ಬೈಕಂಪಾಡಿ: ಚರಂಡಿ ಬದಲು “ಖೆಡ್ಡಾ’!
Team Udayavani, Jun 15, 2020, 5:47 AM IST
ಬೈಕಂಪಾಡಿ: ಚಿತ್ರಾಪುರದ ಸಿಂಡಿಕೇಟ್ ಬ್ಯಾಂಕ್ ಸಮೀಪ ಹೆದ್ದಾರಿ ಇಲಾಖೆಯು ಮಳೆ ನೀರು ಹರಿಯಲೆಂದು ಜೆಸಿಬಿ ಮೂಲಕ ಅಲ್ಲಲ್ಲಿ ಅಗೆದು ಹಾಕಿದ್ದು, ಅದೀಗ ಪಾದಚಾರಿಗಳಿಗೆ ಮಾರಕವಾಗಿ ಪರಿಣಮಿಸಿದೆ.
ಚರಂಡಿ ತೋಡಲು ಹೊರಟ ಇಲಾಖೆಯು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಪಕ್ಕದಲ್ಲೇ ತೆಗೆದು ಹಾಕಿದ್ದ ಮಣ್ಣು ಮಳೆನೀರಿನೊಂದಿಗೆ ಮತ್ತೆ ಹೊಂಡ ಸೇರಿದ್ದು, ಅದರ ಆಳದ ಅರಿವಿಲ್ಲದೆ ಕಾಲಿಡುವ ಜನರ ಕಾಲುಗಳು ಕೆಸರಿನಲ್ಲಿ ಹೂತು ಹೋಗುತ್ತಿವೆ.
ಸಮೀಪದಲ್ಲೇ ಬ್ಯಾಂಕ್ ಎಟಿಎಂ ಇದ್ದು ಹಣ ತೆಗೆಯಲು ಬರುವವರು ನೀರು ನಿಂತ ಹೊಂಡಕ್ಕೆ ಬಿದ್ದು ಕೈ ಕಾಲು ನೋಯಿಸಿಕೊಂಡದ್ದೂ ಇದೆ. ಇನ್ನೊಂದೆಡೆ ಮಾರ್ಬಲ್ ಕಂಪೆನಿಯೊಂದು ಇಂಟರ್ ಲಾಕ್ ಅಳವಡಿಸಿರುವ ಕಾರಣ ನೀರು ಹರಿಯದೆ ಸಮಸ್ಯೆ ಉದ್ಭವವಾಗಿದೆ. ತತ್ಕ್ಷಣ ಈ ಬಗ್ಗೆ ಇಲಾಖೆ ಅಥವಾ ಪಾಲಿಕೆ ಸೂಕ್ತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.