8 ತಿಂಗಳ ಮಗು ಕಾಪಾಡಿದ ವೈದ್ಯರು
Team Udayavani, Aug 12, 2020, 6:38 AM IST
ಸಾಂದರ್ಭಿಕ ಚಿತ್ರ
ಕೊಚ್ಚಿ: ಉಪಾಹಾರ ಸೇವನೆ ವೇಳೆ ಮಗುವಿನ ಶ್ವಾಸಕೋಶದೊಳಗೆ ಆಕಸ್ಮಿಕವಾಗಿ ಸೇರಿಕೊಂಡ ಆಹಾರದ ತುಣುಕನ್ನು ಕೇರಳ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವೈದ್ಯರ ಕೃಪೆಯಿಂದ 8 ತಿಂಗಳ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ.
ಕೇಕ್ ಹಾಗೂ ರಸ್ಕಿನ ತುಣುಕುಗಳನ್ನು ಮಗುವಿಗೆ ಆಹಾರವಾಗಿ ನೀಡಲಾಗಿತ್ತು. ಹಠಾತ್ತನೆ ಕೆಮ್ಮು ಬಂದಿದ್ದರಿಂದ ರಸ್ಕಿನ ಕಣಗಳು ಅನ್ನನಾಳದ ಮೂಲಕ ಶ್ವಾಸಕೋಶವನ್ನು ಸೇರಿದೆ. ಉಸಿರಾಟ ಕಷ್ಟವಾದ ಕಾರಣ ಕೂಡಲೇ ಮಗುವನ್ನು ಕೊಚ್ಚಿನ್ನ ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ದಾಖಲಿಸಿ, ಫಾರಿನ್ ಬಾಡಿಯನ್ನು ಪರೀಕ್ಷೆಗೊಳಪಡಿಸಲಾಯಿತು.
ಏನಿದು “ಫಾರಿನ್ ಬಾಡಿ’?: “ದೇಹಕ್ಕೆ ಮುಳ್ಳು ಚುಚ್ಚಿದಾಗ ಅಥವಾ ನಾಣ್ಯ ಇತ್ಯಾದಿ ವಸ್ತುಗಳು ಒಳ ಸೇರಿದಾಗ ಆ ದೇಹವನ್ನು ಫಾರಿನ್ ಬಾಡಿ ಎನ್ನುತ್ತೇವೆ. ಮಗುವಿನ ಫಾರಿನ್ ಬಾಡಿಯ ಒಳಗೆ ಬ್ರಾಂಕೋಸ್ಕೋಪಿಯನ್ನು ತೂರಿಸಿ, ಅದರಲ್ಲಿನ ಕ್ಯಾಮೆರಾದ ಮೂಲಕ ಶ್ವಾಸನಾಳದ ಸ್ಥಿತಿಗತಿಗಳನ್ನು ಪರಿಶೀಲಿಸಿ ಕೇವಲ 30 ನಿಮಿಷಗಳಲ್ಲಿ ರಸ್ಕಿನ ತುಣುಕುಗಳನ್ನು ಹೊರತೆಗೆದೆವು’ ಎಂದು ಆಸ್ಪತ್ರೆಯ ತಜ್ಞ ಡಾ. ಟಿಂಕು ಜೋಸೆಫ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu & Kashmir: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ಹ*ತ್ಯೆ
Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್ ಹನುಮಂತ ಪ್ರತಿಮೆ ಅನಾವರಣ
ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
MUST WATCH
ಹೊಸ ಸೇರ್ಪಡೆ
Waqf Property: ವಿಜಯಪುರದ ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ಗೆ ಕ್ರಮ: ಸಚಿವ ಪಾಟೀಲ್
Jammu & Kashmir: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ಹ*ತ್ಯೆ
Ajekar Case: ಆರೋಪಿ ದಿಲೀಪ್ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು
Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.