ಜಿಮೇಲ್ ಸೇವೆಯಲ್ಲಿ ವ್ಯತ್ಯಯ,ಪೇಚಿಗೆ ಸಿಲುಕಿದ ಬಳಕೆದಾರರು: ಗೂಗಲ್ ಸ್ಪಷ್ಟನೆಯೇನು ಗೊತ್ತಾ ?
Team Udayavani, Aug 20, 2020, 3:39 PM IST
ನವದೆಹಲಿ: ಭಾರತದಲ್ಲಿ ಇಂದು ಮುಂಜಾನೆಯಿಂದಲೇ ಜಿ-ಮೇಲ್ ಸೇವೆಯಲ್ಲಿ ವ್ಯತ್ಯವಾಗಿದ್ದು ಅನೇಕರಿಗೆ ತಮ್ಮ ಅಕೌಂಟ್ ಗಳಿಗೆ ಲಾಗಿನ್ ಆಗಲು ಸಾಧ್ಯವಿಲ್ಲವಾಗಿದ್ದು ಮತ್ತೆ ಕೆಲವರಿಗೆ ಮೇಲ್ ಕಳುಹಿಸುವಲ್ಲಿ ಸಮಸ್ಯೆಯುಂಟಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಗೂಗಲ್, ಸಮಸ್ಯೆ ಬಗೆಹರಿಸಲು ನಮ್ಮ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ. ಜಿಮೇಲ್ ಡೌನ್ ಕುರಿತು ಹೆಚ್ಚಿನ ಮಾಹಿತಿಗಳನ್ನು ಶೀಘ್ರವಾಗಿ ಹಂಚಿಕೊಳ್ಳಲಾಗುವುದು. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದಿದೆ.
ಇಂದು ಬೆಳಗ್ಗೆ 11 ಗಂಟೆಯಿಂದಲೇ ಜಿಮೇಲ್ ಡೌನ್ ಆಗಿದ್ದು ಹಲವಾರು ಬಳಕೆದಾರರು ತಮ್ಮ ಅಕೌಂಟ್ ಗಳಿಗೆ ಲಾಗಿನ್ ಆಗಿಲು ಸಾಧ್ಯವಾಗಿಲ್ಲ. ಮತ್ತೂ ಕೆಲವರಿಗೆ ಆ್ಯಟ್ಯಾಚ್ ಫೈಲ್ ಗಳನ್ನು ಕಳುಹಿಸಲು ಸಮಸ್ಯೆ ತಲೆದೋರಿದ್ದು ಕೂಡಲೇ ಗೂಗಲ್ ಗಮನಕ್ಕೆ ತರಲಾಗಿತ್ತು.
ಭಾರತ ಮಾತ್ರವಲ್ಲದೆ ಹಲವಾರು ದೇಶಗಳಲ್ಲೂ ಜಿಮೇಲ್ ಸರಿಯಾಗಿ ಕಾರ್ಯನಿರ್ವಹಿಸದೆ ಹಲವರನ್ನು ಪೇಚಿಗೆ ಸಿಲುಕಿಸಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ ಗೂಗಲ್ ಡ್ರೈವ್ ಕೂಡ ಹಲವಾರು ಸಮಸ್ಯೆಗಳಿಂದ ಕೂಡಿತ್ತು ಎಂದು ವರದಿಯಾಗಿದೆ.
ಡೌನ್ ಡಿಟೇಕ್ಟರ್ ವೆಬ್ ಸೈಟ್ ಅಂಕಿಅಂಶಗಳ ಪ್ರಕಾರ, ಜಿಮೇಲ್, ಗೂಗಲ್ ಡ್ರೈವ್, ಮಾತ್ರವಲ್ಲದೆ ಕೆಲವೊಂದು ಗೂಗಲ್ ನ ಸೇವೆಯಲ್ಲೂ ವ್ಯತ್ಯಯವಾಗಿದ್ದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಿಲಾಗಿದೆ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಜಪಾನ್, ಇತರ ದೇಶಗಳಲ್ಲೂ ಇದರ ಇದರ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. 11 ಗಂಟೆಗೆ ಆರಂಭವಾದ ಈ ಸಮಸ್ಯೆಯಿಂದ ಸುಮಾರು 62% ಬಳಕೆದಾರರಿಗೆ ಆ್ಯಟ್ಯಾಚ್ ಫೈಲ್ ಗಳನ್ನು ಕಳುಹಿಸಲು ಅಸಾಧ್ಯವಾಗಿತ್ತು. 27% ಜನರಿಗೆ ಲಾಗಿನ್ ನಲ್ಲಿ ಸಮಸ್ಯೆ ತಲೊದೋರಿತ್ತು. 10% ಜನರು ತಮಗೆ ಯಾವುದೇ ಇ-ಮೇಲ್ ಸಂದೇಶಗಳು ಬರುತ್ತಿಲ್ಲವೆಂದು ದೂರು ಸಲ್ಲಿಸಿದ್ದರು.
1 ಎಂಬಿ ಗಳಿಗಿಂತಲೂ ಕಡಿಮೆ ಗಾತ್ರ ಇರುವ ಇಮೇಜ್ ಅಪ್ಲೋಡ್ ಆಗಲು ಜಿಮೇಲ್ ನಲ್ಲಿ ಬರೋಬ್ಬರಿ 15 ನಿಮಿಷಗಳು ಬೇಕಾಗಿದ್ದವು. ಅದಾಗ್ಯೂ ಮೇಲ್ ಕಾರ್ಯನಿರ್ವಹಿಸದೆ ಅನೇಕ ಉದ್ಯೋಗಿಗಳು ಪಡಿಪಾಟಲು ಅನುಭವಿಸಿದ್ದರು ಎಂದು ವರದಿ ತಿಳಿಸಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ #Gmaildown ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಸೃಷ್ಟಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HP ಯಿಂದ ಹೊಸ ಪ್ರಿಂಟರ್ಗಳ ಬಿಡುಗಡೆ
Instagram: ಹದಿಹರೆಯದವರಿಗೆಂದೇ ವಿಶೇಷ ಇನ್ಸ್ಟಾಗ್ರಾಂ ಖಾತೆ; ಮಕ್ಕಳ ಸುರಕ್ಷತೆಗಾಗಿ ಕ್ರಮ
Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್- ಚೆನ್ನೈ ಘಟಕ ಪುನರಾರಂಭ
iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?
iPhone-16: ಭಾರತದಲ್ಲೇ ಉತ್ಪಾದನೆ ಕಾರಣ ಐಫೋನ್-16 ಬೆಲೆಯಲ್ಲಿ ಇಳಿಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.