ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

ಮಠಕ್ಕೆ ಎಂಟು ಶತಮಾನಗಳ ಇತಿಹಾಸ ; ಮಣ್ಣು, ಸೆಗಣಿ, ಗೋಪಿಚಂದನ, ಗೋಂದು ಬಳಕೆ

Team Udayavani, Jun 18, 2020, 5:30 AM IST

ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

ಉಡುಪಿ: ಶ್ರೀಕೃಷ್ಣಮಠಕ್ಕೆ ಸುಮಾರು ಎಂಟು ಶತಮಾನಗಳ ಇತಿಹಾಸವಿದೆ. ಆದರೆ ಬ್ರಿಟಿಷರ ಆಡಳಿತಾವಧಿಯಿಂದಲೇ (1935ರಿಂದ) ಉಡುಪಿ ತಾಲೂಕು ಕೇಂದ್ರಕ್ಕೆ ನಗರಸಭೆ ಮಾನ್ಯತೆ ದೊರಕಿದೆ. 1960ರ ದಶಕದಲ್ಲಿ ನಗರಸಭೆ ಮಾನ್ಯತೆ ಹೋಗಿ ಪುರಸಭೆ ಮಾನ್ಯತೆ ಬಂದರೂ, 1995ರ ವೇಳೆ ಮತ್ತೆ ಅದೇ ನಗರ ಮಟ್ಟ ಬಂತು.

ಎಲ್ಲ ನಗರಗಳೂ ದಿನದಿಂದ ದಿನಕ್ಕೆ ತನ್ನ ನಗರತನವನ್ನು ಬೆಳೆಸಿಕೊಳ್ಳುತ್ತಲೇ ಇವೆ. ಇದರ ಪರಿಣಾಮ ಪರಿಸರ- ಪ್ರಕೃತಿಗೆ ಪೂರಕ, ನೈಸರ್ಗಿಕ ಇತ್ಯಾದಿ ಶಬ್ದಗಳು ನಿಘಂಟಿಗೆ ಸೇರುವ ಹಂತದಲ್ಲಿರುವಾಗ ಒಂದರ್ಥದಲ್ಲಿ ಎಲ್ಲರ ಬದುಕಿನಲ್ಲಿ ಇದರ ಸಹಾಯಕ್ಕೆ ಬಂದದ್ದು ಕೋವಿಡ್-19 ವೈರಸ್‌.

ಕೋವಿಡ್-19 ಕಾರಣದಿಂದ ಲಾಕ್‌ಡೌನ್‌ ಆಗಿರುವಾಗ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಅವಧಿಯಲ್ಲಿ ಬಾಕಿ ಉಳಿದ ಸುಣ್ಣಬಣ್ಣಕ್ಕೆ ಕಾಲಕೂಡಿ ಬಂದಿದೆ. ಜನವರಿಯಲ್ಲಿ ಬಣ್ಣ ಕೊಟ್ಟದ್ದು ಶ್ರೀಕೃಷ್ಣಮಠದ ಕನಕಗೋಪುರ, ಮಹಾದ್ವಾರಗೋಪುರ, ಉತ್ತರ ಭಾಗದ ಗೋಪುರಕ್ಕೆ ಮತ್ತು ಅದಮಾರು ಮಠಕ್ಕೆ ಮಾತ್ರ. ಈಗ ಶ್ರೀಕೃಷ್ಣಮಠದ ಭೋಜನಶಾಲೆ, ಬಡಗುಮಾಳಿಗೆ, ರಾಜಾಂಗಣ ಸಭಾಭವನದ ವೇದಿಕೆಗಳಿಗೆ ನೈಸರ್ಗಿಕ ಬಣ್ಣ ಕೊಡುವ ಕೆಲಸ ನಡೆಯುತ್ತಿದೆ.

ಇಲ್ಲಿ ಕೇವಲ ಮಣ್ಣು, ಸೆಗಣಿ, ಗೋಪಿಚಂದನ, ಗೋಂದು, ಅಂಟನ್ನು ಬಳಸಲಾಗುತ್ತಿದೆ. 3:2ರ ಪ್ರಮಾಣದಲ್ಲಿ ಮಣ್ಣು ಮತ್ತು ಸೆಗಣಿ ಬಳಸಲಾಗುತ್ತದೆ. ಗೋಪಿಚಂದನ, ಅಂಟು, ಗೋಂದಿನ ಪ್ರಮಾಣ ಬಹಳ ಕಡಿಮೆ. ಆಧುನಿಕ ಪೇಂಟಿನಲ್ಲಿ ಜಿಂಕ್‌ ಪ್ರಧಾನ ವಾಗಿರಲಿದ್ದು ಇಲ್ಲಿ ಮಣ್ಣು ಅದರ ಪಾತ್ರ ವಹಿಸುತ್ತದೆ. ಉತ್ತಮ ಗುಣಮಟ್ಟದ ಎರಡು ಟೆಂಪೋ ಕೆಮ್ಮಣ್ಣನ್ನು (ಕೆಂಪು ಮಣ್ಣು) ಅದಮಾರು ಮೂಲ ಮಠದ ಸುತ್ತಮುತ್ತದಿಂದ ತರಿಸಲಾಗಿದೆ. ಮಠದಲ್ಲಿಯೇ ಇರುವ ದೇಸೀ ತಳಿಯ ದನಗಳ ಒಂದು ಟೆಂಪೋ ಸೆಗಣಿ (ಗೋಮಯ) ಸಂಗ್ರಹಿಸಿ ಬಣ್ಣ ತಯಾರಿಸಲಾಗಿದೆ. ಮಣ್ಣಿನಲ್ಲಿರುವ ಸಣ್ಣ ಕಲ್ಲು, ಕಸಗಳನ್ನು ತೆಗೆದು ಶುದ್ಧೀಕರಿಸಿ ಗೋಮಯ, ಗೋಂದು, ಅಂಟು, ಗೋಪಿಯನ್ನು 200 ಲೀ. ಬ್ಯಾರೆಲ್‌ನಲ್ಲಿ ಮಿಶ್ರಣ ಮಾಡಿ ಅದರಿಂದ ತಯಾರಾದ ಬಣ್ಣವನ್ನು ಸ್ಥಳೀಯ ಕಾರ್ಮಿಕರು ಕೊಡುತ್ತಿದ್ದಾರೆ. ವಲಸೆ ಕಾರ್ಮಿಕರು ಊರಿಗೆ ಹೋದರೆಂಬ ಮಾತು ಕೇಳಿಬರುತ್ತಿರುವಾಗಲೇ ಸ್ಥಳೀಯ ಕಾರ್ಮಿಕರ ಕೊರತೆಯಾಗದಿರುವುದು ಕಂಡುಬರುತ್ತಿದೆ.

ಖರ್ಚೂ ಕಡಿಮೆ, ಆರೋಗ್ಯಕ್ಕೂ ಲಾಭ
ನೈಸರ್ಗಿಕ ಬಣ್ಣವೆಂದಾಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಕೊಡಲೇ ಇಲ್ಲ ಎಂದರ್ಥವಲ್ಲ. ಎಲ್ಲಿ ಮಳೆ ನೀರು ಹೆಚ್ಚಾಗಿ ಬೀಳುತ್ತದೋ ಅಲ್ಲಿ ಮಣ್ಣು ತೋಯ್ದು ಹೋಗುವ ಕಾರಣ ಅಂತಹ ಕಡೆ ಮಾರುಕಟ್ಟೆ ಬಣ್ಣವನ್ನು ಕೊಡಲಾಗಿದೆ. ಎಲ್ಲಿ ಮಳೆ ನೀರು ಬೀಳುವುದಿಲ್ಲವೋ, ಎತ್ತರ ಪ್ರದೇಶವೋ ಅಲ್ಲಿ ನೈಸರ್ಗಿಕ ಬಣ್ಣ ಕೊಡಲಾಗುತ್ತಿದೆ. ಬಣ್ಣ ಕೊಡುವುದೆಂದರೆ ಇರುವ ಬಣ್ಣದ ಪದರದ ಮೇಲೆ ಇನ್ನೊಂದು ಪದರ ಕೊಡುವುದೆಂಬ ತಿಳಿವಳಿಕೆ ಇದೆ. ಇದು ಹಾಗಲ್ಲ. ಹಳೆಯ ಪದರಗಳನ್ನು ತೆಗೆದು ಹೊಸ ಪದರವನ್ನು ನೀಡಲಾಗುತ್ತಿದೆ. ಇದು ಆರೋಗ್ಯಕ್ಕೂ ಲಾಭ, ಖರ್ಚೂ ಕಡಿಮೆ, ಏನೇ ಖರ್ಚಿದ್ದರೂ ಅದು ಕೆಲಸದವರಿಗೆ ಮಾತ್ರ. ಕಲಾವಿದ ಪುರುಷೋತ್ತಮ ಅಡ್ವೆಯವರು ನವೀಕರಣ ಕೆಲಸಗಳಿಗೆ ಮಾರ್ಗದರ್ಶನ ಕೊಡುತ್ತಿದ್ದಾರೆ.

ಕಣ್ಮರೆಯ ಕಲೆ ಮೇಲೆ ಕಣ್ಣು
ಮಣ್ಣು, ಸೆಗಣಿ ಮಿಶ್ರಿತ ಬಣ್ಣವು ಹಳೆಯ ಶೈಲಿ, ಹಳೆಯ ಸಂಸ್ಕೃತಿ. ಹಿಂದೆ ಮನೆಗಳಲ್ಲಿ ಇಂತಹ ಗೋಡೆಗಳಿದ್ದವು, ಗೋಮಯದಿಂದ ಮಾಡಿದ ನೆಲಗಳು ಕಾಣುತ್ತಿದ್ದವು. ಮುಖ್ಯವಾದ ಸಂತೃಪ್ತಿ ಎಂದರೆ ಈಗಲೂ 28 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿರುವುದು. ಕೊನೆಗೆ ಶ್ರೀಕೃಷ್ಣಮಠದ ಚಂದ್ರಶಾಲೆ, ಸೂರ್ಯಶಾಲೆಯ ಕೆಲಸ ಮಾಡುತ್ತೇವೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಅದಮಾರು ಮಠ,
ಶ್ರೀಕೃಷ್ಣಮಠ, ಉಡುಪಿ

ಇದು ಸುಮಾರು ನಾಲ್ಕು ತಿಂಗಳ ಕೆಲಸ. 28 ಕೆಲಸದವರು ಇದ್ದಾರೆ. ಮಜೂರಿ ಸುಮಾರು 20 ಲ.ರೂ. ತಗಲುತ್ತದೆ.
-ಗೋವಿಂದರಾಜ್‌, ವ್ಯವಸ್ಥಾಪಕರು, ಶ್ರೀಕೃಷ್ಣಮಠ, ಉಡುಪಿ

ನಾನು ಇದೇ ಮೊದಲ ಬಾರಿಗೆ ಈ ನೈಸರ್ಗಿಕ ಬಣ್ಣವನ್ನು ಕೊಟ್ಟಿದ್ದೇನೆ. ಮಿತವ್ಯಯದಲ್ಲಿ ಬಣ್ಣ ಕೊಡಬೇಕೆನ್ನುವವರಿಗೆ ಇದೊಂದು ಉತ್ತಮ ಅವಕಾಶ.
-ರಮೇಶ್‌, ಬೈಲಕೆರೆ

ಮಾರುಕಟ್ಟೆಯಲ್ಲಿ ಸಿಗುವ ಪೇಂಟಿಂಗ್‌ ಕೈ, ಮೈಗೆ ತಾಗಿದರೆ ಅದನ್ನು ತೆಗೆಯುವುದು ಕಷ್ಟ. ಇದನ್ನು ಕೈಯಲ್ಲಿಯೇ ತಯಾರಿಸುತ್ತೇವೆ. ನಾವೆಲ್ಲರೂ ತುಂಬು ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದೇವೆ.
-ವಿನ್ಸಿ, ಮಣಿಪಾಲ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.