ಸಾರ್ವಜನಿಕ ಅಹವಾಲು ಕೇಂದ್ರ
Team Udayavani, May 29, 2020, 5:27 PM IST
ಶಿರಸಿ: ಕೋವಿಡ್ ಹರಡುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಆರೋಗ್ಯಕ್ಕೂ ರಕ್ಷಣೆ ಕೊಡಬೇಕಾಗಿದೆ. ಈ ಕಾರಣದಿಂದ ಕೋವಿಡ್ ಫ್ರಂಟ್ಲೈನ್ ಪೊಲೀಸ್ ಟೀಮ್ ರಚಿಸಲಾಗತ್ತಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜ್ ಹೇಳಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಗುರುವಾರ ಅಹವಾಲು ಆಲಿಕಾ ಕೇಂದ್ರ ವೀಕ್ಷಿಸಿ ಮಾತನಾಡಿದರು. ಕ್ವಾರಂಟೈನ್ ಕೇಂದ್ರ ಸೇರಿದಂತೆ ಕೋವಿಡ್ ಕ್ಕೆ ಸಂಬಂಧ ಕಾರ್ಯಚಟುವಟಿಕೆ ಗಳಲ್ಲಿ ಕಾರ್ಯನಿರ್ವಹಿಸಲು ಕೋವಿಡ್ ಫ್ರಂಟ್ ಲೈನ್ ಪೊಲೀಸ್ ಟೀಮ್ ರಚಿಸಲಾಗುತ್ತಿದೆ. ತಲಾ ಹತ್ತು ಜನರ ಟೀಂ ಇದಾಗಿದ್ದು, ಹತ್ತನೇ ದಿನ ಕೋವಿಡ್ ವೈರಸ್ ತಪಾಸಣೆ ಕೂಡ ಮಾಡಲಾಗುತ್ತದೆ. ಹನ್ನೊಂದನೇ ದಿನ ಇನ್ನೊಂದು ಟೀಂ ಕೆಲಸ ಮಾಡುತ್ತದೆ. ಕೋವಿಡ್ ಕ್ವಾರಂಟೈನ್ ಕೇಂದ್ರ, ಹೊರ ರಾಜ್ಯದಿಂದ ಬಂದವರಿದ್ದಲ್ಲಿ ತೆರಳುವುದು, ಕರೆತರುವುದು ಮುಂತಾದ ಕಾರ್ಯಕ್ಕೆ ಪ್ರಂಟ್ಲೈನ್ ತಂಡ ಕೆಲಸ ಮಾಡಲಿದೆ. ಅಗತ್ಯ ಇದ್ದ ಪೊಲೀಸರಿಗೆ ಪಿಪಿಟಿ ಕಿಟ್ ನೀಡಲಾಗುತ್ತದೆ ಎಂದರು.
ಇಲ್ಲಿಯೂ ಸಾಮಾಜಿಕ ಅಂತರ ಪಾಲನೆ ಮಾಡಬೇಕಾಗುತ್ತದೆ. ಏಕೆಂದರೆ ಪೊಲೀಸರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಹೀಗಾಗಿ ಜನರ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಪೊಲೀಸ್ ಠಾಣೆಗಳ ಹೊರಗೆ ರಿಸೆಪ್ಶನ್ ಸೆಂಟರ್ ತೆರೆಯಲಾಗುತ್ತಿದೆ ಎಂದರು. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ. ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ
Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್
Vaccine: ಇನ್ನೆರಡು ವರ್ಷದೊಳಗೆ ಕೆಎಫ್ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್
Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ
Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.