ವಾಟ್ಸಾಪ್ ವೆಬ್ ನಲ್ಲಿ ಬರುತ್ತಿದೆ ಮೆಸೆಂಜರ್ ರೂಮ್ಸ್: ಏನಿದು ನೂತನ ಫೀಚರ್? ದಂಗಾದ Zoom App


ಮಿಥುನ್ ಪಿಜಿ, May 13, 2020, 8:28 AM IST

mesenger-rooms-main

ಝೂಮ್ ಆ್ಯಪ್, ಗೂಗಲ್ ಮೀಟ್ ಮುಂತಾದವುಗಳಲ್ಲಿ ವಿಡಿಯೋ ಚಾಟ್ ವ್ಯವಸ್ಥೆ ಪ್ರಸಿದ್ದಿ ಪಡೆದ ಬೆನ್ನಲ್ಲೇ ಇದೀಗ ತಂತ್ರಜ್ಞಾನ ದೈತ್ಯ ಸಂಸ್ಥೆ ಫೇಸ್ ಬುಕ್ ಕೂಡ ವಾಟ್ಸಾಪ್ ವೆಬ್ ನಲ್ಲಿ ಹೊಸ ಫೀಚರ್ ಒಂದನ್ನು ಪರಿಚಯಿಸಲು ಸಿದ್ದವಾಗಿದೆ.

ಇಂದು ವಿಡಿಯೋ ಕಾಲ್ ಎಂಬುದು ಜನಮಾನಸವಾಗಿದೆ. ಲಾಕ್ ಡೌನ್ ಸಮಯದಲ್ಲಂತೂ ಝೂಮ್ ಆ್ಯಪ್ ಅತೀ ಹೆಚ್ಚು ಡೌನ್ ಲೋಡ್ ಆಗಿದ್ದು ತಂತ್ರಜ್ಞಾನ ದೈತ್ಯನ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲಾ. ನಂತರದಲ್ಲಿ ಗೂಗಲ್ ತನ್ನ ಜಿ-ಮೇಲ್ ಬಳಕೆದಾರರಿಗೆ ಪ್ರೀಮಿಯಂ ಮೀಟ್ ಅನ್ನು ಪರಿಚಯಿಸಿತ್ತು.  Google Duo ಕೂಡ ತನ್ನ ವಿಡಿಯೋ ಚಾಟ್ ವ್ಯವಸ್ಥೆಯಲ್ಲಿ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸಿತ್ತು.

ವಾಟ್ಸಾಪ್  ಕೂಡ , ತನ್ನ  ಮೊಬೈಲ್ ಆವೃತ್ತಿಯಲ್ಲಿ ಹೊಸದಾದ ಫೀಚರ್ಸ್​​​ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಾ ಬಂದಿದೆ. ಆದರೇ ವಾಟ್ಸಾಪ್ ವೆಬ್ ಗೆ ಸೀಮಿತ ಆಯ್ಕೆ ಗಳಷ್ಟೇ ಇದ್ದವು. ಇದೀಗ ವಾಟ್ಸ್ಆ್ಯಪ್ ವೆಬ್​​ನಲ್ಲಿ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಅನ್ನು ಸದ್ಯದಲ್ಲೇ ಪರಿಚಯಿಸಲಿದೆ.

ಏನಿದು ಮೆಸೆಂಜರ್ ರೂಮ್ಸ್ ?  

ಝೂಮ್ ಆ್ಯಪ್ ನಿಂದಾಗಿ ವಾಟ್ಸಾಪ್ ವಿಡಿಯೋ ಕಾಲ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಈ ಕಾರಣಕ್ಕಾಗಿಯೇ  ಫೇಸ್​ಬುಕ್​​ ಕಳೆದ ತಿಂಗಳು ವಾಟ್ಸಾಪ್ ವೆಬ್​​ನಲ್ಲಿ ಮೆಸೆಂಜರ್ ರೂಮ್ಸ್ ಫೀಚರ್ ನೀಡುವುದರ ಬಗ್ಗೆ ಹೇಳಿಕೊಂಡಿತ್ತು. ಇದೀಗ ಸದ್ಯದಲ್ಲೇ ಈ ನೂತನ ಫೀಚರ್  ಬೀಟಾ ವರ್ಷನ್ ಮೂಲಕ ಸಿಗಲಿದೆ ಎಂದು ಸಂಸ್ಥೆ ಹೇಳಿದೆ.

ಮೆಸೆಂಜರ್ ರೂಮ್ಸ್ ಎಂಬುದು ವಿಡಿಯೋ ಗ್ರೂಪ್ ಚಾಟ್ ಫೀಚರ್ ಅನ್ನು ಹೊಂದಿದ್ದು, ವಾಟ್ಸಾಪ್  ವೆಬ್​​ ಬಳಕೆದಾರರಿಗೆ ಇದು ಬಳಕೆಗೆ ಸಿಗಲಿದೆ. ಇದರಲ್ಲಿ ಏಕಕಾಲಕ್ಕೆ 50 ಜನರಿಗೆ ಕರೆ ಮಾಡುವ ಅವಕಾಶ ಲಭ್ಯವಾಗಲಿದೆ. ಇನ್ನು ಪರ್ಸನಲ್ ಲ್ಯಾಪ್ ಟಾಪ್ ಮತ್ತು ಡೆಸ್ಕ್​​ಟಾಪ್ ಬಳಕೆದಾರರು ಮೆಸೆಂಜರ್ ರೂಮ್ಸ್ ಫೀಚರ್ ಅನ್ನು ತಮ್ಮ ವಾಟ್ಸಾಪ್ ವೆಬ್ ಮೂಲಕ ಬಳಕೆ ಮಾಡಬಹುದು. ಇದಕ್ಕೆಂದೇ ವಾಟ್ಸಾಪ್  ವೆಬ್ 2.2019.6 ವರ್ಶನ್ ಅನ್ನು ಸಿದ್ಧಪಡಿಸಿದೆ. ಸದ್ಯದಲ್ಲೇ ಈ ನೂತನ ಅಪ್ಡೇಟ್ ವರ್ಶನ್ ಮೂಲಕ ಮೆಸೆಂಜರ್ ರೂಮ್ಸ್ ಫೀಚರ್ ಬಳಕೆದಾರರಿಗೆ ಸಿಗಲಿದೆ.

WAbetainfo ಎಂಬ ಸಂಸ್ಥೆ ಈ ಕುರಿತ ಸ್ಕ್ರೀನ್ ಶಾಟ್ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಹೊಸದಾಗಿ ಅಳವಡಿಸಲಾದ ಮೆಸೆಂಜರ್ ರೂಮ್ಸ್ ಐಕಾನ್ ಕಾಣಬಹುದಾಗಿದೆ. ಇದನ್ನು ಕ್ಲಿಕ್ ಮಾಡಿದಾಕ್ಷಣ  ರೂಂ ಒಂದು ತೆರದುಕೊಳ್ಳಲಿದ್ದು  ಏಕಕಾಲದಲ್ಲಿ 50  ಜನರಿಗೆ ಕರೆ ಮಾಡಬಹುದಾಗಿದೆ. ಮತ್ತು ಲಿಂಕ್ ಶೇರ್ ಮಾಡುವ ವ್ಯವಸ್ಥೆಯೂ ಇರಲಿದೆ. (ಝೂಮ್ ಆ್ಯಪ್ ನಲ್ಲಿ 100 ಜನರಿಗೆ ಏಕಕಾಲದಲ್ಲಿ ವಿಡಿಯೋ ಕರೆ ಮಾಡಬಹುದು)

ಮೆಸೆಂಜರ್ ರೂಂ ಎಂಬುದು  ಸಂಪೂರ್ಣ ಫೇಸ್ ಬುಕ್ ನಿಯಂತ್ರಣದಲ್ಲಿರಲಿದ್ದು, ನೀವು ಫೇಸ್ ಬುಕ್ ಖಾತೆ ಹೊಂದಿಲ್ಲದಿದ್ದರೂ ಲಿಂಕ್ ಮೂಲಕ ಜಾಯಿನ್ ಆಗಬಹುದು.

ಇನ್ನು ವಾಟ್ಸಾಪ್  ಮೇ ತಿಂಗಳಿನ ಅಂತ್ಯದಲ್ಲಿ ‘ವಾಟ್ಸಾಪ್ ಪೇ ಫೀಚರ್’ ಅನ್ನು ಬಳಕೆದಾರರಿಗೆ ಪರಿಚಯಿಸುವುದಾಗಿ ಹೇಳಿದೆ. ಈ ಹಿಂದಷ್ಟೆ  ವಾಟ್ಸಾಪ್, ಗ್ರೂಪ್ ವಿಡಿಯೋ ಕಾಲ್ ನಲ್ಲಿ 8 ಜನರು ಭಾಗವಹಿಸುವಂತೆ ಫೀಚರ್ ಅನ್ನು ಅಭಿವೃದ್ಧಿಪಡಿಸಿತ್ತು. ಇದು ಐಓಎಸ್ ಮತ್ತು ಆ್ಯಪಲ್ ಬಳಕೆದಾರರಿಗೆ ಆಧೀಕೃತವಾಗಿ ಪ್ಲೇ ಸ್ಟೋರ್ ನಲ್ಲಿ/ ಆ‍್ಯಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ನಿಮಗಿನ್ನೂ ಈ ಫೀಚರ್ ದೊರಕದಿದ್ದರೆ ಈ  ಕೂಡಲೇ ಅಪ್ ಡೇಟ್ ಮಾಡುವ ಮೂಲಕವೂ ಸೌಲಭ್ಯ ಪಡೆಯಬಹುದು.

-ಮಿಥುನ್ ಮೊಗೇರ

ಟಾಪ್ ನ್ಯೂಸ್

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

1

South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.