ಟಿವಿ ರೈಟ್ಸ್‌, ಡಬ್ಬಿಂಗ್‌ ರೈಟ್ಸ್‌ ಕಾಲ ಹೋಯ್ತು : ಓಟಿಟಿಗಾಗಿಯೇ ಸಿನ್ಮಾ ಮಾಡೋ ಕಾಲ ಬಂತು

ಓಟಿಟಿಗೆ 100 ಸಿನ್ಮಾಗಳ ತಯಾರು!

Team Udayavani, Jul 24, 2020, 12:06 PM IST

ಟಿವಿ ರೈಟ್ಸ್‌, ಡಬ್ಬಿಂಗ್‌ ರೈಟ್ಸ್‌ ಕಾಲ ಹೋಯ್ತು : ಓಟಿಟಿಗಾಗಿಯೇ ಸಿನ್ಮಾ ಮಾಡೋ ಕಾಲ ಬಂತು

ಒಂದು ಕಾಲವಿತ್ತು. ಒಂದಷ್ಟು ಮಂದಿ ತಮ್ಮ ಸಿನಿಮಾಗಳನ್ನು ಟಿವಿ ರೈಟ್ಸ್‌ ಹಾಗೂ ಡಬ್ಬಿಂಗ್‌ ರೈಟ್ಸ್‌ಗಳಿಗಾಗಿಯೇ ತಯಾರಿಸುತ್ತಿದ್ದರು. ಅಂತಹವರ ಸಂಖ್ಯೆ ಕೂಡ ಜಾಸ್ತಿಯಾಗಿತ್ತು. ಕಡಿಮೆ ಬಜೆಟ್‌ನಲ್ಲಿ ಅತೀ ಕಡಿಮೆ ದಿನಗಳಲ್ಲೇ ಸಿನಿಮಾಗಳನ್ನು ತಯಾರಿಸಿ, ಬಿಡುಗಡೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಕೇವಲ ಟಿವಿ ರೈಟ್ಸ್‌ ಮತ್ತು ಡಬ್ಬಿಂಗ್‌ ರೈಟ್ಸ್‌ ಗೆಂದೇ ಸಿನಿಮಾಗಳು ಜೋರಾಗಿಯೇ ತಯಾರಾಗುತ್ತಿದ್ದವು.

ಕಾಲ ಕ್ರಮೇಣ ಗುಣಮಟ್ಟ ಹಾಗೂ ಕಥೆಯಲ್ಲಿ ಗಟ್ಟಿತನವಿರುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಂತಹ ಕಾಲ ಬಂತು. ಅಲ್ಲಿಂದ ಕೇವಲ ಟಿವಿ ರೈಟ್ಸ್‌ ಮತ್ತು ಡಬ್ಬಿಂಗ್‌ ರೈಟ್ಸ್‌
ಗೆಂದೇ ತಯಾರಾಗುತ್ತಿದ್ದ ಸಿನಿಮಾಗಳ ಸಂಖ್ಯೆ ಕೂಡ ಇಳಿಮುಖವಾಯ್ತು. ಈಗ ಇವೆರೆಡನ್ನೂ ಹೊರತುಪಡಿಸಿರುವ ಹೊಸ ಟ್ರೆಂಡ್‌ ಶುರುವಾಗಿದೆ!

ಹೌದು, ಕೋವಿಡ್ ಸಮಸ್ಯೆಯಿಂದಾಗಿ ಇಡೀ ಜಗತ್ತೇ ಸ್ಟ್ರಕ್‌ ಆಗಿರೋದು ನಿಜ. ಇದರಿಂದ ಸಿನಿಮಾ ರಂಗವೂ ಹೊರತಲ್ಲ. ಹೀಗಾಗಿ ಚಿತ್ರಮಂದಿರಗಳು ಕಳೆದ ಐದು ತಿಂಗಳಿನಿಂದಲೂ ತಮ್ಮ ಬಾಗಿಲು ಮುಚ್ಚಿವೆ. ಚಿತ್ರೀಕರಣ ಕೂಡ ಬಂದ್‌ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿನಿಮಾ ಮಂದಿ ಕಂಗಾಲಾಗಿದ್ದು ನಿಜ. ಕೊರೊನಾ ಬರುವ ಮುನ್ನ, ಬಿಡುಗಡೆಗೆ
ಸಜ್ಜಾಗಿದ್ದ, ಚಿತ್ರೀಕರಣ ಪೂರೈಸಿ, ಇನ್ನೇನು ಚಿತ್ರಮಂದಿರಕ್ಕೆ ಅಪ್ಪಳಿಸಲು ರೆಡಿಯಾಗಿದ್ದ ಚಿತ್ರಗಳ ಪಾಡಂತೂ ಹೇಳತೀರದ್ದಾಗಿತ್ತು. ಎಲ್ಲಿಂದಲೋ ಹಣ ತಂದು ಸಿನಿಮಾಗೆ ಹಾಕಿದ್ದ ನಿರ್ಮಾಪಕರ ಪರಿಸ್ಥಿತಿಯಂತೂ ಹೀನಾಯವಾಗಿದ್ದು ಸುಳ್ಳಲ್ಲ. ಈಗಲೂ ಅದರಿಂದ ಆಚೆ ಬರಲಾಗದೆ ಒದ್ದಾಡುವಂತಹ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ನಿರ್ಮಾಪಕರು ಆಯ್ಕೆ ಮಾಡಿಕೊಂಡ ದಾರಿ ಓಟಿಟಿ ಎಂಬ ವೇದಿಕೆ.

ನಿಜ, ಓಟಿಟಿ ಫ್ಲಾಟ್‌ಫಾರಂನಲ್ಲಿ ತಮ್ಮ ಸಿನಿಮಾಗಳನ್ನು ಕೊಡುವ ಧೈರ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರ ತೆರೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ ಎಂಬುದನ್ನು
ಅರಿತಿರುವ ನಿರ್ಮಾಪಕರು, ಅರ್ಧಕ್ಕೆ ನಿಂತಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ ಡಿಜಿಟಲ್‌ ವೇದಿಕೆಯಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ನಿರ್ದೇಶಕ, ನಿರ್ಮಾ  ಪಕರು, ಓಟಿಟಿಗಾಗಿಯೇ ಕಥೆ ರೆಡಿಮಾಡಿಕೊಂಡು, ಸಿನಿಮಾ ನಿರ್ಮಿಸಿ, ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ತಯಾರಿ
ನಡೆಸಿದ್ದಾರೆ. ಕೆಲವರು ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದಾರೆ. ಸಿನಿಮಾ ಮಂದಿ ಡಿಜಿಟಲ್‌ ವೇದಿಕೆಗೆ ಮೊರೆ ಹೋಗೋಕೆ ಕಾರಣ, ಕೊರೊನಾ ಸಮಸ್ಯೆಯಿಂದ ಚಿತ್ರಮಂದಿರ ಗಳು ಸದ್ಯಕ್ಕೆ ಓಪನ್‌ ಆಗುವುದಿಲ್ಲ ಎಂಬುದು ಒಂದಾದರೆ, ಸಾಲ ಮಾಡಿ ಸಿನಿಮಾ ಮಾಡಿದವರ ಸಮಸ್ಯೆಯೂ ಹೆಚ್ಚಾಗಿದ್ದರಿಂದ, ಅರ್ಧಕ್ಕೆ ನಿಂತಿರುವ, ಮುಗಿಯಲು ಬಂದಿರುವ ಚಿತ್ರಗಳನ್ನೂ ಕೂಡ ಡಿಜಿಟಲ್‌ಗೆ ಕೊಡಲು ಮುಂದಾಗುತ್ತಿದ್ದಾರೆ.

ಇನ್ನು, ಹೊಸಬರಷ್ಟೇ ಅಲ್ಲ, ಬಹುತೇಕ ಹಳಬರು ಕೂಡ ಓಟಿಟಿ ಫ್ಲಾಟ್‌ಫಾರಂಗಾಗಿಯೇ ಕಂಟೆಂಟ್‌ ರೆಡಿ ಮಾಡಿಸಿ, ಕಡಿಮೆ ಬಜೆಟ್‌ನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಸಿನಿಮಾ ತಯಾರಿಸುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಓಟಿಟಿಯಲ್ಲೂ ಈಗ ಗುಣಮಟ್ಟ ಮತ್ತು ಕಂಟೆಂಟ್‌ ಸಿನಿಮಾಗಳ ಅಗತ್ಯವಿದೆ. ಅಂತಹ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದಲೇ ನಿರ್ಮಾಪಕರು, ನಿರ್ದೇಶಕರು ಈಗ ತಮ್ಮ ಚಿತ್ತವನ್ನೆಲ್ಲಾ ಓಟಿಟಿ ಫ್ಲಾಟ್‌ಫಾರಂನತ್ತ ಹರಿಸಿದ್ದು, ಆ ನಿಟ್ಟಿನಲ್ಲಿ ಈಗಾಗಲೇ ಕಂಟೆಂಟ್‌ ರೆಡಿಮಾಡಿಕೊಂಡು, ಕಡಿಮೆ ಬಜೆಟನಲ್ಲಿ ಗುಣಮಟ್ಟ ಕಾಪಾಡಿಕೊಂಡು ಸಿನಿಮಾ ತಯಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಂದಹಾಗೆ, ಓಟಿಟಿ ಫ್ಲಾಟ್‌ಫಾರಂ ನಂಬಿಕೊಂಡೇ ಇಂದು ಅದೆಷ್ಟೋ ಹೊಸಬರು ಸಸ್ಪೆನ್ಸ್‌,ಥ್ರಿಲ್ಲರ್‌, ಹಾರರ್‌ ಮತ್ತು ಆ್ಯಕ್ಷನ್‌ ಕಂಟೆಂಟ್‌ಗೆ ಹೆಚ್ಚು ಒತ್ತು ಕೊಡುವ ಮೂಲಕ ಸಿನಿಮಾ
ಮಾಡುವಲ್ಲಿ ನಿರತರಾಗಿದ್ದಾರೆ. ಅತೀ ಕಡಿಮೆ ಬಜೆಟ್‌ನಲ್ಲೂ ಒಳ್ಳೆಯ ಸಿನಿಮಾ ಮಾಡಿ ಸೈ ಎನಿಸಿಕೊಂಡವರ ಸಂಖ್ಯೆ ಬಹಳವೇ ಇದೆ. ಹಾಗಾಗಿ, ಅದೇ ದಾರಿಯಲ್ಲಿ ನಾವೂ ಹೋಗಬೇಕು ಎಂಬ ಉದ್ದೇಶದಿಂದಲೇ ಈಗ ಓಟಿಟಿಗಾಗಿಯೇ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓಟಿಟಿ ನಂಬಿಕೊಂಡೇ ಸಿನಿಮಾ ಮಾಡುವವರಿಗೆ ಅಂಥದ್ದೊಂದು ನಂಬಿಕೆ ಬಂದಿದ್ದಾರೂ ಯಾಕೆ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲವಾದರೂ, ಸದ್ಯದ ಪರಿಸ್ಥಿತಿಯಲ್ಲಂತೂ ಚಿತ್ರಮಂದಿರಗಳು ತೆರೆಯಲು ಸಾಧ್ಯವಿಲ್ಲ ಎಂಬ ಅರಿವು ಸಿನಿಮಾ ಮಂದಿಗಿದೆ.

ಚಿತ್ರಮಂದಿರಗಳು ಆರಂಭಗೊಂಡರೂ, ಜನರು ಸಿನಿಮಾ ನೋಡಲು ಬರುತ್ತಾರೆ ಎಂಬ ಯಾವ ವಿಶ್ವಾಸವೂ ಇಲ್ಲ. ಬಂದರೂ ಸ್ಟಾರ್ ಸಿನಿಮಾಗಳಿಗೆ ಫ್ಯಾನ್ಸ್‌ ಮಾತ್ರ ಬರಬಹುದು ಎಂಬ ಲೆಕ್ಕಾಚಾರವೂ ಇದೆ. ಫ್ಯಾಮಿಲಿ ಆಡಿಯನ್ಸ್‌ ಕರೆತರುವುದು ಸದ್ಯಕ್ಕೆ ಸುಲಭವಿಲ್ಲ. ಹಾಗಾಗಿಯೇ, ಸಿನಿಮಾ ನಂಬಿಕೊಂಡೇ ಬದುಕು ಸವೆಸುತ್ತಿರುವ ಜನರೀಗ ಓಟಿಟಿಗಾಗಿಯೇ ಸಿನಿಮಾ ತಯಾರು ಮಾಡಲು ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ. ಹಾಗೊಮ್ಮೆ ಓಟಿಟಿಗಾಗಿಯೇ ಸಿನಿಮಾ ಮಾಡುವವರ ಸಂಖ್ಯೆ ಲೆಕ್ಕ ಹಾಕಿದರೆ, ನೂರರ ಗಡಿಯತ್ತ ಬಂದು ನಿಲ್ಲುತ್ತದೆ. ಸದ್ದಿಲ್ಲದೆಯೇ, ಈ ರೀತಿಯ ಪ್ರಯತ್ನ ವೊಂದು ಸಾಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದೇ ಸದ್ಯಕ್ಕಿರುವ ಯಕ್ಷ ಪ್ರಶ್ನೆ.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.