ಜಾಯಿಂಟ್‌ ವೀಲ್‌ ಅಳವಡಿಕೆ: ಜಾತ್ರೆಗೆ ಬಂದು ಸಿಲುಕಿದ ವಲಸೆ ಕಾರ್ಮಿಕರು


Team Udayavani, May 28, 2020, 6:48 AM IST

ಜಾಯಿಂಟ್‌ ವೀಲ್‌ ಅಳವಡಿಕೆ: ಜಾತ್ರೆಗೆ ಬಂದು ಸಿಲುಕಿದ ವಲಸೆ ಕಾರ್ಮಿಕರು

ಹೆಬ್ರಿ: ಇತಿಹಾಸ ಪ್ರಸಿದ್ಧ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜಾತ್ರೆಯಲ್ಲಿ ಮನೋರಂಜನೆ ಆಟಕ್ಕಾಗಿ ಜಾಯಿಂಟ್‌ ವೀಲ್‌ ಅಳವಡಿಸಲು ಬಂದಿದ್ದ ಸುಮಾರು 20 ಮಂದಿ ವಲಸೆ ಕಾರ್ಮಿಕರು ಲಾಕ್‌ಡೌನ್‌ನಲ್ಲಿ ಸಿಲುಕಿ 2 ತಿಂಗಳುಗಳು ಕಳೆದಿವೆ. ಮೈಸೂರು, ಹುಣಸೂರಿನ ಮಹಿಳೆಯರು, ಮಕ್ಕಳು ಸಹಿತ 15 ಮಂದಿ ಹಾಗೂ ಮಹಾರಾಷ್ಟ್ರದ 5ಮಂದಿ ಸಂಕಷ್ಟಕ್ಕೆ ಸಿಲುಕಿದವರು. ಸದ್ಯ ಇವರು ದೇವಸ್ಥಾನದ ಎದುರಿನ ಗದ್ದೆಯಲ್ಲಿ ಟೆಂಟ್‌ ನಿರ್ಮಿಸಿ ವಾಸವಾಗಿದ್ದಾರೆ. ಊರಿಗೆ ತೆರಳಲು ಜಿಲ್ಲಾಡಳಿತ ಬಸ್ಸಿನ ವ್ಯವಸ್ಥೆ ಮಾಡಿದರೂ 6 ಲಾರಿಗಳಲ್ಲಿ ಸಾಗಿಸುವಷ್ಟು ಸಾಮಗ್ರಿಗಳು ಇರುವುದರಿಂದ ಸಮಸ್ಯೆಯಾಗಿದೆ. ಹುಣಸೂರಿಗೆ ಲಾರಿಯೊಂದಕ್ಕೆ 13 ಸಾ.ರೂ., ಮುಂಬಯಿಗೆ 22 ಸಾವಿರ ರೂ. ಬಾಡಿಗೆ ಕೇಳುತ್ತಿದ್ದು, ಒಟ್ಟು 90 ಸಾವಿರಕ್ಕೂ ಮಿಕ್ಕಿ ಹಣದ ಆವಶ್ಯಕತೆ ಇದೆ.

ಮಕ್ಕಳು, ಹೆಂಗಸರು ಸಹಿತ 20 ಮಂದಿ ಆಹಾರದ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭ ದೇವಸ್ಥಾನದಿಂದ ಊಟ ಒದಗಿಸಲಾಗಿದೆ. ಜತೆಗೆ ಸ್ಥಳೀಯ ದಾನಿಗಳು ಹಾಗೂ ವಿ ಲವ್‌ ಹ್ಯುಮ್ಯಾನಿಟಿ ಸಂಸ್ಥೆ ಅಗತ್ಯ ವಸ್ತುಗಳನ್ನು ಪೂರೈಸಿದೆ. ಗುಂಪಾಗಿ ರಸ್ತೆ ಬದಿಯ ಡೇರೆಯಲ್ಲಿ ವಾಸಿಸುವ ಇವರಿಗೆ ಕೈ ತೊಳೆಯಲು ಸಾಬೂನು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ಗಳನ್ನು ಮಾನವೀಯ ನೆಲೆಯಲ್ಲಿ ಹಿರಿಯಡಕ ಠಾಣಾ ಪೊಲೀಸ್‌ ಸಿಬಂದಿ ಸಂತೋಷ ಕಾರ್ಕಳ ನೀಡಿದ್ದಾರೆ.

ಕೂಲಿ ಕೆಲಸ
ಎರಡು ತಿಂಗಳುಗಳಿಂದ ಕೆಲಸವಿಲ್ಲದೆ ಇದ್ದ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಪರಿಹಾರ ಕಂಡುಕೊಂಡಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳೆಯರು ಮೀನಿನ ಬಲೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರೆ ಪುರುಷರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡು ನಿತ್ಯದ ಖರ್ಚನ್ನು ನಿಭಾಯಿಸಿದರು.

ಊರಿಗೆ ತೆರಳಲು ಸೂಚನೆ
ಮಳೆಗಾಲ ಶುರುವಾದರೆ ಸಂಭಾವ್ಯ ಸಾಂಕ್ರಾಮಿಕ ರೋಗ, ಅನಾರೋಗ್ಯದಿಂದ ಕಷ್ಟವಾಗಲಿದೆ. ಆದ್ದರಿಂದ ಅಧಿಕಾರಿಗಳು ಶನಿವಾರದೊಳಗೆ ಊರಿಗೆ ತೆರಳಲು ಸೂಚನೆ ನೀಡಿದ್ದು, ಸಂಕಷ್ಟದಲ್ಲಿದ್ದಾರೆ.

ಸರಕಾರದ ಸಹಾಯವಿಲ್ಲ
“ಚಿಕ್ಕ ಮಕ್ಕಳೊಂದಿಗೆ ಕಷ್ಟದಲ್ಲಿ ಜೀವನ ಸಾಗಿಸುವ ನಮಗೆ ಪೆರ್ಡೂರಿನ ಜನತೆಯ ಸಹಕಾರದಿಂದ ಜೀವ ಉಳಿದುಕೊಂಡಿದೆ. ಸ್ಥಳೀಯರಾದ ತುಕಾರಾಮ್‌ ಅವರ ಸಹಾಯ ಹಾಗೂ ದೇವಸ್ಥಾನದ ಊಟ ಹೊರತುಪಡಿಸಿದರೆ ಸರಕಾರದಿಂದ ಬೇರೆ ಯಾವ ಸಹಾಯವೂ ನಮಗೆ ಸಿಗಲಿಲ್ಲ’ ಎಂದು ಕಾರ್ಮಿಕರಲ್ಲೊಬ್ಬರಾದ ಸಾವಿತ್ರಿ ಬಾಯಿ ತಿಳಿಸಿದ್ದಾರೆ.

ಸ್ಪಂದಿಸುವುದು ಅಗತ್ಯ
ಎರಡು ತಿಂಗಳುಗಳಿಂದ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನಮ್ಮ ಸಂಸ್ಥೆಯ ವತಿಯಿಂದ ಸುಮಾರು 75 ಸಾವಿರಕ್ಕೂ ಅಧಿಕ ಆಹಾರ ಸಾಮಗ್ರಿಗಳನ್ನು ನೀಡಲಾಗಿದೆ. ಮುಂದೆ ಮಳೆಗಾಲ ಬರುವುದರಿಂದ ಆದಷ್ಟು ಶೀಘ್ರ ಇವರನ್ನು ಊರಿಗೆ ಕಳುಹಿಸುವುದು ಉತ್ತಮ. ಈ ಬಗ್ಗೆ ತಹಶೀಲ್ದಾರ್‌ ಅವರಲ್ಲಿ ಮತನಾಡಿದ್ದೇವೆ. ಸರಕು ಸಾಗಿಸಲು ಹಣದ ಆವಶ್ಯಕತೆ ಇರುವುದರಿಂದ ಜಿಲ್ಲಾಡಳಿತ ದಾನಿಗಳ ನೆರವಿನೊಂದಿಗೆ ಸ್ಪಂದಿಸಬೇಕಾಗಿದೆ.
-ತುಕಾರಾಮ್‌ ನಾಯಕ್‌, ಸಂಸ್ಥಾಪಕರು, ವಿ ಲವ್‌ ಹ್ಯುಮ್ಯಾನಿಟಿ ಸಂಸ್ಥೆ, ಪೆರ್ಡೂರು

ಸಹಾಯದ ನಿರೀಕ್ಷೆಯಲ್ಲಿದ್ದೇವೆ
ಊರು ಊರು ಜಾತ್ರೆ ಸುತ್ತಿ ಜೀವನ ಸಾಗಿಸುವ ನಮಗೆ ಲಾಕ್‌ಡೌನ್‌ನಿಂದ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಬರುವ ಶನಿವಾರದೊಳಗೆ ಜಾಗ ಖಾಲಿ ಮಾಡಲು ಹೇಳಿದ್ದಾರೆ. ಊರಿಗೆ ನಮ್ಮ ಸರಕುಗಳೊಂದಿಗೆ ಸಾಗಲು ಹಣವಿಲ್ಲ. ನಮ್ಮ ಊರಿನವರಿಂದ ಸಾಲ ಕೇಳಿದ್ದೇವೆ. ಕೆಲಸವಿಲ್ಲದೆ ಬದುಕು ಸಾಗಿಸುವುದು ಕಷ್ಟವಾದ್ದ‌ರಿಂದ ಸರಕಾರದ ಸಹಾಯದ ನಿರೀಕ್ಷೆಯಲ್ಲಿ ಇದ್ದೇವೆ.
-ರವಿ ಹುಣಸೂರು, ಸಂತ್ರಸ್ತ ಕಾರ್ಮಿಕ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.