ಲಾಕ್‌ಡೌನ್‌ ಅನಂತರ ಹೇಗಿದೆ ಭಾರತದ ಸ್ಥಿತಿ?


Team Udayavani, Apr 28, 2020, 3:16 PM IST

ಲಾಕ್‌ಡೌನ್‌ ಅನಂತರ ಹೇಗಿದೆ ಭಾರತದ ಸ್ಥಿತಿ?

ಭಾರತವು ಈಗ ಲಾಕ್‌ಡೌನ್‌ನ 5ನೇ ವಾರದಲ್ಲಿದೆ. ದೇಶದಲ್ಲಿ ಈಗ ಕೋವಿಡ್ ಸೋಂಕಿತರ ಸಂಖ್ಯೆ ಇಪ್ಪತ್ತೇಳು ಸಾವಿರ ಗಡಿದಾಟಿದೆ, ಎಂಟು ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೂ ಲಾಕ್‌ಡೌನ್‌ನಿಂದಾಗಿ ವ್ಯಾಪಕವಾಗಿ ರೋಗ ಹರಡುವಿಕೆ ತಗ್ಗಿದೆ ಎನ್ನುವುದು ಸತ್ಯ. ಲಾಕ್‌ಡೌನ್‌ ಇಲ್ಲದೇ ಹೋಗಿದ್ದರೆ, ದೇಶದಲ್ಲೀಗ ಸೋಂಕಿತರ ಸಂಖ್ಯೆ ಲಕ್ಷಗಳಲ್ಲಿ ಇರುತ್ತಿತ್ತು ಎನ್ನಲಾಗುತ್ತಿದೆ. ಆದಾಗ್ಯೂ ಅಪಾಯದ ತೂಗುಗತ್ತಿ ಭಾರತದ ಮೇಲಿಂದ ದೂರ ಸರಿದಿಲ್ಲ, ಮೇ ತಿಂಗಳಾಂತ್ಯದೊಳಗೆ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ವೃದ್ಧಿಸಲಿದೆ ಎಂಬ ಎಚ್ಚರಿಕೆಯನ್ನೂ ವೈಜ್ಞಾನಿಕ ವಲಯ ಕೊಡುತ್ತಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ನಂತರದಿಂದ ದೇಶದಲ್ಲಿ ಪರಿಸ್ಥಿತಿ ಹೇಗಿದೆ, ಮುಂದೆ ಹೇಗಿರಲಿದೆ…ಮಾಹಿತಿ ಇಲ್ಲಿದೆ…

ಕಳಂಕದ ಭಯ ಅಪಾಯ ಹೆಚ್ಚಿಸುತ್ತಿದೆ
ಭಾರತದಲ್ಲಿ ಕೋವಿಡ್‌-19 ಸುತ್ತಲೂ ಸಾಮಾಜಿಕ ಕಳಂಕದ ಭಾವನೆಯಿರುವುದರಿಂದಾಗಿ, ಮರಣ ಪ್ರಮಾಣ ಹೆಚ್ಚಾಗುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌ನ(ಏಮ್ಸ್‌) ನಿರ್ದೇಶಕ ರಂದೀಪ್‌ ಗುಲೇರಿಯಾ. ಕೇಂದ್ರ ಸರಕಾರದ ಆರೋಗ್ಯ ಮಾರ್ಗದರ್ಶಕ ಪರಿಣತರಲ್ಲಿ ಒಬ್ಬರಾಗಿರುವ ಗುಲೇರಿಯಾ ಅವರು “”ಕೊರೊನಾ ಗಂಭೀರ ಕಾಯಿಲೆಯಲ್ಲ. ಚಿಕಿತ್ಸೆ ಪಡೆದು ಚೇತರಿಸಿಕೊಂಡವರೇ ಇದಕ್ಕೆ ಉದಾಹರಣೆ. ಆದರೆ ಸೋಂಕಿತರನ್ನು ಕಳಂಕಿತರಂತೆ ನೋಡಲಾಗುತ್ತಿರುವುದರಿಂದಾಗಿ, ಎಲ್ಲರೂ ಹೆದರುತ್ತಿದ್ದಾರೆ. ರೋಗಲಕ್ಷಣ ಕಾಣಿಸಿಕೊಂಡರೂ ಸಮಾಜಕ್ಕೆ ಹೆದರಿ, ಮುಚ್ಚಿಡುತ್ತಾ ಹೋದರೆ ಅಪಾಯ ಹೆಚ್ಚುತ್ತದೆ. ಅನೇಕರು ತಮಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಾಗ ಚಿಕಿತ್ಸೆಗೆ ಬರುವುದಿಲ್ಲ, ಬದಲಾಗಿ ಇನ್ನೇನು ಉಸಿರಾಡುವುದಕ್ಕೇ ಆಗುವುದಿಲ್ಲ ಎಂಬ ಸ್ಥಿತಿ ತಲುಪಿದಾಗ ವೈದ್ಯರೆಡೆಗೆ ಧಾವಿಸುತ್ತಾರೆ. ಆಗ ಅಪಾಯ ಅಧಿಕವಿರುತ್ತದೆ. ಸೋಂಕಿತರಲ್ಲಿ 80 ಪ್ರತಿಶತ ರೋಗಿಗಳಲ್ಲಿ ಸಾಮಾನ್ಯ ಲಕ್ಷಣಗಳು ಇರುತ್ತವೆ, 15 ಪ್ರತಿಶತ ಜನರನ್ನು ಆಕ್ಸಿಜನ್‌ ಥೆರಪಿಯಿಂದ ಗುಣಪಡಿಸಬಹುದು, ಕೇವಲ 5 ಪ್ರತಿಶತ ಜನರಿಗೆ ವೆಂಟಿಲೇಟರ್‌ ಬೇಕಾಗುತ್ತದೆ.’ ಎನ್ನುವ ಗುಲೇರಿಯಾ, ರೋಗಿಗಳ ಕುಟುಂಬವನ್ನು ಎಲ್ಲರೂ ಬೆಂಬಲಿಸುವ ಅಗತ್ಯವಿದೆ ಎಂದು ಸಲಹೆ ನೀಡುತ್ತಾರೆ.

2 ಲಕ್ಷ ತಲುಪಿರುತ್ತಿತ್ತು!
ಮಾರ್ಚ್‌ 24ರಂದು ಲಾಕ್‌ಡೌನ್‌ ಆರಂಭವಾದಾಗ, ದೇಶದಲ್ಲಿ ಕೋವಿಡ್‌-19 ಸೋಂಕಿತರ ದಿನನಿತ್ಯದ ಬೆಳವಣಿಗೆ ಪ್ರಮಾಣ 21.4 ಪ್ರತಿಶತದಷ್ಟಿತ್ತು. ಅದೇ ವೇಗದಲ್ಲೇ ಈ ಸಾಂಕ್ರಾಮಿಕವೇನಾದರೂ ಹರಡಿದ್ದರೆ, ಒಂದು ತಿಂಗಳಲ್ಲಿ (ಅಂದರೆ ಎಪ್ರಿಲ್‌ 24ರ ವೇಳೆಗೆ) 2 ಲಕ್ಷಕ್ಕೆ ಏರುತ್ತಿತ್ತು. ಆದರೆ ಎಪ್ರಿಲ್‌ 24ಕ್ಕೆ ದೇಶದಲ್ಲಿ 23, 077 ಪ್ರಕರಣಗಳು ದಾಖಲಾದವು. ಅಂದು ದೇಶದಲ್ಲಿ ಸೋಂಕಿತರ ಸರಾಸರಿ ಏರಿಕೆ ಪ್ರಮಾಣ 8.1 ರಷ್ಟಿತ್ತು. ಆದಾಗ್ಯೂ, ಸೋಂಕು ಯಾವ ಪ್ರಮಾಣದಲ್ಲಿ ಹಾಗೂ ಎಷ್ಟು ವೇಗವಾಗಿ ಹರಡುತ್ತದೆ ಎನ್ನುವುದಕ್ಕೆ ಅನೇಕ ಅಂಶಗಳು ಕೆಲಸ ಮಾಡುತ್ತವೆ.

ಬೆಳವಣಿಗೆ ವೇಗ ತಗ್ಗಲೇಬೇಕು
ಎಪ್ರಿಲ್‌ 24ರ ವೇಳೆಗೆ ದೇಶದಲ್ಲಿ ಕೊರೊನಾ ಪ್ರಕರಣಗಳ ಬೆಳವಣಿಗೆ ಪ್ರಮಾಣ ನಿತ್ಯ 8 ಪ್ರತಿಶತ ದಾಖಲಾಗಿದೆ. ಇದೇ ವೇಗವೇ ಸ್ಥಿರವಾಗಿ ಮುಂದುವರಿದರೆ, ಮೇ 1ಕ್ಕೆ ಭಾರತದಲ್ಲಿ 39,550 ಪ್ರಕರಣಗಳು ಹಾಗೂ ಮೇ 24ರ ಒಳಗೆ 2,32,216 ಪ್ರಕರಣಗಳು ದಾಖಲಾಗಬಹುದು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.