![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 7, 2020, 4:10 AM IST
ಕನ್ನಡ ಚಿತ್ರರಂಗದಲ್ಲಿ “ಪ್ರೇಮಲೋಕ’ ಸಿನಿಮಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಪರಭಾಷೆಯ ಚಿತ್ರರಂಗವೇ ಹಾಗೊಮ್ಮೆ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರವದು. ಈಗೇಕೆ ಆ “ಪ್ರೇಮಲೋಕ’ ಸಿನಮಾ ಬಗ್ಗೆ ಪೀಠಿಕೆ ಅಂತೀರಾ? ವಿಷಯವಿದೆ. ಈಗ ಹೊಸಬರೆಲ್ಲಾ ಸೇರಿಕೊಂಡು ಮತ್ತೂಂದು ಹೊಸ “ಪ್ರೇಮಲೋಕ’ ಸೃಷ್ಟಿಸೋಕೆ ಹೊರಟಿದ್ದಾರೆ. ಹಾಗಂತ, ಇದು ರವಿಚಂದ್ರನ್ ಆವರ “ಪ್ರೇಮಲೋಕ’ವನ್ನು ಮೀರಿಸುವಂತಹ ಸಿನಿಮಾವಲ್ಲ.
ಆದರೆ, ಇಲ್ಲಿ ಪ್ರೇಮಲೋಕ ಹುಟ್ಟುಕೊಂಡಿರೋದು ಸ್ನೇಹಲೋಕದಲ್ಲಿ! ಅರೇ ಇದೇನಿದು ಎಂಬ ಪ್ರಶ್ನೆ ಎದುರಾಗಬಹುದು. ಹೌದು, “ಸ್ನೇಹಲೋಕದಲ್ಲೊಂದು ಪ್ರೇಮಲೋಕ’ ಚಿತ್ರ ಈಗಾಗಲೇ ತನ್ನ ಚಿತ್ರೀಕರಣ ಕೆಲಸವನ್ನು ಬಹುತೇಕ ಶುರು ಮಾಡುವ ಉತ್ಸಾಹದಲ್ಲಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಈ ಚಿತ್ರ ಹೇಮಗಿರಿ ವಾಡೇಭೈರವ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದೆ. ಬಹುತೇಕ ಎಲ್ಲಾ ಸ್ಕ್ರಿಪ್ಟ್ ಕೆಲಸವನ್ನು ಮುಗಿಸಿರುವ ಚಿತ್ರತಂಡ, ಇನ್ನೇನು ಲಾಕ್ಡೌನ್ ಬಳಿಕ ಚಿತ್ರೀಕರಣಕ್ಕೆ ಅನುಮತಿ ಕೊಟ್ಟರೆ, ಶೂಟಿಂಗ್ಗೆ ಹೋಗಲು ಸಜ್ಜಾಗುತ್ತಿದೆ.
ಮಧುಚಂದನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಯಲ್ಲಿ ನಾಯಕರಾಗಿಯೂ ನಟಿಸುತ್ತಿದ್ದಾರೆ. ನಿರ್ಮಾಣದ ಉಸ್ತುವಾರಿಯೂ ಅವರದೇ. ಚಿತ್ರಕ್ಕೆ ಈಗಾಗಲೇ ಹಾಡುಗಳ ಸಂಯೋಜನೆ ಆಗಿದ್ದು, ಆಲೆನ್ ಕ್ಲಾರೆನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಎಂಟು ಹಾಡುಗಳಿವೆ. ಈಗಾಗಲೇ ಹಾಡುಗಳ ಧ್ವನಿಮುದ್ರಣ ಕೆಲಸ ಮುಗಿದಿದೆ. ಬಾಲಿವುಡ್, ಸ್ಯಾಂಡಲ್ವುಡ್ ಗಾಯಕರು ಚಿತ್ರಕ್ಕೆ ಹಾಡಲಿದ್ದಾರೆ. ಚಿತ್ರಕ್ಕೆ ಸೆಲ್ವಂ ಜಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಉಳಿದ ತಾರಾಬಳಗದ ಆಯ್ಕೆ ಪ್ರಕ್ರಿಯೆಯಲ್ಲಿದೆ. ಇಷ್ಟರಲ್ಲೇ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಅದೇನೆ ಇರಲಿ, “ಸ್ನೇಹಲೋಕದಲ್ಲೊಂದು ಪ್ರೇಮಲೋಕ’ ಎಂಬ ಶೀರ್ಷಿಕೆ ಕೇಳಿದರೆ, ಇದೊಂದು ಗೆಳೆತನ ಹಾಗು ಪ್ರೀತಿ ನಡುವಿನ ಕಥೆ ಎಂಬುದು ಗೊತ್ತಾಗುತ್ತೆ. ಸಿನಿಮಾ ಶುರುವಾಗಿ, ಪ್ರೇಕ್ಷಕರ ಮುಂದೆ ಬಂದಾಗಲಷ್ಟೇ ಅದರಲ್ಲಿ ಏನೆಲ್ಲಾ ಇದೆ ಅನ್ನೋದು ಗೊತ್ತಾಗಲಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.