![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 22, 2020, 7:06 PM IST
ಮಂಗಳೂರು : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಿಟ್ಟಿದ್ದು ಇಂದು 228 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10137 ಕ್ಕೆ ಏರಿಕೆಯಾಗಿದೆ.
ಶನಿವಾರ ನಾಲ್ಕು ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು ಇದುವರೆಜೆ ಜಿಲ್ಲೆಯಲ್ಲಿ 305 ಮಂದಿ ಕೋವಿಡ್ ಸೋಂಕಿಗೆ ಸಾವನ್ನಪಿದ್ದಾರೆ.
ಸಾವನ್ನಪ್ಪಿದವರಲ್ಲಿ ಮಂಗಳೂರಿನ ಇಬ್ಬರು, ಬಂಟ್ವಾಳದ ಒಬ್ಬರು ಹಾಗೂ ಇತರ ಜಿಲ್ಲೆಯ ಒಬ್ಬರು ಸೇರಿದ್ದಾರೆ.
ಇಂದಿನ 228 ಸೋಂಕಿತರಲ್ಲಿ ಮಂಗಳೂರಿನ 150 ಮಂದಿ, ಬಂಟ್ವಾಳದ 23 ಮಂದಿ, ಪುತ್ತೂರಿನ 15 ಮಂದಿ, ಸುಳ್ಯದ 8 ಮಂದಿ, ಬೆಳ್ತಂಗಡಿಯ 7 ಮಂದಿ ಹಾಗೂ ಹೊರ ಜಿಲ್ಲೆಯ 25 ಮಂದಿ ಸೇರಿದ್ದಾರೆ.
ಇಂದು ಒಟ್ಟು 320 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ, ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7513 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.