ಭಾರತೀಯ ಟೆಕ್ಕಿಗಳಿಗೆ ವೀಸಾ ಆಘಾತ
ಎಚ್-1ಬಿ ಸಹಿತ ಹಲವು ವೃತ್ತಿ ಆಧಾರಿತ ವೀಸಾ ತಾತ್ಕಾಲಿಕ ರದ್ದು
Team Udayavani, Jun 24, 2020, 6:42 AM IST
ವಾಷಿಂಗ್ಟನ್: ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆ ಇರುವ ಎಚ್-1ಬಿ ಸಹಿತ ಹಲವು ಉದ್ಯೋಗ ಸಂಬಂಧಿ ವೀಸಾಗಳನ್ನು ಈ ವರ್ಷಾಂತ್ಯದ ವರೆಗೆ ರದ್ದುಪಡಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಆದೇಶಿಸಿದ್ದಾರೆ.
ಇದು ಭಾರತೀಯ ಐಟಿ ಉದ್ಯಮಕ್ಕೆ ಆಘಾತ ನೀಡಿದೆ. ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಎದುರಾಗಿದೆ.
ಹೀಗಾಗಿ ವಲಸಿಗರನ್ನು ತಾತ್ಕಾಲಿಕವಾಗಿ ತಡೆಯುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ. ಜೂನ್ 24ರಿಂದ ಈ ಆದೇಶ ಜಾರಿಗೆ ಬರಲಿದ್ದು, 2020ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ.
ಎಚ್-1ಬಿ, ಎಚ್-2ಬಿ, ಜೆ ಮತ್ತು ಎಲ್ ಸಹಿತ ಹಲವಾರು ಜನಪ್ರಿಯ ವೀಸಾಗಳನ್ನು ಪ್ರಸಕ್ತ ವರ್ಷದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ.
ಭಾರತದಲ್ಲಿ ನಿರುದ್ಯೋಗ?
ಅಧ್ಯಕ್ಷ ಟ್ರಂಪ್ ಅವರ ಈ ನಿರ್ಧಾರ ಭಾರತದಿಂದ ಉದ್ಯೋಗಕ್ಕಾಗಿ ಈ ವೀಸಾದಡಿ ಅಮೆರಿಕಕ್ಕೆ ತೆರಳುತ್ತಿದ್ದ ಟೆಕ್ಕಿಗಳಿಗೆ ಶಾಕ್ ನೀಡಿದೆ. ಅಮೆರಿಕ ಪ್ರತಿ ವರ್ಷ ನೀಡುವ ಎಚ್-1ಬಿ ವೀಸಾಗಳ ಪೈಕಿ ಶೇ.70ರಷ್ಟು ಭಾರತೀಯರ ಪಾಲಾಗುತ್ತವೆ. ಹೆಚ್ಚಿನವರು ಐಟಿ ಉದ್ಯೋಗಿಗಳು. ಇನ್ನು ಇದರಿಂದಾಗಿ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದು ಟಿಸಿಎಸ್, ಇನ್ಫೋಸಿಸ್ ಸೇರಿದಂತೆ ಭಾರತೀಯ ಐಟಿ ಕಂಪೆನಿಗಳ ಮೇಲೂ ಪರಿಣಾಮ ಬೀರಲಿದೆ. ಇನ್ನವರು ಹೆಚ್ಚಿನ ಸಂಬಳ ನೀಡಿ ಅಮೆರಿಕದ ವೃತ್ತಿಪರರನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2020-21ರಲ್ಲಿ ಒಟ್ಟು 2.75 ಲಕ್ಷ ಎಚ್-1ಬಿ ಅರ್ಜಿಗಳ ಪೈಕಿ 1.8 ಲಕ್ಷಕ್ಕೂ ಹೆಚ್ಚು ಭಾರತದಿಂದ ಬಂದಿವೆ ಎಂದು ಮೂಲಗಳು ತಿಳಿಸಿವೆ.
ವಲಸಿಗರು ಅಮೆರಿಕವನ್ನು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನನ್ನಾಗಿ ಬೆಳೆಸಿದ್ದಾರೆ. ಈ ಆದೇಶದಿಂದಾಗಿ ಬಹಳ ಬೇಸರವಾಗಿದೆ. ನಾವು ವಿದೇಶಗಳಿಂದ ಆಗಮಿಸಿದವರ ಪರವಾಗಿ ನಿಲ್ಲಲಿದ್ದೇವೆ.
– ಸುಂದರ್ ಪಿಚೈ, ಗೂಗಲ್ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Terrorist Organization: ಹಮಾಸ್ ಉಗ್ರ ನಾಯಕ ಯಾಹ್ಯಾ ಸಿನ್ವರ್ ಹತ್ಯೆ
National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್ ಸ್ಮರಣೆಗೆ ಸರಕಾರ ಕೊಕ್
Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Oxford University: ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್ನಲ್ಲಿ
MUST WATCH
ಹೊಸ ಸೇರ್ಪಡೆ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Bengaluru: ಎಎಸ್ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು
Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.