ಲಾಕ್ಡೌನ್ ಬಳಿಕ ಆದಿತ್ಯ ಚಿತ್ರ
Team Udayavani, Jun 5, 2020, 4:21 AM IST
![adi lock movie](https://www.udayavani.com/wp-content/uploads/2020/06/adi-lock-movie-518x465.jpg)
ಕಣಜ ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ ಮುಂದುವರೆದ ಅಧ್ಯಾಯ ಚಿತ್ರ ಲಾಕ್ಡೌನ್ ಮುಗಿದ್ದು ಚಿತ್ರ ಬಿಡುಗಡೆಗೆ ಅನುಮತಿ ಸಿಕ್ಕ ಕೂಡಲೆ ತೆರೆಗೆ ಬರಲಿದೆ. ಲಾಕ್ಡೌನ್ ಆರಂಭವಾಗುವ ಮುನ್ನವೇ ಸೆನ್ಸಾರ್ಗೆ ಅಪ್ಲೈ ಮಾಡಿದ್ದು, ಸೆನ್ಸಾರ್ ಮಂಡಳಿ ಕಾರ್ಯ ನಿರ್ವಹಿಸಲು ಆರಂಭಿಸಿದ ಕೂಡಲೇ ನಮ್ಮ ಚಿತ್ರವನ್ನು ವೀಕ್ಷಿಸುವ ಭರವಸೆಯಿದೆ ಎನ್ನುತ್ತಾರೆ ನಿರ್ದೇಶಕರು.
ಈಗಾಗಲೇ ಸಿದ್ಧವಾಗಿರುವ ಚಿತ್ರವನ್ನು ಇತ್ತೀಚೆಗೆ ಮಂಜರಿ ಸ್ಟುಡಿಯೋದಲ್ಲಿ ನಾಯಕ ಆದಿತ್ಯ, ನಿರ್ದೇಶಕ ಬಾಲು ಚಂದ್ರಶೇಖರ್, ಹಿನ್ನೆಲೆ ಸಂಗೀತ ನೀಡಿರುವ ಅನೂಪ್ ಸೀಳಿನ್, ಸಂಗೀತ ನೀಡಿರುವ ಜಾನಿ – ನಿತಿನ್, ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ, ಸಂಕಲನಕಾರ ಶ್ರೀಕಾಂತ್ ಮತ್ತು ಎಫೆಕ್ಟ್ ರಜನ್ ಅವರು ವೀಕ್ಷಿಸಿದ್ದಾರೆ. ಚಿತ್ರ ನೋಡಿ ಸಂತಸಪಟ್ಟಿರುವ ಚಿತ್ರತಂಡ, ಲಾಕ್ ಡೌನ್ ಮುಗಿದ್ದು ಯಾವಾಗ ನಮ್ಮ ಚಿತ್ರ ತೆರೆಗೆ ಬರುತ್ತದ್ದೊ ಎಂಬ ಕಾತುರದಲಿದ್ದಾರೆ. ಈಗಾಗಲೇ ಬಿಡುಗಡೆ ಯಾಗಿರುವ ಚಿತ್ರದ ಟೀಸರ್ ಹಾಗೂ ಟ್ರೇಲರ್ ನೋಡುಗರ ಮನ ಗೆದ್ದಿದೆ.
ಆದಿತ್ಯ, ಆಶಿಕ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಸಂದೀಪ್ ಕುಮಾರ್, ಚಂದನ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಟ ಆದಿತ್ಯ ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಹೊಸ ಬಗೆಯ ಕಥೆ. ಈ ಹಿಂದೆ ಆದಿತ್ಯ ಮಾಡದಂತಹ ಕಥೆ ಈ ಸಿನಿಮಾದಲ್ಲಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಆದಿತ್ಯ ಅವರಿಗಿದೆ. ಈ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಅದ್ಧೂರಿಯಾಗಿ ಮಾಡಿದ್ದು, ತಾವು ಕೆಲಸ ಮಾಡಿದ ನಿರ್ದೇಶಕರನ್ನು ಕರೆದು ಸನ್ಮಾನಿಸಿದ್ದರು. ಈಗ ಅವರ ಮುಂದುವರೆದ ಅಧ್ಯಾಯ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಟಾಪ್ ನ್ಯೂಸ್
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ
![Ramanivas Rawat took oath as minister twice within 15 minutes](https://www.udayavani.com/wp-content/uploads/2024/07/rwat-150x83.jpg)
Bhopal; 15 ನಿಮಿಷದೊಳಗೆ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಮನಿವಾಸ್ ರಾವತ್
![ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?](https://www.udayavani.com/wp-content/uploads/2024/07/Gangavati-150x76.jpg)
ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?
![Rain Heavy](https://www.udayavani.com/wp-content/uploads/2024/07/Rain-Heavy-150x100.jpg)
Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ
![1-asaas](https://www.udayavani.com/wp-content/uploads/2024/07/1-asaas-150x100.jpg)
Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.