![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 7, 2020, 3:10 PM IST
ಬಜಪೆ : ಮಂಗಳೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ವೊಂದು ಜೋಕಟ್ಟೆಯಿಂದ ಬಜಪೆಗೆ ಕಡೆಗೆ ಬರುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದ ಕಾರಣ ಸವಾರ ಮಂಜುನಾಥ ಆಚಾರ್ಯ ಅವರಿಗೆ ಕಾಲಿಗೆ ಗಂಭೀರ ಪೆಟ್ಟಾಗಿದ್ದು ಅವರ ಪತ್ನಿ ಶಶಿಕಲಾ (48) ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಸುಮಾರು 12.30 ವೇಳೆಗೆ ನಡೆದಿದೆ.
ಶಶಿಕಲಾ ಅವರ ತಾಯಿ ಮನೆ ಬಜಪೆ ಭಜನ ಮಂದಿರ ಸಮೀಪದಲ್ಲಿದ್ದು ಶಶಿಕಲಾ ಅವರ ತಂದೆಯ ಕಾರ್ಯ ನಿಮಿತ್ತ ಮಂಜುನಾಥ ಆಚಾರ್ಯ ಹಾಗೂ ಶಶಿಕಲಾ ಅವರು ಜೋಕಟ್ಟೆ ಯಿಂದ ಬೈಕ್ನಲ್ಲಿ ಬಜಪೆ ಗೆ ಬರುತ್ತಿದ್ದರು. ಈ ಸಂದರ್ಭ ಎದುರಿನಿಂದ ಬರುತಿದ್ದ ಟಿಪ್ಪರ್ ಇವರ ಬೈಕ್ಗೆ ಢಿಕ್ಕಿ ಹೊಡೆದ ಕಾರಣ ಶಶಿಕಲಾ ಅವರು ತಲೆ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಂಜುನಾಥ ಆಚಾರ್ಯ ಅವರಿಗೂ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಾಲಿಸಿದ್ದಾರೆ.
ಮಂಜುನಾಥ ಆಚಾರ್ಯ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು , ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಬಜಪೆ ವಿಮಾನ ನಿಲ್ದಾಣ ರಸ್ತೆ ಹಾಗೂ ಜೋಕಟ್ಟೆ ಯಿಂದ ಬರುವ ರಸ್ತೆ ಈ ಎರಡು ರಸ್ತೆಗಳು ರಾಜ್ಯ ಹೆದ್ದಾರಿ67ಕ್ಕೆ ಸಂಪರ್ಕಿಸುವ ಈ ಪ್ರದೇಶದಲ್ಲಿ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದೆ.
ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.