ಇರಲಿ ಇಮ್ಮಡಿ ಎಚ್ಚರ; ಇಂದಿನಿಂದ ಅನ್‌ಲಾಕ್‌ 1.0 ದೈಹಿಕ ಅಂತರ, ಮಾಸ್ಕ್ ಅಗತ್ಯ


Team Udayavani, Jun 8, 2020, 6:20 AM IST

ಇರಲಿ ಇಮ್ಮಡಿ ಎಚ್ಚರ; ಇಂದಿನಿಂದ ಅನ್‌ಲಾಕ್‌ 1.0 ದೈಹಿಕ ಅಂತರ, ಮಾಸ್ಕ್ ಅಗತ್ಯ

ಬೆಂಗಳೂರು: ಕಳೆದ 75 ದಿನಗಳಿಂದ ಮುಚ್ಚಿದ್ದ ದೇವಸ್ಥಾನ, ಮಾಲ್‌, ಹೊಟೇಲ್‌ಗ‌ಳು ಸೋಮವಾರ ತೆರೆಯಲಿವೆ. ಹಾಗೆಂದು ಒಮ್ಮೆಗೇ ಕಿಕ್ಕಿರಿಯದಿರೋಣ. ಈ ಸ್ಥಳಗಳಲ್ಲಿ ಜನಸಂದಣಿ ಸೇರ‌ಲು ಆಸ್ಪದಕೊಡ ದಿರೋಣ. ಮುಖ್ಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕಡ್ಡಾಯವಾಗಿರಲಿ.

ಸೋಮವಾರದಿಂದ ಅನ್‌ಲಾಕ್‌ 1.0 ಜಾರಿಯಾಗುತ್ತದೆ. ಆದರೆ ಸದ್ಯ ಕೋವಿಡ್-19  ಜತೆ ಜತೆಗೇ ಬದುಕಬೇಕಾದ ಸ್ಥಿತಿ ಇದ್ದು, ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಲಾಕ್‌ಡೌನ್‌ ಅವಧಿ ಮತ್ತು ಸಡಿಲಿಕೆ ಅವಧಿಗೆ ಹೋಲಿಸಿದರೆ ಪ್ರಸ್ತುತ ಸೋಂಕು ಪ್ರಕರಣಗಳ ಸಂಖ್ಯೆ ಸಾಕಷ್ಟು ಏರುಗತಿಯಲ್ಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅನಗತ್ಯ ಸಂಚಾರಕ್ಕೆ ಮುಂದಾಗಬಾರದು ಎಂದು ಸರಕಾರ ಹೇಳು ತ್ತಿದ್ದರೂ ಸೋಂಕುಪೀಡಿತರ ಸಂಖ್ಯೆ ಹಲವು ಪಟ್ಟು ಹೆಚ್ಚುತ್ತಿದೆ. ಹೀಗಾಗಿ ಎಚ್ಚರ ಇರಲೇಬೇಕು.

ದೇಗುಲ, ಮಾಲ್‌ ತೆರೆಯಲಿದೆ
ನಿರ್ಬಂಧ ಸಡಿಲಿಕೆಯ ಮೊದಲ ಹಂತದಲ್ಲಿ ದೇವಸ್ಥಾನ, ಪ್ರಾರ್ಥನ ಮಂದಿರಗಳು,ಮಾಲ್‌ಗ‌ಳ ಆರಂಭಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಇತರ ಧಾರ್ಮಿಕ ಕೇಂದ್ರ,ಪ್ರಾರ್ಥನ ಮಂದಿರಗಳಲ್ಲೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಧಾರ್ಮಿಕ ಚಟುವಟಿಕೆಗಳು ಆರಂಭವಾಗಲಿವೆ.

ಸಿಗಲಿದೆ ಹೊಟೇಲ್‌ ಊಟ, ಉಪಾಹಾರ
ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಸೋಮವಾರ ಸ್ಥಳದಲ್ಲೇ ತಿಂಡಿ, ಊಟ ಒದಗಿಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ ರಕ್ಷಣೆ, ಗ್ರಾಹಕರ ಸಂಖ್ಯೆಗೆ ಮಿತಿ ಮತ್ತಿತರ ಷರತ್ತುಗಳೊಂದಿಗೆ ಇವು ತೆರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಲಾಕ್‌ಡೌನ್‌ ಜಾರಿಗೂ 10 ದಿನ ಮೊದಲೇ ಸ್ಥಗಿತ ಗೊಂಡಿದ್ದ ಮಾಲ್‌ಗ‌ಳು ತೆರೆದು ಕೊಳ್ಳಲಿವೆ. ಪ್ರತಿಷ್ಠಿತ ಮಾಲ್‌ಗ‌ಳಲ್ಲಿ ಕೆಲವು ದಿನಗಳಿಂದ ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ, ಗ್ರಾಹಕರು ಗುಂಪುಗೂಡುವ ಸ್ಥಳ ತೆರವು, ಬಿಲ್ಲಿಂಗ್‌ ಕೌಂಟರ್‌ನಲ್ಲಿ ಮಾರ್ಕಿಂಗ್‌, ಸುಗಮ ಓಡಾಟ, ಪ್ರತ್ಯೇಕ ಪ್ರವೇಶ,ನಿರ್ಗಮನ ದ್ವಾರಗಳ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆದಿತ್ತು.ಬಹುತೇಕ ಮಾಲ್‌ಗ‌ಳು ಸೋಮವಾರದಿಂದಲೇ ಆರಂಭವಾಗಲಿವೆ.

ಇರಲಿ ಮೈತುಂಬ ಎಚ್ಚರ
ಒಂದೆಡೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಮತ್ತೂಂದೆಡೆ ಲಾಕ್‌ಡೌನ್‌ ತೆರವಾಗುತ್ತಿದ್ದು, ಇದರಿಂದ ಜನಸಂದಣಿ ಇನ್ನಷ್ಟು ಹೆಚ್ಚಲಿದೆ. ಇಂತಹ ಸಂದರ್ಭ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಬೆಲೆ ತೆರಲು ಕಾರಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕಿಂತ ತೆರೆದುಕೊಳ್ಳಲಿರುವ ಕೇಂದ್ರಗಳು, ಜನರ ಜವಾಬ್ದಾರಿಯೇ ಹೆಚ್ಚಿದೆ. ನಮ್ಮ ಮುಂದಿನ ನಡೆ ಹೇಗಿರಬೇಕು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
-ನಿರ್ಬಂಧ ತೆರವಾಗಿದೆ ಎಂಬ ನೆಪದಲ್ಲಿ ಅನಗತ್ಯ ಓಡಾಟ ಸರಿಯಲ್ಲ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬಂದು ಸಂಚಾರ ನಡೆಸೋಣ.
-ಉತ್ಸವಗಳು, ಮದುವೆ ಮತ್ತಿತರ ಸಂಭ್ರಮ ಮನೆಗೇ ಸೀಮಿತವಾಗಿರಲಿ.
-ಮುಖಗವಸು, ಸ್ಯಾನಿಟೈಸರ್‌ ಮತ್ತಿತರ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವಲ್ಲಿ ರಾಜಿ ಸಲ್ಲದು.
-ಎಷ್ಟೇ ತುರ್ತು ಇದ್ದರೂ ದೈಹಿಕ ಅಂತರ ಕಾಪಾಡೋಣ.
-ದೇಗುಲ,ಚರ್ಚ್‌,ಮಸೀದಿಗಳಿಗೆ ಏಕಾಏಕಿ ಭಕ್ತರ ದಂಡು ಹೆಚ್ಚಾಗಬಹುದು. ಹಾಗಾಗಿ ಸದ್ಯಕ್ಕೆ ಭೇಟಿಯನ್ನು ಸಾಧ್ಯವಾದಷ್ಟು ಮುಂದೂಡುವುದು ಸೂಕ್ತ.
-ಪ್ರಧಾನಿ ಮೋದಿ ಹೇಳಿದಂತೆ ಸಾಧ್ಯವಾದಷ್ಟು ತಂತ್ರಜ್ಞಾನಗಳ ಬಳಕೆ ಆಗಲಿ.
-ಸರಕಾರಿ ಕಚೇರಿ,ಕಂಪೆನಿಗಳಲ್ಲಿ ಅಧಿಕಾರಿ ಮಟ್ಟದ ಸಭೆಗಳು ವೀಡಿಯೋ ಕಾನ್ಫರೆನ್ಸ್‌ ಮೂಲ ಕವೇ ಮುಂದುವರಿಯಲಿ.
-ಕೋವಿಡ್‌-19ಕ್ಕೆ ಸಂಬಂಧಿಸಿದಂತೆ ಸರಕಾರ ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸೋಣ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.