ಹೆಜಮಾಡಿ ಚೆಕ್ಪೋಸ್ಟ್: ಅನಿರ್ಬಂಧಿತ ಸಂಚಾರ
Team Udayavani, May 23, 2020, 4:32 AM IST
ಸಾಂದರ್ಭಿಕ ಚಿತ್ರ.
ಪಡುಬಿದ್ರಿ: ಅಂತರ್ ಜಿಲ್ಲಾ ಸಂಚಾರಗಳಿಗೆ ಇದ್ದ ನಿರ್ಬಂಧವನ್ನು ಕಡಿತಗೊಳಿಸಲಾಗಿರುವುದರಿಂದ ಹೆಜಮಾಡಿ ಚೆಕ್ಪೋಸ್ಟ್ನಲ್ಲೀಗ ಅನಿರ್ಬಂಧಿತ ವಾಹನ ಸಂಚಾರವು ನಡೆಯುತ್ತಿದೆ.
ಪೊಲೀಸರು ಅನ್ಯ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವ ವಾಹನಗಳನ್ನು ಗುರುತು ಕಾರ್ಡ್ಗಳನ್ನು ಪರಿಶೀಲಿಸಿ ಬಿಡುತ್ತಿದ್ದಾರೆ. ಇದೇ ವೇಳೆ ಉಡುಪಿಯನ್ನು ಹಾದು ಹೊರ ಜಿಲ್ಲೆಗಳಿಗೆ ಹೋಗುವ ವಾಹನಗಳಲ್ಲಿನ ಪ್ರಯಾಣಿಕರ ದೇಹದ ತಾಪಮಾನವನ್ನು ಪರಿಶೀಲಿಸಿ, ಅನ್ಯ ರಾಜ್ಯಗಳಿಗೆ ತೆರಳುವ ಕಾರುಗಳಲ್ಲಿ ಪ್ರಯಾಣಿಸುವವರ ವಿವರವನ್ನೂ ಸಂಗ್ರಹಿಸಿಕೊಂಡು ಬಿಡಲಾಗುತ್ತಿದೆ.
ಆವಶ್ಯಕ ವಸ್ತುಗಳನ್ನು ಸಾಗಿಸುವ ಘನ ವಾಹನಗಳನ್ನೂ ನೇರವಾಗಿ ಬಿಡಲಾಗುತ್ತಿದೆ. ಇತರೆಲ್ಲಾ ಹೊರ ರಾಜ್ಯಗಳ ಲಾರಿಗಳು, ಟ್ರಕ್ಗಳ ಎಲ್ಲಿಂದ ಎಲ್ಲಿಗೆ ಹೋಗುತ್ತಿರುವ ಮಾಹಿತಿಯನ್ನು ಸಂಗ್ರಹಿಸಿ ಅವುಗಳನ್ನೂ ಮುಕ್ತವಾಗಿ ಸಂಚರಿಸಲು ಬಿಡಲಾಗುತ್ತಿದೆ. ಅನ್ಯ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವ ಮಂದಿಯ ವಿವರವನ್ನು ದಾಖಲಿಸಿಕೊಂಡು ಅವರ ದೇಹದ ತಾಪಮಾನವನ್ನು ಪರಿಶೀಲಿಸಿ ಪೊಲೀಸ್ ಬೆಂಗಾವಲು ಮೂಲಕ ಅವರ ಕ್ವಾರೆಂಟೈನ್ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸುಬ್ಬಣ್ಣ ಮಾಹಿತಿಯಿತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.