ಹಾರ್ಟೀ ಕ್ಲೀನಿಕ್‌ಗೆ ಗೇಟ್‌ ಪಾಸ್‌!: ರೈತರಿಗೆ ಕೃಷಿ ಮಾಹಿತಿ ಪಡೆಯಲು ಸರಕಾರಿ ಕತ್ತರಿ


Team Udayavani, May 24, 2020, 10:47 AM IST

ಹಾರ್ಟೀ ಕ್ಲೀನಿಕ್‌ಗೆ ಗೇಟ್‌ ಪಾಸ್‌!:

ಸಾಂದರ್ಭಿಕ ಚಿತ್ರ ಬಳಸಲಾಗಿದೆ

ಶಿರಸಿ: ಹತ್ತು ವರ್ಷಗಳ ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆರಂಭಿಸಲಾಗಿದ್ದ ಹಾರ್ಟಿ ಕ್ಲೀನಿಕ್‌ಗೆ ರಾಜ್ಯ ಸರಕಾರ ಗೇಟ್‌ ಪಾಸ್‌ ನೀಡಲು ಮುಂದಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ ತೋಟಗಾರಿಕಾ ಬೆಳೆಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಾರ್ಟಿ ಕ್ಲೀನಿಕ್‌ ಈಗ ಕೋವಿಡ್‌ 19 ಕಾರಣದಿಂದ ರೈತರಿಂದ ದೂರವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ತೋಟಗಾರಿಕಾ ಇಲಾಖೆ ಪ್ರಧಾನ ಕಚೇರಿ ಆವರಣದಲ್ಲೇ 2010-11ದಲ್ಲಿ ಹಾರ್ಟಿ ಕ್ಲೀನಿಕ್‌ ಆರಂಭಿಸಲಾಗಿತ್ತು. ಆಯಾ ಜಿಲ್ಲೆಯಲ್ಲಿ ಕೃಷಿ ಪದವಿ ಓದಿದ ವಿಷಯ ತಜ್ಞರನ್ನು ಸರಕಾರ ಮಾಸಿಕ 20 ಸಾವಿರ ರೂ. ಕೊಟ್ಟು ನೇಮಕ ಮಾಡಿಕೊಳ್ಳುತ್ತಿತ್ತು. ಯಾವುದಾದರೂ ಕೃಷಿ ಸಂಸ್ಥೆ ಅಡಿಯಲ್ಲಿ ವಿಷಯ ತಜ್ಞರ ನೇಮಕ ಮಾಡಿಕೊಂಡಿತ್ತು.

ಯಾಕೆ ಬೇಕಿತ್ತು?: ಅಡಿಕೆ, ಕಾಳು ಮೆಣಸು, ಅನಾನಸ್‌, ಮಾವು, ತೆಂಗು, ಬಾಳೆ, ಮಲ್ಲಿಗೆ, ಎಲೆ, ಪಪ್ಪಾಯಿ ದ್ರಾಕ್ಷಿ ಸೇರಿದಂತೆ ಅನೇಕ ತರಾವರಿ ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಯಾವ ಕಾಲಕ್ಕೆ ಯಾವ ಗೊಬ್ಬರ ಹಾಕಬೇಕು? ಯಾವ ರೋಗಕ್ಕೆ ಯಾವ ಔಷಧ ಹಾಕಬೇಕು? ವರ್ಷದಲ್ಲಿ ನೂರಾರು ತರಬೇತಿ ಶಿಬಿರವನ್ನೂ ನಡೆಸುತ್ತಿದ್ದರು. ರೈತರ ತೋಟಕ್ಕೆ ತೆರಳಿ ಮಾಹಿತಿ ನೀಡುತ್ತಿದ್ದರು. ಯಾವ ಭೂಮಿಗೆ ಯಾವ ಬೆಳೆ ಸೂಕ್ತ ಎಲ್ಲ ಮಾಹಿತಿಗಳನ್ನೂ ಸ್ಥಳಕ್ಕೆ ತೆರಳಿ ನೀಡುತ್ತಿದ್ದರು. ರೈತರಿಗೆ ಮಾಹಿತಿ ಕರಪತ್ರವನ್ನೂ ನೀಡುತ್ತಿದ್ದರು. ರೈತರ ಆಪತ್‌ ಬಾಂಧವ ಆಗಿತ್ತು ಹಾರ್ಟಿ ಕ್ಲೀನಿಕ್‌. ಸಂಶೋಧನೆ ಹಾಗೂ ರೈತ, ಇಲಾಖೆ ಹಾಗೂ ರೈತರ ನಡುವೆ ಕೊಂಡಿಯಾಗಿತ್ತು.

ನಿಯಮ ಉಲ್ಲಂಘನೆ? ಕೋವಿಡ್‌ 19ರ ಕಾರಣದಿಂದ ಯಾವ ಖಾಸಗಿ, ಅರೆ ಖಾಸಗಿ ಸಂಸ್ಥೆಗಳು ಯಾರನ್ನೂ ಸೇವೆಯಿಂದ ಕಡಿತಗೊಳಿಸಬಾರದು ಎಂದು ಕಾರ್ಮಿಕ ಇಲಾಖೆ ಆದೇಶ ಮಾಡಿತ್ತು. ಆದರೆ, ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದ ಸರಕಾರವೇ ಹಾರ್ಟಿ ಕ್ಲೀನಿಕ್‌ ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳದಂತೆ ಆದೇಶ ಮಾಡಿದೆ. ಸರಕಾರದ ಈ ಆದೇಶವನ್ನು ಸ್ವತಃ ಇಲಾಖೆ ಉಲ್ಲಂಘಿಸಿದೆ. ಈ ಬಾರಿ ಕೂಡ ಅತಿ ಮಳೆ, ಅಡಕೆ, ಕಾಳು ಮೆಣಸು, ಕೊಕ್ಕೋ ಕೊಳೆ ರೋಗದ ಕಾಟದ ಆತಂಕದ ಮಧ್ಯೆ ಕೊರೊನಾ ವೈರಸ್‌ ಆತಂಕ ರೈತರನ್ನು ಧೃತಿಗೆಡಿಸಿದೆ. ಈ ಮಧ್ಯೆ ಭರವಸೆ ನೀಡುತ್ತಿದ್ದ ತೋಟಗಾರಿಕಾ ವಿಷಯ ತಜ್ಞರೂ ಸೇವೆಗೆ “ಬರ’ದಂತೆ ನೋಡಿಕೊಂಡಿದೆ. 28 ಜಿಲ್ಲೆ ಹಾಗೂ ಬೆಂಗಳೂರು ಲಾಲ್‌ ಭಾಗ್‌ ಸೇರಿ ಒಟ್ಟೂ 29 ವಿಷಯ ತಜ್ಞರಿಗೆ ಸರಕಾರ
ಆರ್ಥಿಕ ನೆಪವೊಡ್ಡಿ ರೈತರ ಮಾರ್ಗದರ್ಶಿಗಳಿಗೆ ಗೇಟ್‌ ಪಾಸ್‌ ನೀಡಿದೆ.

ವಿಷಯ ತಜ್ಞರ ನಿಯೋಜನೆ ಅನುಮೋದನೆ ಆಗದೇ ಇರುವ ಕುರಿತು ಸರಕಾರ ಗಮನಕ್ಕೆ ತರುತ್ತೇನೆ. 
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಹಸಿರು ಶಾಲು, ರೈತ ಹೋರಾಟದ ಮೂಲಕವೇ ಸಿಎಂ ಆದವರ ಸರಕಾರದಲ್ಲಿ ತೋಟಗಾರಿಕಾ ಸಮಗ್ರ ಮಾಹಿತಿ ನೀಡುವ ತಜ್ಞರ ನೇಮಕವನ್ನು ರದ್ದುಗೊಳಿಸಿದ್ದು ಸರಿಯಲ್ಲ.
ದೀಪಕ್‌ ದೊಡ್ಡೂರು, ಪ್ರಗತಿಪರ ರೈತ

ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-yellapur

Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ

4-dandeli

Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್

Dinesh-gundurao

Vaccine: ಇನ್ನೆರಡು ವರ್ಷದೊಳಗೆ ಕೆಎಫ್‌ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್‌

8-sirsi

Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ

3-sirsi

Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.