ಯುವಕರ ಕೋವಿಡ್ 19 ಮಕ್ಕಳಾಟಿಕೆಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
Team Udayavani, Aug 22, 2020, 11:31 AM IST
ಮಣಿಪಾಲ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈಗ ಯುವಕರಿಗೆ ಎಚ್ಚರಿಕೆ ನೀಡಿದೆ. ಕೋವಿಡ್ ವೈರಸ್ 20ರಿಂದ 40 ವರ್ಷದೊಳಗಿನ ಜನರ ಮೂಲಕ ವೇಗವಾಗಿ ಹರಡುತ್ತಿದೆ ಎಂದು ಅದು ಹೇಳಿದೆ. ಯುವಕರು ಸಹ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ತಿಳಿದಿಲ್ಲ, ಇದರಿಂದಾಗಿ ಅವರು ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸಮಸ್ಯೆಯನ್ನುಂಟು ಮಾಡಬಹುದು ಎಂದಿದೆ.
ಯುವಕರು ಕಚೇರಿಗೆ ಹೋಗುವ ಕ್ಷಣದಲ್ಲಿ ಅವರು ಗುಂಪಿನಲ್ಲಿ ಸುತ್ತಾಡುತ್ತಿದ್ದಾರೆ. ಹೊರಗೆ ಪಾರ್ಟಿ ಮಾಡುತ್ತಾರೆ. ಕೆಲಸಕ್ಕಾಗಿ ಯುವಕರು ಕೂಡ ಹೊರಟಿದ್ದಾರೆ. ಈ ಕಾರಣದಿಂದಾಗಿ ಯುವಕರಲ್ಲಿ ಸೋಂಕಿನ ಪ್ರಮಾಣ ಈಗ ಹೆಚ್ಚುತ್ತಿದೆ. ಅವರು ಇತರರಿಗೂ ಸೋಂಕು ತಗುಲಿಸುತ್ತಿದ್ದಾರೆ. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಲು ಯುವಕರಿಗೆ ತುಂಬಾ ಸಮಯಬೇಕಾಗಬಹುದು ಅಥವ ವೈರಸ್ ಪ್ರಭಲವಾಗಿದ್ದರೆ ಮಾತ್ರ ಆತನಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಕಡಿಮೆ ಪ್ರಮಾಣದಲ್ಲಿ ಯುವಜನರಲ್ಲಿ ರೋಗಲಕ್ಷಣಗಳು ಕಂಡುಬರುವುದಿಲ್ಲ. ಯಾಕೆಂದರೆ ಯುವಕರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಕೋವಿಡ್ ಇರುವ ಸೋಂಕಿತ ಮತ್ತೂಬ್ಬರೊಂದಿಗೆ ಮಾಸ್ಕ್ ಧರಿಸದೆ 15 ನಿಮಿಷಗಳ ಕಾಲ ಮಾತನಾಡಿದರೆ ಅವರ ನಡುವಿನ ಅಂತರವು ಮೂರು ಅಡಿಗಳಿಗಿಂತ ಕಡಿಮೆಯಿದ್ದರೆ ಅದನ್ನು ನಿಕಟ ಸಂಪರ್ಕ ಸಮಯ ಎಂದು ಕರೆಯಲಾಗುತ್ತದೆ.
ಇಂತಹ ಸಂದರ್ಭ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಬಹುದಾಗಿದೆ. ಸಂಭಾಷಣೆಯ ಸಮಯದಲ್ಲಿ ಮುಖವಾಡ ಧರಿಸಿ, ಯಾರನ್ನಾದರೂ ಭೇಟಿ ಮಾಡಿ ಮತ್ತು ನಿಮ್ಮ ಮಾತುಗಳನ್ನು ಕಡಿಮೆ ಸಮಯದಲ್ಲಿ ಹೇಳುವ ಮೂಲಕ ದೂರವಿರಿ ಎಂದು ಅದು ಹೇಳಿದೆ.
ಯುವಕರಿಗೆ ನೀಡಿದ ಸಲಹೆ ಏನು?
ಈ ದಿನಗಳಲ್ಲಿ ಯುವಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕ್ರಮಗಳನ್ನು ಅನುಸರಿಸುತ್ತಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ರೋಗಲಕ್ಷಣವಿಲ್ಲದ ರೋಗಿಗಳು ತುಂಬಾ ಅಪಾಯಕಾರಿಯಾಗಿದ್ದು, ಇತತರಿಗೆ ಸೋಂಕನ್ನು ತಗುಲಿಸುತ್ತಾರೆ. ರೋಗಲಕ್ಷಣವಿಲ್ಲದ ಹೆಚ್ಚಿನ ಪ್ರಕರಣಗಳು ಯುವ ಜನರಲ್ಲಿ ಸಮಾನ್ಯವಾಗಿ ಕಂಡುಬರುತ್ತಿವೆ. ಕಳೆದ ಐದು ತಿಂಗಳಲ್ಲಿ 15ರಿಂದ 24 ವರ್ಷದ ಯುವಕರಲ್ಲಿ ಸೋಂಕಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ. ಫೆಬ್ರವರಿ 24ರಿಂದ ಜುಲೈ 12ರ ವರೆಗೆ 6 ಮಿಲಿಯನ್ ಕೋವಿಡ್ ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ. ಮಕ್ಕಳು ಮತ್ತು ಯುವಜನರಲ್ಲಿ ಸೋಂಕಿನ ವೇಗ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಯುವಕರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡರೆ, ಅವುಗಳನ್ನು ತತ್ಕ್ಷಣ ಪರೀಕ್ಷಿಸಬೇಕು. ಅದನ್ನು ಮರೆಮಾಡಬೇಡಿ. ಕೋವಿಡ್ ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಲಹೆಗಳನ್ನು ಪಡೆದುಕೊಳ್ಳಿ ಎಂದು ಎಂದು ವೈದ್ಯರು ಹೇಳಿದ್ದಾರೆ. ಪ್ರಯಾಣಿಸುವಾಗ ಹ್ಯಾಂಡ್ ಸ್ಯಾನಿಟೈಜರ್ ಇರಿಸಿಕೊಳ್ಳಿ. ತಮ್ಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು, ಯುವಕರು ಉತ್ತಮ ಆಹಾರ ಮತ್ತು ಉತ್ತಮ ನಿದ್ರೆ ತೆಗೆದುಕೊಳ್ಳಬೇಕು. ಹೊರಗಿನ ಆಹಾರವನ್ನು ತಿನ್ನಬೇಡಿ. ಕೋವಿಡ್ನಿಂದ ರಕ್ಷಿಸಲು ರೋಗನಿರೋಧಕ ಶಕ್ತಿ ಅತ್ಯಂತ ಮುಖ್ಯವಾಗಿದೆ ಎಂದು ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.