ಕೆಎಫ್‌ಸಿ: ಕಟ್ಟಿ ಬೆಳೆಸಿದ ಸಾಹಸಗಾಥೆ

ಹದಿನೆಂಟು ಬಾರಿ ನಿರಾಶೆಗೊಂಡರೂ ಛಲ ಬಿಡದೆ ಕನಸನ್ನು ನನಸಾಗಿಸಿದ ರೀತಿಯೇ ಸ್ಫೂರ್ತಿದಾಯಕ

Team Udayavani, Jul 24, 2020, 3:10 PM IST

KFC

ಎಷ್ಟೋ ಮಂದಿ ಜೀವನದಲ್ಲಿ ತಮ್ಮದೇ ಆದ ಗುರಿ ಹೊಂದಿರುತ್ತಾರೆ. ಆದರೆ ಇಂಥವರಲ್ಲಿ ಕೆಲವರು ತಾವು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ವಿಫ‌ಲರಾಗುತ್ತಾರೆ. ಯಾಕೆಂದರೆ ಅಂತಹವರಿಗೆ ತಾಳ್ಮೆ ತುಂಬಾ ಕಡಿಮೆ.

ಒಂದೆರಡು ಸಲ ಗುರಿಯನ್ನು ಸಾಧಿಸಲು ಹೊರಡುತ್ತಾರೆ. ಅದರಲ್ಲಿ ವಿಫ‌ಲವಾದರೆ “ನನ್ನಿಂದ ಸಾಧ್ಯವಿಲ್ಲ’ ಎಂದು ಕೈ ಚೆಲ್ಲಿ ಕುಳಿತು ಬಿಡುತ್ತಾರೆ. ಆದರೆ ಸಾಧನೆಯ ಹಾದಿ ಅಲ್ಲಿಗೆ ಕೊನೆಯಾಗಬಾರದು. ಸತತ ಪ್ರಯತ್ನದಿಂದ ಗೆಲುವಿನ ಶಿಖರ ಏರಿದವರೊಬ್ಬರ ಯಶಸ್ಸಿನ ಕಥೆ ಇಲ್ಲಿದೆ.

ಕೆಎಫ್ಸಿ ಚಿಕನ್‌ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಸಂಸ್ಥೆ ರಾತ್ರಿ ಬೆಳಗಾಗುವುದರೊಳಗೆ ಬೆಳೆದು ನಿಂತಿಲ್ಲ. ಇದರ ಹಿಂದೆ ಅಪಾರ ಶ್ರಮವಿದೆ, ಗೆಲ್ಲಲೇಬೇಕೆಂಬ ಶ್ರದ್ಧೆ ಇದೆ. ಅಮೆರಿಕದ ಕರ್ನಲ್‌ ಹಾರ್ಲಂಡ್‌ ಸ್ಯಾಂಡರ್ಸ್‌ ಎಂಬುವವರು ಈ ಕೆಎಫ್ಸಿ ಚಿಕನ್‌ ಅನ್ನು ಆರಂಭಿಸಿದವರು.

ಹದಿನೆಂಟು ಬಾರಿ ನಿರಾಶೆಗೊಂಡರೂ ಛಲ ಬಿಡದೆ ಕನಸನ್ನು ನನಸಾಗಿಸಿದ ರೀತಿಯೇ ಸ್ಫೂರ್ತಿದಾಯಕ. ಸ್ಯಾಂಡರ್ಸ್‌ ಅನೇಕ ಉದ್ಯಮಗಳನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದರು. ಆದರೆ ಪ್ರತಿ ಬಾರಿಯೂ ವಿಫ‌ಲರಾಗುತ್ತಿದ್ದರು.

ಕೊನೆಗೆ ತಮ್ಮ 40ನೇ ವಯಸ್ಸಿನಲ್ಲಿ ಕೋಳಿ ಮಾಂಸದ ಆಹಾರ ಮಾರಾಟ ಮಾಡಲು ಪ್ರಾರಂಭಿಸಿದರು. ಆದರೆ ಸಂಘರ್ಷ ಮತ್ತು ಯುದ್ಧಗಳಿಂದಾಗಿ ರೆಸ್ಟೋರೆಂಟ್‌ನ ಕನಸು ಅನೇಕ ಬಾರಿ ಕಮರಿತ್ತು. ಅನಂತರ ಅವರು ರೆಸ್ಟೋರೆಂಟ್‌ ಅನ್ನು ಪ್ರಾಂಚೈಸ್‌ ಮಾಡಲು ಪ್ರಯತ್ನಿಸಿದರು.

ಅವರ ಪಾಕ ವಿಧಾನ ಅಂತಿಮ ಅನುಮೋದನೆಗೆ ಮೊದಲು ಬರೋಬ್ಬರಿ 1,009 ಬಾರಿ ತಿರಸ್ಕರಿಸಲ್ಪಟ್ಟಿತ್ತು. ಸೋಲಿಗೆ ಕುಗ್ಗದೆ ನಿರಂತರವಾಗಿ ಪರಿಶ್ರಮ ಪಟ್ಟ ಫ‌ಲವಾಗಿ ಕೆಂಟುಕಿ ಫ್ರೈಡ್‌ ಚಿಕನ್‌ ಭಾರೀ ಯಶಸ್ಸು ಕಂಡಿತು. ಬಳಿಕ ಕೆಎಫ್ಸಿಯನ್ನು ಜಾಗತಿಕವಾಗಿ ವಿಸ್ತರಿಸಲಾಯಿತು. ಸ್ಯಾಂಡರ್ಸ್‌ ಅವರ ಮುಖದ ಚಿತ್ರವನ್ನು ಇಂದಿಗೂ ಲೋಗೊಗಳಲ್ಲಿ ಬಳಸಲಾಗುತ್ತಿದೆ.

ಕಂಪೆನಿಯನ್ನು ಸ್ಯಾಂಡರ್ಸ್‌ ಅವರು ಅದನ್ನು 1964ರಲ್ಲಿ ಜಾನ್‌ ವೈ. ಬ್ರೌನ್‌ ಜೂನಿಯರ್‌ ಮತ್ತು ಜ್ಯಾಕ್‌ ಸಿ. ಮಾಸ್ಸಿ ನೇತೃತ್ವದ ಸಂಸ್ಥೆಗೆ ಮಾರಾಟ ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ ಮೊದಲ ಅಮೆರಿಕನ್‌ ತ್ವರಿತ ಆಹಾರ ಸರಪಳಿಗಳಲ್ಲಿ ಕೆಎಫ್ಸಿ ಒಂದಾಗಿದೆ. 1960ರ ದಶಕದ ಮಧ್ಯಭಾಗದಲ್ಲಿ ಕೆನಡಾ, ಇಂಗ್ಲೆಂಡ್‌, ಮೆಕ್ಸಿಕೊ ಮತ್ತು ಜಮೈಕಾದಲ್ಲಿ ಮಳಿಗೆಗಳನ್ನು ತೆರೆಯಿತು. ಮುಂದಿನ ದಶಕಗಳಲ್ಲಿ ಕೆಎಫ್ಸಿ ಹಲವು ಏಳು ಬಿಳುಗಳನ್ನು ಕಂಡಿದ್ದು, ಹಲವು ಬ್ಯುಸಿನೆಸ್‌ ಮೆನ್‌ಗಳ ಕೈ ಪಾಲಾಗಿತ್ತು.  ಇವೆಲ್ಲದರ ನಡುವೆ ಕೆಎಫ್ಸಿ ಇಂದೂ ತನ್ನ ಆಹಾರಗಳಿಗೆ ತುಂಬಾ ಜನಮನ್ನಣೆಯನ್ನು ಉಳಿಸಿಕೊಂಡಿದೆ.

-ಶುಭಾ ಶರತ್‌, ಉರ್ವಸ್ಟೋರ್‌, ಮಂಗಳೂರು

(ಅತಿಥಿ ಅಂಗಳ: ಅಂಕಣ)

 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.