ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆ: ತತ್ಕಾಲಕ್ಕೆ ಸಮಸ್ಯೆ ಪರಿಹಾರ
ಇನ್ಟೆಕ್ ವೆಲ್ ಹೂಳು ತೆರವು
Team Udayavani, Apr 27, 2020, 5:12 AM IST
ಕಲ್ಲಡ್ಕ: ಬಹುಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಎಡವಟ್ಟಿನಿಂದ ಕೆಲವು ದಿನಗಳಿಂದ ಸ್ಥಳೀಯವಾಗಿ ಕುಡಿಯುವ ನೀರು ಸರಬರಾಜು ನೀಲುಗಡೆ ಆಗಿತ್ತು. ಸಮಸ್ಯೆ ತಿಳಿಯುತ್ತಿದ್ದಂತೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತತ್ಕಾಲಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.
ನೇತ್ರಾವತಿ ನದಿ ನೀರಿನ ಮಟ್ಟ ಕುಸಿತದಿಂದ ಶಂಭೂರು ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಯ ಬಿಡಲಾಗಿತ್ತು. ಇದರಿಂದ ಮಾಣಿ ಬಹುಗ್ರಾಮ ಯೋಜನೆಯ ಜ್ಯಾಕ್ವೆಲ್ಗೆ ನೀರಿನ ಹರಿವು ನಿಲುಗಡೆ ಆಗಿತ್ತು. ಈ ಸಂದರ್ಭ ಇನ್ಟೆಕ್ ವೆಲ್ನಿಂದ ನೀರು ಮೇಲಕ್ಕೆತ್ತಬೇಕಿತ್ತು. ಆದರೆ ಅಲ್ಲಿ ಮರಳು ತುಂಬಿ ಅದು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿತ್ತು. ಕೇವಲ ಆರು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಈ ಯೋಜನೆ ರೂಪಿಸುವಾಗ ಎಡವಿದ್ದೆ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಹರಿಯುವ ನೀರನ್ನು ನಂಬಿ ಯೋಜನೆ ರೂಪಿಸಿದಂತಿತ್ತು. ಈ ನೀರು ನಿಂತಾಗ ನೀರು ಇಲ್ಲವಾಗಿತ್ತು.
ಸಮಸ್ಯೆಗೆ ಕಾರಣ
ನದಿಯ ನಡುವೆ ಆಳ ಪ್ರದೇಶದಲ್ಲಿ ಮಾಡಿದ್ದ ಇನ್ಟೆಕ್ ವೆಲ್ನಿಂದ ಜಾಕ್ವೆಲ್ಗೆ ಸಂಪರ್ಕಿಸುವ ಕೊಳವೆಯಲ್ಲಿ ಹೂಳು ತುಂಬಿಕೊಂಡಿದ್ದು ನೀರು ಹರಿಯದಿರಲು ಕಾರಣವಾಗಿತ್ತು. ಕಡೇ ಶ್ವಾಲ್ಯ-ಅಜಿಲಮೊಗರು ಸಂಪರ್ಕದ ಸೇತುವೆ ನಿರ್ಮಾಣಕ್ಕೆ ನದಿಯಲ್ಲಿ ಹಾಕಿದ್ದ ಮಣ್ಣು ಕೊಳವೆಯಲ್ಲಿ ಸೇರಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಈ ಮಣ್ಣನ್ನು ಮೊದಲೇ ತೆರವುಗೊಳಿಸುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಜ್ಯಾಕ್ವೆಲ್ಗಿಂತ ನೀರಿನ ಮಟ್ಟ ಎತ್ತರದಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ. ನದಿಯ ಮದ್ಯದಲ್ಲಿ ಇರುವ ಇನ್ಟೆಕ್ ವೆಲ್ನಿಂದ ಜ್ಯಾಕ್ವೆಲ್ಗೆ ನೀರು ಹರಿದು ಬರುವ ಸಂಪರ್ಕ ಕೊಳವೆಯಲ್ಲಿ ಮರಳು ತುಂಬಿ ಅಡಚಣೆಗೆ ಕಾರಣವಾಗಿತ್ತು. ಇನ್ಟೆಕ್ ವೆಲ್ ಐದು ಮೀಟರ್ ಆಳವಾಗಿದ್ದು. ಈಗ ನೀರಿದೆ. ಜಿಲ್ಲಾಧಿಕಾರಿಗಳ ಅನುಮತಿಯಂತೆ ಹೂಳು ತೆರವು ಮಾಡಲಾಗಿದೆ. ಈಗ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಗ್ರಾ.ಕು.ನೀ. ಮತ್ತು ನೈರ್ಮಲ್ಯ ಉಪವಿಭಾಗ ಬಂಟ್ವಾಳ ಇದರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಹೇಳಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು
Audio controversy: ಬಿ.ಸಿ.ರೋಡ್: ಉದ್ವಿಗ್ನಗೊಂಡು ತಿಳಿಯಾದ ಪರಿಸ್ಥಿತಿ
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
Eid Milad: ರ್ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.