“ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ’

ತೆಕ್ಕಟ್ಟೆ: ಕಾಳಿಂಗ ನಾವಡರ ಸಂಸ್ಮರಣಾ ಕಾರ್ಯಕ್ರಮ

Team Udayavani, May 27, 2020, 9:50 PM IST

“ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ’

ತೆಕ್ಕಟ್ಟೆ: ಯಕ್ಷ ಮಾಣಿಕ್ಯ ಭಾಗವತ ಕಾಳಿಂಗ ನಾವಡರು ಒಳ್ಳೆಯ ಕವಿ, ಸಹೃದಯರು. ಸ್ವತಃ ಅವರ ತಂದೆ ಸಾವಿನ ಮಂಚದಲ್ಲಿದ್ದಾಗಲೂ ತನ್ನ ಮೇಳದ ಪ್ರದರ್ಶನಕ್ಕೆ ಭಂಗ ಬರಬಾರದೆಂಬ ಕಾಳಜಿಯಿಂದ ನೋವಿ ನಲ್ಲಿಯೂ ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ ಎಂದು ದಿ| ಜಿ.ಆರ್‌. ಕಾಳಿಂಗ ನಾವಡರ ಜೀವದ ಗೆಳೆಯ ಗಂಪು ಪೈ ಸಾಲಿಗ್ರಾಮ ಅವರು ಹೇಳಿದರು. ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪ ದಲ್ಲಿ ಮೇ 27 ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಆಶ್ರಯದಲ್ಲಿ ಜಿಲ್ಲಾಧಿಕಾರಿ ಹಾಗೂ ಕೋಟ ಪೊಲೀಸ್‌ ಠಾಣೆಯ ನಿರೀಕ್ಷರ ಅನುಮತಿಯೊಂದಿಗೆ ಆಯೋಜಿಸಿದ 3ನೇ ವರ್ಷದ ಗಾನ ಗಂಧರ್ವ ಕರಾವಳಿಯ ಕೋಗಿಲೆ ಜಿ.ಆರ್‌. ಕಾಳಿಂಗ ನಾವಡರ ಸಂಸ್ಮರಣಾ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೃದಯ ಶ್ರೀಮಂತಿಕೆ
ಅತೀ ಚಿಕ್ಕ ವಯಸ್ಸಿನಲ್ಲಿ ಕಲೆಯ ಉತ್ತುಂಗ ಶಿಖರವನ್ನೇರಿದರೂ ಒಂದಿಷ್ಟೂ ಅಹಂ ಇಲ್ಲದ ಸರಳ ಸಜ್ಜನಿಕೆಯ ಹೃದಯ ಶ್ರೀಮಂತಿಕೆಯ ಭಾಗವತ ನಾವಡರು. ಕಲೆಯ ಬಗೆಗಿನ ಬದ್ಧತೆ, ಸಹ ಕಲಾವಿದರ ಕುರಿತಾದ ಪ್ರೀತಿ ಅನುಕಂಪ ಮೆಚ್ಚುವಂಥದ್ದು. ಕಲೆಯನ್ನು ಆರಾಧಿಸುವ ಮೂಲಕ ಅಪಾರವಾದ ಪ್ರಸಿದ್ಧಿ, ಯಶಸ್ಸು ಅವರನ್ನು ಹಿಂಬಾಲಿಸಿ ಬಂದಿದೆ ಹೊರತು, ಅವರು ಎಂದೂ ಕೀರ್ತಿ ಮೆಚ್ಚುಗೆಯನ್ನು ಅರಸಿ ಹೊರಟವರಲ್ಲ ಎಂದು ಅವರು ಹೇಳಿದರು.

ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ, ಯಕ್ಷ ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರು ಕೊçಕೂರು ಸೀತಾರಾಮ ಶೆಟ್ಟಿ, ಕೋಟ ಸುದರ್ಶನ ಉರಾಳ, ಕಾರ್ಯದರ್ಶಿ ವೆಂಕಟೇಶ ವೈದ್ಯ ಕೊಮೆ ಪುಷ್ಪನಮನ ಸಲ್ಲಿಸಿದರು.

ಭಾಗವತ ಲಂಬೋದರ ಹೆಗಡೆ ಸ್ವಾಗತಿಸಿ, ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿ, ಪ್ರಶಾಂತ ಮಲ್ಯಾಡಿ ವಂದಿಸಿದರು. ಬಳಿಕ ಪ್ರಾಚಾರ್ಯ ಕೆ.ಪಿ. ಹೆಗಡೆ, ನಿಟ್ಟೂರು ಲಂಬೋದರ ಹೆಗಡೆ, ಎನ್‌.ಜಿ. ಹೆಗಡೆ, ಸುದೀಪ ಉರಾಳ ಹಿಮ್ಮೇಳದಲ್ಲಿ ಮಲ್ಪೆ ವಾಸುದೇವ ಸಾಮಗ, ವಾಸುದೇವ ರಂಗ ಭಟ್‌, ಹಳ್ಳಾಡಿ ಜಯರಾಮ ಶೆಟ್ಟಿ, ಸುಜಯೀಂದ್ರ ಹಂದೆ, ಪ್ರದೀಪ ವಿ. ಸಾಮಗ ಇವರ ಮುಮ್ಮೇಳದಲ್ಲಿ “ಭೀಷ್ಮ ವಿಜಯ’ ತಾಳಮದ್ದಳೆಯ ಸಾಮಾಜಿಕ ಜಾಲತಾಣ ಮೂಲಕ ನೇರ ಪ್ರಸಾರದ ಕಾರ್ಯಕ್ರಮ ಸಂಪನ್ನಗೊಂಡಿತು.

ಕಲಾವಿದರನ್ನು ಸಮ್ಮಾನಿಸುವ ಸಂಕಲ್ಪ
“ಮೇ 27 ಯಕ್ಷಗಾನದ ಕಲಾ ಸಹೃದಯರು ಪ್ರತೀ ವರ್ಷ ಕಾಳಿಂಗ ನಾವಡರನ್ನು ನೆನಪಿಸಿಕೊಳ್ಳಲೇ ಬೇಕಾದ ಪುಣ್ಯದ ದಿವಸ. ರಸ್ತೆ ಅಪಘಾತದಲ್ಲಿ ಆಕಸ್ಮಿಕ ಮರಣಕ್ಕೆ ತುತ್ತಾದ ಕಾಳಿಂಗ ನಾವಡರು ಈಗಲೂ ನಮ್ಮ ಮೈ-ಮನಗಳಲ್ಲಿ ತುಂಬಿಕೊಂಡಿದ್ದಾರೆ. ಸರಕಾರ, ನಾವಡರ ಅಭಿಮಾನಿಗಳು ಪ್ರತೀ ವರ್ಷ ನಾವಡರ ಹೆಸರಿನಲ್ಲಿ ಸುಮಾರು ಒಂದು ಲಕ್ಷ ರೂ. ಮೊತ್ತವನ್ನು ನೀಡಿ ಶ್ರೇಷ್ಠ ಕಲಾವಿದನೊಬ್ಬನನ್ನು ಗುರುತಿಸಿ ಸಮ್ಮಾನಿಸುವ ಸಂಕಲ್ಪ ಮಾಡಲಿ’ ಎಂದು ಗಂಪು ಪೈ ಸಾಲಿಗ್ರಾಮ ಅವರು ಹೇಳಿದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.