ಚಿಕ್ಕಬಳ್ಳಾಪುರ: ದರೋಡೆ ಮಾಡಿದರೆಂದು‌ ದೂರು ಕೊಟ್ಟಾತನೇ ಆರೋಪಿಯಾಗಿ ಸಿಕ್ಕಿಬಿದ್ದ!


Team Udayavani, Jul 26, 2020, 12:34 PM IST

ಚಿಕ್ಕಬಳ್ಳಾಪುರ: ದರೋಡೆ ಮಾಡಿದರೆಂದು‌ ದೂರು ಕೊಟ್ಟಾತನೇ ಆರೋಪಿಯಾಗಿ ಸಿಕ್ಕಿಬಿದ್ದ!

ಚಿಕ್ಕಬಳ್ಳಾಪುರ: ಖಾಸಗಿ ಕಂಪನಿಗೆ ಸೇರಿದ ಕೋಳಿಗಳನ್ನು ಮಾರಾಟ ಮಾಡಿದ ಹಣ ತೆಗೆದುಕೊಂಡು ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ನಮ್ಮನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದೋಚಿ ಪರಾರಿಯಾದರೆಂದು ಹೇಳಿ ಪೊಲೀಸರಿಗೆ ದೂರು ಕೊಟ್ಟಿದ್ದ ಖಾಸಗಿ ಕಂಪನಿ ಸೂಪರ್ ವೈಸರ್ ಒಬ್ಬ ತನಿಖೆ ವೇಳೆ ತಾನೇ‌ ಆರೋಪಿಯಾಗಿ ಸಿಕ್ಕಿ ಬಿದ್ದಿರುವ ಪ್ರಸಂಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಏನಿದು ಘಟನೆ?

ಕಳೆದ ಜುಲೈ 21ರಂದು ದೇವನಹಳ್ಳಿ ಮೂಲದ ಲೋಟಸ್ ಫಾರ್ಮ್ ಕಂಪನಿಯ ಲೈನ್ ಸೂಪರ್ ವೈಸರ್ ಉದಯಕುಮಾರ್ ಎಂಬುವರು ತಮ್ಮ ಸಹೋದ್ಯೋಗಿ ಮಂಜುನಾಥ ಜೊತೆ ಸೇರಿ ಚಿಕ್ಕಬಳ್ಳಾಪುರ ತಾಲೂಕಿನ ಆನೆಮಡಗು ಕೊತ್ತೂರರು ರಸ್ತೆಯ ಹರೀಶ್ ಎಂಬುವರ ಕೋಳಿ ಫಾರಂ ಹೋಗಿ ಕಂಪನಿಯ ಒಪ್ಪಂದದಂತೆ ಸಾಕಾಣೆಕೆ ಮಾಡಲಾಗಿದ್ದ ಕೋಳಿಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಿ ಸಂಗ್ರಹವಾಗಿದ್ದ ಬರೋಬರಿ 7.91 ಲಕ್ಷ. ರೂ ಹಣವನ್ನು ತೆಗೆದುಕೊಂಡ ಬರುವ ವೇಳೆ‌ ನಾಲ್ವರು ಅಪರಿಚಿತರು ಬೈಕ್ ನ್ನು ಅಡ್ಡಗಟ್ಟಿ ಚಾಕು ತೋರಿಸಿ ಮದ್ಯದ ಬಾಟಲುಗಳಿಂದ ನಮ್ಮ ಹಲ್ಲೆ ಮಾಡಿ ಹಣ ದೋಚಿ‌ ಪರಾರಿಯಾಗಿದ್ದರೆಂದು ಉದಯಕುಮಾರ್ ಚಿಕ್ಕಬಳ್ಳಾಪುರ ‌ಗ್ರಾಮಾಂತರ ಠಾಣೆ ‌ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ವೇಳೆ ದೂರುದಾರನೇ ಆರೋಪಿ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲಿಸರು ಪ್ರಕರಣವನ್ನು ಚಿಕ್ಕಬಳ್ಳಾಪುರ ಆರಕ್ಷಕ ಉಪ ಅಧೀಕ್ಷಕ ರವಿಶಂಕರ್, ಸಿಪಿಐ ಪ್ರಶಾಂತ್, ಪಿಎಸ್ಐ ಚೇತನ್ ಕಯಮಾರ್ ಹಾಗೂ ಸಿಬ್ಬಂದಿ ವೈಜ್ಞಾನಿಕವಾಗಿ ತನಿಖೆ ನಡೆಸಿ  ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯ ಪ್ರಶಾಂತ್, ನರಸಿಂಹ ಮೂರ್ತಿ, ಪೃಥ್ವಿರಾಜ್‌, ಕಿರಣ್, ನವೀನ್ ಕುಮಾರ್ ಎಂಬುವರನ್ನು ಬಂಧಿಸಿ‌ ವಿಚಾರಣೆಗೆ ಒಳಪಡಿಸಿದ್ದರು.

ಕೃತ್ಯಕ್ಕೆ ಉದಯಕುಮಾರ್ ಪ್ರೇರಣೆ

ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಾವು ಡಕಾಯಿತಿ ನಡೆಸಲು ಉದಯಕುಮಾರ್ ಸಹಕಾರ ಇತ್ತು. ಮೊದಲಿಗೆ ಆತ ಸಂಚು ರೂಪಿಸಿ‌ ನಾವು ಲೋಟಸ್ ಕಂಪನಿಗೆ ಸೇರಿದ ಕೋಳಿಗಳನ್ನು ಮಾರಾಟ ಮಾಡಿ ಹಣ ತರುವ ವೇಳೆ‌ ನೀವು ನಮ್ಮನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಲ್ಲೆ ಮಾಡಿದಂತೆ ನಾಟಕವಾಡಿ ಹಣ ಸುಲಿಗೆ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ನಮಗೆ ಮೊದಲೇ ತಿಳಿಸಿದಂತೆ ನಾವು ಮಾಡಿದ್ದೇವೆಂದು‌ ಪೊಲೀಸರ ವಿಚಾರಣೆ ವೇಳೆ‌ ಬಂಧಿತರು ಬಾಯಿ ಬಿಡುವ ಮೂಲಕ ಡಕಾಯಿತಿ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಇಡೀ ಪ್ರಕರಣಕ್ಕೆ‌ ಪೊಲೀಸರಿಗೆ ದೂರು ನೀಡಿದ್ದ ಅಸಾಮಿ ಉದಯಕುಮಾರ್ ನೇ ಸೂತ್ರದಾರ ಎನ್ನುವುದು ಈಗ ಬೆಳಕಿಗೆ ಬಂದಿದೆ.

ಇನ್ನೋವಾ ಕಾರು ಜಪ್ತಿ

ಆರೋಪಿಗಳಿಂದ ಕೃತ್ಯಕ್ಕೆ‌ ಬಳಕೆ ಮಾಡಿದ್ದ‌ ಇನ್ನೋವಾ ಕಾರು, ಪಲ್ಸರ್ ದ್ವಿಚಕ್ರ ವಾಹನ, ನಾಲ್ಕು ಮೊಬೈಲ್  ಗಳ ಸಹಿತ ಆರೋಪಿಗಳಿಂದ 7.60 ಲಕ್ಷ ರೂ, ನಗದು ವಶಪಡಿಸಿಕೊಳ್ಳಾಗಿದೆಯೆಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

chintamai-Murder

Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು! 

10-gudibanda

Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ

Sudhakar–sandeep-Reddy

BJP Rift: ಸಂಸದ ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.