ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

ಈ ಲಾಕ್ ಡೌನ್ ಕೃಷಿಕರಿಂದ ಹಿಡಿದು ಕಾರ್ಮಿಕ, ಮಾಲೀಕ, ವೈದ್ಯಾಧಿಕಾರಿಗಳಿಗೆ ಪೊಲೀಸರಿಗೆ ಹಾಗೂ ಎಲ್ಲರಿಗೂ ಹೊಸದು.

Team Udayavani, May 4, 2020, 3:52 PM IST

ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

ಮೂರನೇ ಕ್ಲಾಸಿನಲ್ಲಿದ್ದಾಗ ಕೇಳಿದ್ದ ಗಾದೆ ಮಾತೊಂದು ಈ ಲಾಕ್ ಡೌನ್ ಅವಧಿಯಲ್ಲಿ ನೆನಪಾಯಿತು. ಅದೇನೆಂದರೆ, ‘ ಹಾಸಿಗೆ ಇದ್ದಷ್ಟೇ ಕಾಲು ಚಾಚು.’ ಬಾಲ್ಯದಲ್ಲಿದ್ದಾಗ ತಲೆಗೆ ಹತ್ತಿದ್ದು ಹಾಸಿಗೆ ಮತ್ತು ಹೊದಿಕೆಯ ಉಪಯೋಗ ಮಾತ್ರ ಅದರ ಒಳಾರ್ಥವಲ್ಲ. ಈ ಸಮಯದಲ್ಲಿ ಈ ಗಾದೆಯ ಪ್ರಸ್ತುತತೆ ಏನೆಂದರೆ, ಇಲ್ಲಿ ಚಾಪೆ ಅಥವಾ ಹಾಸಿಗೆ ನಾವು ಸಂಪಾದಿಸಿದ ಹಣದಂತೆ. ಗಾದೆಯ ಮುಂದುವರಿದ ಭಾಗ, ಇರುವ ಸಂಪಾದನೆಯಲ್ಲೇ ತೃಪ್ತಿಪಡಬೇಕು ಎನ್ನುವುದನ್ನು ಸೂಚಿಸುತ್ತದೆ.

ಇರುವ ಹಾಸಿಗೆಯಲ್ಲೇ ಕಾಲು ಚಾಚಲಾಗದ ನನ್ನ ಕೆಲ ಮಿತ್ರರಿಗೆ ಲಾಕ್ ಡೌನ್ ಅದನ್ನೂ ಕಲಿಸಿಕೊಟ್ಟಿತು. ಅಗತ್ಯತೆ ಹಾಗೂ ಬಯಕೆ ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸಿತು. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ’ ಜೀವನವಲ್ಲ ,‌ ಇರುವುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ತೃಪ್ತಿಯಿಂದಿರುವುದೇ ಜೀವನ ಎಂದು ಕಲಿಸಿತು. ಹಾಗಂತ COVID-19 ತಡೆಗಟ್ಟಲು ಲಾಕ್ ಡೌನ್ ಎಲ್ಲದಕ್ಕೂ ನಿಯಂತ್ರಣ ಹೇರಿಲ್ಲ. ಕಲ್ಪನೆಗೆ, ಸೃಜನಶೀಲತೆಗೆ ಹಾಗೂ ಆತ್ಮಾವಲೋಕನಕ್ಕೆ ಸಾಕಷ್ಟು ಸಮಯ ನೀಡಿದೆ.

ಈ 4G ಯುಗದಲ್ಲಿ ನಮ್ಮಂತವರಿಗೆ ಅರೆತಾಸು ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವೆಲ್ಲಿದೆ? ನನ್ನ ಕನಸೇನಾಗಿತ್ತು?.. ಗುರಿ ಏನಾಗಿತ್ತು?.. ಆ ಗುರಿ ತಲುಪಿದ್ದೇನೆಯೇ?.. ತಲುಪುವ ದಾರಿಯಲ್ಲಿದ್ದೇನೆಯೇ?.. ಸರಿ ದಾರಿಯಲ್ಲಿದ್ದೇನೆಯೇ? ಇಲ್ಲವೇ? ಅಥವಾ reboot ಮಾಡಬೇಕೇ?.. ಈ ತರಹದ ಚಿಂತನೆಗಳಿಗೆ ಅವಕಾಶ ನೀಡಿದ್ದು ಲಾಕ್ ಡೌನ್.

ವೃತ್ತಿಯಲ್ಲಿ ಉಪನ್ಯಾಸಕನಾಗಿರುವುದರಿಂದ ವಿದ್ಯಾರ್ಥಿಗಳಿಗೆ online ಕ್ಲಾಸ್ ಅರ್ಥವಾಯಿತೇ? ಇಲ್ಲವೇ? ಎಂಬ ಗೊಂದಲ ಬೇರೆ. ದೈನಂದಿನ ತರಗತಿಯಲ್ಲಾದರೆ ಪ್ರಶ್ನೆಗಳನ್ನ ಕೇಳಿ ತಿಳಿದುಕೊಳ್ಳಬಹುದು, ಆದರೆ online ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ಸ್ಪಂದಿಸುವುದಿಲ್ಲ.

ಈ ಲಾಕ್ ಡೌನ್ ಕೃಷಿಕರಿಂದ ಹಿಡಿದು ಕಾರ್ಮಿಕ, ಮಾಲೀಕ, ವೈದ್ಯಾಧಿಕಾರಿಗಳಿಗೆ ಪೊಲೀಸರಿಗೆ ಹಾಗೂ ಎಲ್ಲರಿಗೂ ಹೊಸದು. ಈ ನಡುವೆ ನನ್ನನ್ನು ಕಾಡಿದ ಕುತೂಹಲಕಾರಿ ಸಂಗತಿಯೆಂದರೆ, ಇತ್ತೀಚಿಗೆ ನೋಡಿದ ಮಲಯಾಳಂ ಸಿನೆಮಾ ‘ ಅಯ್ಯಪ್ಪನುಂ ಕೋಶಿಯುಂ’ ಹಾಗೂ ಬೆಳಗಾವಿಯಲ್ಲಿ ನಡೆದ ಒಂದು ಘಟನೆ. ಪೊಲೀಸ್ ಅಧಿಕಾರಿ ಮತ್ತು ಮಾಜಿ ಯೋಧನ ನಡುವಿನ ego clash ಈ ಸಿನಿಮಾದ ಕಥೆಯಾಗಿತ್ತು. ಕಾಕತಾಳೀಯ ಎಂಬಂತೆ ಬೆಳಗಾವಿಯ ಘಟನೆ ಸಹ ಪೊಲೀಸ್ ಹಾಗೂ ಯೋಧನಿಗೆ ಸಂಬಂಧಪಟ್ಟಿರುವುದು ನನ್ನ ಕುತೂಹಲ ಹೆಚ್ಚಲು ಕಾರಣವಾಯಿತು.

ಕೊನೆಯ ಮಾತು
ಐದಾರು ಹೂಗಳನ್ನು ಕೊಯ್ದಾದ ನಂತರ

ಮಾಲಿಗೆ ನೆನಪಾಯಿತು ಮಗಳ‌ ಜನ್ಮದಿನ

ಆರನೇಯದ್ದನ್ನು ಅಕ್ಕರೆಯಿಂದ ಆಕೆಗೆಂದೆ

ಕಿಸೆಯಲ್ಲಿಟ್ಟುಕೊಂಡು

ಮರುದಿನ ಅಂಗಿ ಒಗೆಯುವ ಮುನ್ನ

ತಪಾಸಣೆಯಲ್ಲಿ

ಅದು ಅವಳಿಗೆ ಸಿಕ್ಕಿತು.

(ಜಯಂತ್ ಕಾಯ್ಕಿಣಿಯವರ ಶ್ರಾವಣ ಮಧ್ಯಾಹ್ನ ನೀಲಿಮಳೆ ಯಿಂದ)

ಲಾಕ್ ಡೌನ್ ಮಧ್ಯೆ ಈ ಸಾಲುಗಳು ಆಗಾಗ ನೆನಪಾಗುತ್ತದೆ. ಕಾರಣ ಪ್ರಕೃತಿ ನಿಯಮ ಪಾಲಿಸದ ಮಾನವನಿಗೆ ಈಗ ಹುಟ್ಟುಹಬ್ಬ ಆಚರಿಸುವ ಸಂಭ್ರಮವಿಲ್ಲ , ಹೂ ಕೊಯ್ಯಲು ಮಾಲಿಯಿಲ್ಲ‌ , ಹೂದೋಟದ ಮಾಲೀಕನೂ ಇಲ್ಲ. ಆದರೆ ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ.

ಸುಧೇಶ್ ಚಂದ್ರ ಟಿ
ಉಪನ್ಯಾಸಕ ಪುತ್ತೂರು

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.