪ್‌ ಖಾತ್ರಿ­ಪಡಿಸಿದೆ.

ಈ ಪೈಕಿ ಎನ್‌ಐಎಗೆ ಸಂಬಂಧಿ­ಸಿದ ಅತಿ ಹೆಚ್ಚು ಅಂದರೆ, 9,938 ಇಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ಗಳಿದ್ದು, ರೋಗ ನಿಯಂತ್ರಣ ಕೇಂದ್ರ­ಗಳಿಗೆ ಸೇರಿದ 6,857, ವಿಶ್ವ ಬ್ಯಾಂಕ್‌ನ 5,120 ಮತ್ತು ಡಬ್ಲ್ಯೂಎಚ್‌ಒನ 2,732 ಇಮೇಲ್‌ ವಿಳಾಸ ಮತ್ತು ಪಾಸ್‌ವರ್ಡ್‌ ಗಳನ್ನು ಆನ್ಲೈನ್‌ನಲ್ಲಿ ಹರಿಬಿಡಲಾಗಿದೆ.

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.