ಕೋವಿಡ್ : ನಗರದಲ್ಲಿ ಒಂದೇ ದಿನ 43 ಸಾವು
Team Udayavani, May 21, 2020, 6:27 AM IST
ಮುಂಬಯಿ, ಮೇ 20: ಕೋವಿಡ್ ಹಿನ್ನೆಲೆ ಮುಂಬಯಿ ನಗರದಲ್ಲಿ ಸಾವಿನ ಸಂಖ್ಯೆ 800 ಗಡಿ ದಾಟಿದ್ದು, ಮಂಗಳ ವಾರ ಒಂದೇ ದಿನ 43 ಸಾವುಗಳು ವರದಿಯಾಗಿವೆ.
ಈ 43 ಸಾವುಗಳಲ್ಲಿ ಹದಿನೈದು ಮೇ 6ರಿಂದ 15ರ ನಡುವೆ ನಡೆದಿದ್ದು ಆದರೆ ನಿನ್ನೆ ಎಣಿಕೆಗೆ ಇವನ್ನು ಸೇರಿಸಲಾಗಿದೆ. ಕಳೆದ ಏಳು ದಿನಗಳಲ್ಲಿ ಮುಂಬಯಿಯಲ್ಲಿ ರಾಜ್ಯದ ಒಟ್ಟು ಶೇ. 30ರಷ್ಟು ಸಾವುಗಳು ದಾಖಲಾಗಿದೆ. ಮುಂಬಯಿ ಯಲ್ಲಿ ಒಟ್ಟು ಪ್ರಕರಣಗಳು ಈಗ 22,000 ಗಡಿ ದಾಟಿದೆ. ಕೋವಿಡ್ -19ರ ಕಾರಣ ದಿಂದಾಗಿ ಸಾವುಗಳು 800ಕ್ಕೆ ತಲುಪಿದ್ದು ಅವುಗಳಲ್ಲಿ ಮೇ 13 ಮತ್ತು 19ರ ನಡುವೆ 244 ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶ ತಿಳಿಸಿದೆ.
ಸೋಂಕಿನಿಂದ ನಗರವು ಗಂಟೆಗೆ ಸರಾಸರಿ ಒಂದು ಸಾವಿಗೆ ಸಾಕ್ಷಿಯಾಗಿದೆ. ಇದೇ ರೀತಿ ರಾಜ್ಯವು ಗಂಟೆಗೆ ಸರಾಸರಿ ಎರಡು ಸಾವುಗಳು ವರದಿಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ, ಮೇ 10ರಿಂದ 18ರ ವರೆಗೆ ರಾಜ್ಯದಲ್ಲಿ 417 ಸಾವು ದಾಖಲಾಗಿದ್ದು, ಅದರಲ್ಲಿ 249 ಮಂದಿ ಮುಂಬಯಿಯವರಾಗಿದ್ದಾರೆ ಎನ್ನಲಾಗಿದೆ. ಮೇ 18ರಂದು ರಾಜ್ಯದ ಸೋಂಕಿತ ಸಂಖ್ಯೆ 35,058ಕ್ಕೆ ತಲುಪಿದ್ದು, ಒಂದೆ ದಿನದಲ್ಲಿ 12,887 ಹೊಸ ಪ್ರಕರಣಗಳು ವರದಿಯಾಗಿವೆ. ಮುಂಬಯಿಯಲ್ಲಿ ಅದೇ ದಿನ 1,411 ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಒಟ್ಟು 22,746 ಪ್ರಕರಣಗಳು ದಾಖಲಾಗಿವೆ.
ಹಾಸಿಗೆಗಳ ಹೆಚ್ಚಳಕ್ಕೆ ಯೋಜನೆ ಬಿಎಂಸಿ ಮಾಹಿತಿಯ ಪ್ರಕಾರ, ಮೀಸಲಾದ ಕೋವಿಡ್ ಆಸ್ಪತ್ರೆಗಳಲ್ಲಿ (ಡಿಸಿಎಚ್) 5,030 ಹಾಸಿಗೆಗಳಿದ್ದು, ಇದರಲ್ಲಿ 38 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿವೆ. ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳ (ಡಿಸಿಎಚ್ಸಿ) ಸಾಮರ್ಥ್ಯವು 19 ಆಸ್ಪತ್ರೆಗಳಲ್ಲಿ 1,100 ಹಾಸಿಗೆಗಳನ್ನು ಹೊಂದಲಾಗಿದೆ. ಮಂಗಳವಾರ ಬಿಎಂಸಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ನಾಗರಿಕ ಸಂಸ್ಥೆ ಡಿಸಿಎಚ್ ಮತ್ತು ಡಿಸಿಎಚ್ಸಿಯ 10,000 ಹಾಸಿಗೆಗಳನ್ನು ಸಾಧಿಸುವ ಗುರಿ ಹೊಂದಿದೆ. ಪ್ರಸ್ತುತ ಲಭ್ಯವಿರುವ ಐಸಿಯು 535 ಹಾಸಿಗೆಗಳಿದ್ದು, ಇದನ್ನು 1,000 ಹಾಸಿಗೆಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ
Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು
Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ
Desi Swara: ಮಸ್ಕತ್- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ
Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.