![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 30, 2020, 12:05 PM IST
ಹೊಸದಿಲ್ಲಿ: ಆತಿಥ್ಯ ನಗರದ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಭಾರತಕ್ಕೆ ನೀಡಲಾಗಿದ್ದ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಆತಿಥ್ಯ ಹಕ್ಕನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ (ಎಐಬಿಎ) ಹಿಂದೆಗೆದುಕೊಂಡಿದೆ. ಎಐಬಿಎಯು ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್ಐ) ಹೇಳಿಕೊಂಡಿದೆ.
2017ರಲ್ಲಿ ಭಾರತಕ್ಕೆ ನೀಡಲಾಗಿದ್ದ 2021ರ ವಿಶ್ವ ಬಾಕ್ಸಿಂಗ್ ಕೂಟದ ಆತಿಥ್ಯ ಹಕ್ಕನ್ನು ಈಗ ಎಐಬಿಎ ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್ ನಗರಕ್ಕೆ ನೀಡಿದೆ.
ಶುಲ್ಕ ಪಾವತಿಯಲ್ಲಿ ವಿಳಂಬವಾಗಿದೆ ಎಂಬುದನ್ನು ಬಿಎಫ್ಐ ಒಪ್ಪಿಕೊಂಡಿದೆ. ಇದಕ್ಕೆ ಎಐಬಿಎಯ ನಿರ್ಧಾರವೇ ಕಾರಣವೆಂದು ದೂರಿದೆ. ಹಣವನ್ನು ಯಾವ ಖಾತೆಗೆ ವರ್ಗಾಯಿಸಬೇಕೆಂಬ ವಿಷಯದಲ್ಲಿ ಎದ್ದ ಸಮಸ್ಯೆಯನ್ನು ಪರಿಹರಿಸಲು ಎಐಬಿಎ ವಿಫಲವಾಗಿದ್ದರಿಂದ ಶುಲ್ಕ ಪಾವತಿಯಲ್ಲಿ ವಿಳಂಬವಾಗಿದೆ ಎಂದು ಬಿಎಫ್ಐ ಸ್ಪಷ್ಟಪಡಿಸಿದೆ.
ಆತಿಥ್ಯ ಶುಲ್ಕವಾದ 4 ಮಿಲಿಯನ್ ಡಾಲರ್ ಮೊತ್ತವನ್ನು ಕಳೆದ ವರ್ಷದ ಡಿಸೆಂಬರ್ 2ರ ಮೊದಲು ಪಾವತಿಸಬೇಕಿತ್ತು. ಆತಿಥ್ಯ ನಗರ ಒಪ್ಪಂದದ ನಿಯಮದಂತೆ ಹೊಸದಿಲ್ಲಿ ಆತಿಥ್ಯ ಶುಲ್ಕವನ್ನು ಪಾವತಿಸುವ ಜವಾಬ್ದಾರಿ ಪೂರೈಸದ ಹಿನ್ನೆಲೆಯಲ್ಲಿ ಎಐಬಿಎ ಒಪ್ಪಂದವನ್ನು ರದ್ದುಪಡಿಸಿದೆ. ಭಾರತ ಈಗ ರದ್ದುಗೊಂಡಿದ್ದಕ್ಕೆ 500 ಡಾಲರ್ ದಂಡ ಪಾವತಿಸಬೇಕಾಗಿದೆ ಎಂದು ಎಐಬಿಎ ಪ್ರಕಟನೆಯಲ್ಲಿ ತಿಳಿಸಿದೆ.
ಹಣವನ್ನು ಯಾವ ಖಾತೆಗೆ ವರ್ಗಾ ಯಿಸಬೇಕೆಂದು ಎಐಬಿಎ ಸ್ಪಷ್ಟವಾಗಿ ತಿಳಿಸಿಲ್ಲ ಮತ್ತು ಪಾವತಿಗೆ ಕೊನೆ ದಿನದ ಮೊದಲೇ ಈ ಕೂಟಕ್ಕಾಗಿ ಹೊಸ ಬಿಡ್ಗೆ ಆಹ್ವಾನ ನೀಡಿತ್ತು ಎಂದು ಬಿಎಫ್ಐ ಮುಖ್ಯಸ್ಥ ಅಜಯ್ ಸಿಂಗ್ ಹೇಳಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.