![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jul 1, 2020, 2:55 PM IST
ಮುದ್ದೇಬಿಹಾಳ: ಬಸ್ ಎದುರು ವಾಗ್ವಾದ ನಿರತರಾಗಿರುವ ಬಸ್ನ ಸಿಬ್ಬಂದಿ, ಪ್ರಯಾಣಿಕರು
ಮುದ್ದೇಬಿಹಾಳ: ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿ, ಬಲವಂತ ಹೆಚ್ಚಾದಾಗ ಘಟಕ ವ್ಯವಸ್ಥಾಪಕನ ಸೂಚನೆ ಮೇರೆಗೆ ಸಾರಿಗೆ ಸಂಸ್ಥೆಯ ಬಸ್ಸನ್ನೇ ಇಲ್ಲಿನ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ ಘಟನೆ ಮಂಗಳವಾರ ರಾತ್ರಿ ಇಲ್ಲಿ ನಡೆದಿದೆ.
ಬಸವನ ಬಾಗೇವಾಡಿ- ಬೆಂಗಳೂರು ಬಸ್ ಇಲ್ಲಿನ ಬಸ್ ನಿಲ್ದಾಣಕ್ಕೆ ಸಂಜೆ 6ಕ್ಕೆ ಬಂದಿತ್ತು. ನಾಲತವಾಡದ ಒಬ್ಬ ಮಹಿಳೆ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ 5-6 ಪ್ರಯಾಣಿಕರು ಬೆಂಗಳೂರಿಗೆ ಹೊರಡಲು ಏರಿದ್ದರು. ಕಡಿಮೆ ಪ್ರಯಾಣಿಕರಿರುವುದನ್ನು ಅರಿತ ಚಾಲಕ, ನಿರ್ವಾಹಕರು ಬೆಂಗಳೂರಿಗೆ ಬಸ್ ಬಿಡಲು ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿದೆ.
ವಿಷಯ ತಿಳಿದ ಬಸವನಬಾಗೇವಾಡಿ ಘಟಕ ವ್ಯವಸ್ಥಾಪಕರು ಆದಾಯ ಬರುವುದಿಲ್ಲವಾದ್ದರಿಂದ ಬಸ್ ಓಡಿಸುವುದಿಲ್ಲ ಎಂದು ಹೇಳಿದ್ದಾರೆ. ಒತ್ತಡ ಹೆಚ್ಚಾದಾಗ ಬಸ್ನ್ನು ಪೊಲೀಸ್ ಠಾಣೆಗೆ ಒಯ್ದು ನಿಲ್ಲಿಸುವಂತೆ ಘಟಕ ವ್ಯವಸ್ಥಾಪಕರು ಚಾಲಕನಿಗೆ ಸೂಚಿಸಿದ್ದಾರೆ. ಅವರು ಹೇಳಿದಂತೆ ಚಾಲಕ ನಡೆದುಕೊಂಡಿದ್ದಾನೆ.
ಪ್ರಯಾಣಿಕರು ಪೊಲೀಸರಿಗೆ ತಿಳಿಸಿದರೂ, ಶಾಸಕರ ಬಳಿ ಹೋಗಿ ಅಳಲು ತೋಡಿಕೊಂಡರೂ ಪ್ರಯೋಜನ ಆಗಲಿಲ್ಲ. ಕೊನೆಗೆ ನಾಲತವಾಡದ ಮಹಿಳೆ ನಮ್ಮೂರಿಗೆ ಮರಳಿ ಹೋಗಲು ಬಸ್ ಇಲ್ಲ. ಈಗ ನಾನೇನು ಮಾಡಬೇಕು ಎಂದು ರಂಪಾಟ ಮಾಡಿದರೂ ಪ್ರಯೋಜನ ಕಂಡುಬರಲಿಲ್ಲ. ಬಸ್ ಚಾಲಕ, ನಿರ್ವಾಹಕರು ಮರಳಿ ಬಸ್ನ್ನು ತಮ್ಮ ಘಟಕದತ್ತ ಚಲಾಯಿಸಿಕೊಂಡು ಹೋಗುವ ಮೂಲಕ ಇಡಿ ಘಟನೆ ಗೊಂದಲದಲ್ಲೇ ಮುಗಿಯಿತು. ಪ್ರಯಾಣಿಕರು ಯಥೇತ್ಛವಾಗಿ ಶಾಪ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.