ಉಜಿರೆ ಎಸ್ಡಿಎಂ ಕಾಲೇಜಿಗೆ ಅಗ್ರ ಶ್ರೇಯಾಂಕ; ಇಂಡಿಯಾಟುಡೇ ನಿಯತಕಾಲಿಕೆಯ ರಾಷ್ಟ್ರೀಯ ಸಮೀಕ್ಷೆ
Team Udayavani, Jul 1, 2020, 6:02 AM IST
ಬೆಳ್ತಂಗಡಿ: ಪ್ರಸಕ್ತ ವರ್ಷ ಇಂಡಿಯಾ ಟುಡೇ ಶೈಕ್ಷಣಿಕ ಕೋರ್ಸ್ಗಳ ನಿರ್ವಹಣ ಸಾಧನೆಯ ಅಂಶಗಳನ್ನು ಪರಿಗಣಿಸಿ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಉಜಿರೆಯ ಎಸ್ಡಿಎಂ ಕಾಲೇಜು ಅಗ್ರ ಶ್ರೇಯಾಂಕ ಪಡೆದು ಮನ್ನಣೆ ಗಳಿಸಿದೆ.
ಸಮೀಕ್ಷೆಯ ಎಲ್ಲ ಮಾಪನಾಂಶಗಳನ್ವಯ ಕಾಲೇಜಿನ ಬಿಸಿಎ ವಿಭಾಗವು ಅಗ್ರಮಾನ್ಯ ಶ್ರೇಯಾಂಕದೊಂದಿಗೆ ಮುಂಚೂಣಿ ಪ್ರಾಶಸ್ತ್ಯ ಪಡೆದು ಗಮನ ಸೆಳೆದಿದೆ.
ರಾಷ್ಟ್ರದ ಪದವಿ, ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭಿಸುತ್ತಿರುವ ವಿವಿಧ ಕೋರ್ಸ್ಗಳ ನಿರ್ವಹಣೆ ಮತ್ತು ಸಾಧನೆಯನ್ನು ಅಳೆಯಲು ಇಂಡಿಯಾ ಟುಡೇ ನಿಯತಕಾಲಿಕವು ಈ ಸಮೀಕ್ಷೆ ನಡೆಸಿತ್ತು. ಜುಲೈ 6ರ ವಿಶೇಷ ಸಂಚಿಕೆಯಲ್ಲಿ ಈ ಕುರಿತ ಸಮಗ್ರ ಮಾಹಿತಿ ಪ್ರಕಟಿಸಿದೆ.
ಬಿಸಿಎ ಮುಂಚೂಣಿಯಲ್ಲಿ
ಎಸ್ಡಿಎಂ ಕಾಲೇಜಿನ ಬಿಸಿಎ ವಿಭಾಗವು ಎಲ್ಲ ಮಾಪನಾಂಶಗಳ ಅನ್ವಯ ಮುಂಚೂಣಿ ಸಾಧನೆ ತನ್ನದಾಗಿಸಿಕೊಂಡಿದೆ. ಈ ಶತಮಾನದ ಭಾರತದ ಉದಯೋನ್ಮುಖ ಸಂಸ್ಥೆ (Emerging Colleges of
the Century) ಎಂಬ ಮಾನದಂಡದಡಿ ಐದನೇ ರ್ಯಾಂಕ್ತನ್ನದಾಗಿಸಿ ಕೊಳ್ಳಲು ಈ ವಿಭಾಗದ ಕೊಡುಗೆ ಕಾರಣವಾಗಿದೆ.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಪ್ರಮಾಣವಾರು ಸಾಧನೆಯಲ್ಲಿ 3ನೇ ರ್ಯಾಂಕ್ ಪಡೆದಿದೆ. ಅತ್ಯಂತ ಕಡಿಮೆ ಶುಲ್ಕ ನಿಗದಿಗೊಳಿಸಿದ ಕಾಲೇಜುಗಳ ಪಟ್ಟಿಯಲ್ಲಿ 6ನೇ ರ್ಯಾಂಕ್ ಪಡೆಯುವುದಕ್ಕೆ ಸಹಾಯಕವಾಗಿದೆ. ಪಾವತಿಸಿದ ಶುಲ್ಕಕ್ಕೆ ಅನುಗುಣವಾದ ಗುಣಮಟ್ಟದ ಶಿಕ್ಷಣ ನೀಡಿದ ಕಾಲೇಜು ಗಳ ಪಟ್ಟಿಯಲ್ಲಿ 5ನೇ ರ್ಯಾಂಕ್ ತನ್ನದಾಗಿಸಿಕೊಂಡಿದೆ.
ಕಡಿಮೆ ಶುಲ್ಕ ನಿಗದಿಗೊಳಿಸಿದ ಕೋರ್ಸ್ಗಳ ಪಟ್ಟಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು 8ನೇ ರ್ಯಾಂಕ್, ಪಾವತಿ ಸಿದ ಶುಲ್ಕಕ್ಕನುಗುಣವಾದ ಗುಣ ಮಟ್ಟದ ಶಿಕ್ಷಣದ ಮಾಪನಾಂಶದ ಪಟ್ಟಿಯಲ್ಲಿ 4ನೇ ರ್ಯಾಂಕ್ ಗಳಿಸಿದೆ.
ಬಿಬಿಎ ವಿಭಾಗವು ಕಡಿಮೆ ಶುಲ್ಕದ ಕೋರ್ಸ್ಗಳ ಪಟ್ಟಿಯಲ್ಲಿ 8ನೇ ರ್ಯಾಂಕ್ ಪಡೆದಿದೆ. ವಿದ್ಯಾರ್ಥಿ – ವಿದ್ಯಾರ್ಥಿನಿಯರ ಪ್ರಮಾಣವಾರು ದಾಖಲಾತಿ ದೃಷ್ಟಿಯಿಂದ ಕಲಾ ವಿಭಾಗವು ಮೊದಲ ರ್ಯಾಂಕ್ ಗಳಿಸಿದೆ. ಕಾಲೇಜಿಗೆ ಲಭಿಸಿದ ಈ ಮನ್ನಣೆಗೆ ಸಂಸ್ಥೆಯ ಅಧ್ಯಕ್ಷ ಡಾ| ವೀರೇಂದ್ರ ಹೆಗ್ಗಡೆ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಡಾ| ಸತೀಶ್ಚಂದ್ರ ಎಸ್. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.