ಹಲಸಿಗೆ ಲಭಿಸುತ್ತಿದೆ ಜಾಗತಿಕ ಮನ್ನಣೆ

ಮಾಂಸಕ್ಕೆ ಪರ್ಯಾಯವಾಗಿ ಬಳಕೆ; ಕರಾವಳಿ, ಮಲೆನಾಡಿನ ಹಣ್ಣು ಜನಪ್ರಿಯ

Team Udayavani, May 19, 2020, 6:30 AM IST

ಹಲಸಿಗೆ ಲಭಿಸುತ್ತಿದೆ ಜಾಗತಿಕ ಮನ್ನಣೆ

ತೃಶ್ಶೂರು: ಸಣ್ಣ ಮುಳ್ಳುಗಳು, ದಪ್ಪ ಕವಚ, ಕೈಗಂಟುವ ಮೇಣದ ಅಡ್ಡಿಗಳನ್ನು ಬಿಡಿಸಿದರೆ ಜೇನು ಸಿಹಿಯ ಸ್ವರ್ಣ ವರ್ಣದ ತೊಳೆಗಳು! ಎಳೆಗಾಯಿ, ಹದ ಬಲಿತದ್ದು, ಬೆಳೆದ ಕಾಯಿ, ಹಣ್ಣು, ಅದರೊಳಗಿನ ಬೀಜ- ಹೀಗೆ ಸರ್ವಾಂಗವೂ, ಸರ್ವ ರೂಪವೂ ಖಾದ್ಯ. ಶತಮಾನಗಳಿಂದ ದಕ್ಷಿಣ ಭಾರತದ ಪ್ರಮುಖ ಆಹಾರಗಳಲ್ಲಿ ಒಂದಾಗಿರುವ ಹಲಸು ಈಗ ಜಗತ್ತಿನ ಸೂಪರ್‌ ಫ‌ುಡ್‌ ಆಗಿ ಮಾರುಕಟ್ಟೆಯನ್ನು ಆಳುತ್ತಿದೆ.

ಜಗತ್ತಿನ ಅತೀ ದೊಡ್ಡ ಹಲಸು ಉತ್ಪಾದಕನಾಗಿರುವ ಭಾರತಕ್ಕೆ ಇದು ಹಲಸಿನಷ್ಟೇ ಸಿಹಿಸುದ್ದಿ. ಕೋವಿಡ್-19 ಎದುರಾದ ಮೇಲೆ ಮಾಂಸಾಹಾರಕ್ಕಿಂತ ಸಸ್ಯಜನ್ಯ ಆಹಾರಗಳೇ ಆರೋಗ್ಯದಾಯಕ ಎನ್ನುವ ಸತ್ಯವನ್ನು ಜಗತ್ತು ಕಂಡುಕೊಂಡಿದೆ. ಮಾಂಸದಂತೆ ಹಲಸಿಗೂ ಬೇಗನೆ ಮಸಾಲೆ ಹೀರಿಕೊಳ್ಳುವ ಗುಣವಿರುವುದರಿಂದ ಬಾಣಸಿಗರಿಗೆ ಅಡುಗೆ ಸಲೀಸಾಗುತ್ತಿದೆ. ವಿದೇಶಗಳಲ್ಲಿ ಜನರು ಮಾಂಸಕ್ಕೆ ಪರ್ಯಾಯವಾಗಿ ಹಲಸಿನ ಬಳಕೆ ಆರಂಭಿಸಿದ್ದಾರೆ.

ಇಷ್ಟವಾಗಲು ಕಾರಣ?
ಹಲಸಿನ ಖಾದ್ಯಗಳು ರುಚಿಯ ಹುಚ್ಚು ಹಿಡಿಸು ತ್ತಿವೆ ಎನ್ನುತ್ತಾರೆ ಕೇರಳದ ಆಹಾರೋದ್ಯಮಿ ಜೇಮ್ಸ್‌ ಜೋಸೆಫ್. ಕೇರಳ ಮೂಲದ ಜೋಸೆಫ್, ಮೈಕ್ರೋಸಾಫ್ಟ್ ಹುದ್ದೆ ತೊರೆದು ಹಲಸಿಗೆ ಜಾಗತಿಕ ಮಾರುಕಟ್ಟೆ ದೊರಕಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಸಸ್ಯಜನ್ಯ ಆಹಾರ ಬಳಕೆಯೇ ಆರೋಗ್ಯದಾಯಕ ಎಂದು ವಿಶ್ವ ಆರೋಗ್ಯ ಸಂಸ್ಥೆ 2019ರಲ್ಲಿ ಹೇಳಿರು ವುದೂ ಹಲಸಿಗೆ ವರದಾನವಾಗಿ ಪರಿಣಮಿಸಿದೆ.

ಹಲಸು ಏಕೆ ಆರೋಗ್ಯಸ್ನೇಹಿ?
-ದೇಹಕ್ಕೆ ಅತ್ಯಗತ್ಯವಾಗಿರುವ ಪ್ರೊಟೀನ್‌, ವಿಟಮಿನ್‌, ಕ್ಯಾಲ್ಸಿಯಂ ಇದೆ.
- ಕೊಬ್ಬುರಹಿತ ಹಣ್ಣು. ಬೊಜ್ಜು, ಹೃದಯಾಘಾತ ಆಹ್ವಾನಿಸುವುದಿಲ್ಲ.
- ಅಧಿಕ ಫೈಬರ್‌ ಅಂಶ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಸಹಕಾರಿ.
-  ರಕ್ತದೊತ್ತಡ ಹೆಚ್ಚಿಸುವ ಸೋಡಿಯಂ ಅಂಶ ಇಲ್ಲ.
- ಬೇಸಗೆಯಲ್ಲಿ ದಾಹ ತಪ್ಪಿಸುತ್ತದೆ, ಅಲ್ಪಾಹಾರದಿಂದ ಸಂತೃಪ್ತಿ

ಮನಸ್ಸು ಕದ್ದ ಹಲಸು
ಚಪಾತಿಯಂತೆ ರುಚಿ ಕೊಡುವ ಜಾಕ್‌ಫ್ರೂಟ್ ಟ್ಯಾಕೊ, ಕಟ್ಲೆಟ್‌, ಕೇಕ್‌, ಜ್ಯೂಸ್‌, ಬರ್ಗರ್‌, ಐಸ್‌ಕ್ರೀಮ್‌, ಕ್ರಿಸ್ಪೀಸ್‌ ರೂಪದಲ್ಲಿ ಹಲಸು ಪಾಶ್ಚಾತ್ಯರ ನಾಲಿಗೆಗೆ ಮುದ ನೀಡುತ್ತಿದೆ. ಜೋಸೆಫ್ ಅವರ ಸಂಸ್ಥೆಯು ಹಲಸಿನ ಹಿಟ್ಟನ್ನು ವಿಶ್ವದ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಗೋಧಿ, ಅಕ್ಕಿ ಹಿಟ್ಟಿಗೆ ಪರ್ಯಾಯವಾಗಿ ಜನಪ್ರಿಯತೆ ಪಡೆಯುತ್ತಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.