ಆರ್ಥಿಕ ಹಿಂಜರಿತದ ಸುಳಿಯಲಿ ಜಪಾನ್‌


Team Udayavani, Aug 23, 2020, 3:11 PM IST

ಆರ್ಥಿಕ ಹಿಂಜರಿತದ ಸುಳಿಯಲಿ ಜಪಾನ್‌

ಟೋಕಿಯೋ: ಕೋವಿಡ್ ಕಾರಣಕ್ಕೆ ಏಪ್ರಿಲ್‌ ನಿಂದ ಜುಲೈ ತ್ತೈಮಾಸಿಕದಲ್ಲಿ ಜಪಾನ್‌ ಜಿಡಿಪಿ ಭಾರೀ ಇಳಿಕೆ ಆಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯು ಕಳೆದ ತ್ತೈಮಾಸಿಕಕ್ಕಿಂತ ಶೇ.7.8ರಷ್ಟು ಕುಗ್ಗಿದ್ದು, ಇದನ್ನು ವಾರ್ಷಿಕ ದರಕ್ಕೆ ಬದಲಿಸಿ ಹೇಳಬೇಕೆಂದರೆ ಶೇ.27.8ರಷ್ಟು ಇಳಿಕೆಯಾಗಿದೆ. 1980ರ ಆಧುನಿಕ ದಾಖಲೆಗಳಲ್ಲೇ ಈ ಬಾರಿಯದು ಅತ್ಯಂತ ಹೀನಾಯ ಕುಸಿತ ಹಾಗೂ ಸತತ ಮೂರನೇ ತ್ತೈಮಾಸಿಕ ಈ ರೀತಿ ಕುಗ್ಗಿದೆ ಎಂದು ವರದಿ ಹೇಳಿದೆ.

ಎಪ್ರಿಲ್ ಜುಲೈ ತ್ತೈಮಾಸಿಕ ಅವಧಿಯ ಉಳಿದ ಪ್ರಮುಖ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಜಪಾನ್‌ ಸ್ಥಿತಿ ಉತ್ತಮವಾಗಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್‌ ಕ್ರಮಗಳಿಂದ ರಫ್ತು ಪ್ರಮಾಣ ಕಡಿಮೆಆಗಿರುವುದು ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣವಾಗಿದೆ.  ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆರು ವಾರಗಳ ಕಾಲ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದರಿಂದ ವ್ಯಾಪಾರ- ವ್ಯವಹಾರಗಳಿಗೆ ಭರ್ತಿ ಪೆಟ್ಟು ಬಿದ್ದಿದ್ದು, ಜೂನ್‌ ಹಾಗೂ ಜುಲೈನಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾದರೂ ಚೇತರಿಕೆ ವೇಗದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಜಪಾನ್‌ ಸರಕಾರವು ಜುಲೈ ಮಧ್ಯ ಭಾಗದಲ್ಲಿ ಸಬ್ಸಿಡಿ ಯೋಜನೆಗಳನ್ನು ಘೋಷಿಸಿ, ದೇಶೀಯ ಪ್ರವಾಸೋದ್ಯಕ್ಕೆ ಉತ್ತೇಜನ ನೀಡಲು ಯೋಜನೆ ರೂಪಿಸಿತು. ಆದರೆ ಆಗಸ್ಟ್ ತಿಂಗಳೊಂದರಲ್ಲೇ 19 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆಯಾಗಿ ಪತ್ತೆಯಾದ ಕೋವಿಡ್ ಸೋಂಕಿತ ಪ್ರಕರಣಗಳು 57 ಸಾವಿರ ಗಡಿ ದಾಟಿ ಮುನ್ನುಗುತ್ತಿದೆ. ಹಾಗೇ ಇಲ್ಲಿಯವರೆಗೂ ದೇಶದಲ್ಲಿ 1,128 ಮಂದಿ ಸಾವನ್ನಪ್ಪಿದ್ದಾರೆ.

ಕೆನಡಾ ಜಿಡಿಪಿ ಶೇ.12ರಷ್ಟು ಕುಂಠಿತ ಸಾಧ್ಯತೆ  : ಎಪ್ರಿಲ್ ಜುಲೈ ತ್ತೈಮಾಸಿಕ ಅವಧಿಯ ಉಳಿದ ಪ್ರಮುಖ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಜಪಾನ್‌ ಸ್ಥಿತಿ ಉತ್ತಮವಾಗಿದ್ದು, ಯು. ಎಸ್‌. ಹಾಗೂ ಜರ್ಮನಿ ಕಳೆದ ತ್ತೈಮಾಸಿಕಕ್ಕಿಂತ ತಲಾ ಶೇ.10ರಷ್ಟು ಇಳಿಕೆ ಕಂಡಿವೆ. ಇನ್ನು ಯುನೈಟೆಡ್‌ ಕಿಂಗ್‌ ಡಮ್‌ ಉತ್ಪಾದನೆ ಈ ಹಿಂದಿನ ಅವಧಿಗಿಂತ ಶೇ.20.4ರಷ್ಟು ಕಡಿಮೆ ಆಗಿದೆ. ಜಿ7 ರಾಷ್ಟ್ರಗಳ ಆರ್ಥಿಕತೆ ಪೈಕಿ ಕೆನಡಾ ಜಿಡಿಪಿ ಹಿಂದಿನ ತ್ತೈಮಾಸಿಕಕ್ಕಿಂತ ಶೇ.12ರಷ್ಟು ಕುಗ್ಗಬಹುದು ಎಂದು ನಿರಿಕ್ಷಿಸಲಾಗಿದ್ದು, ಕೆನಡಾ ದೇಶಕ್ಕೂ ಆರ್ಥಿಕ ಹಿಂಜರಿತದ ಭೀತಿ ಶುರುವಾಗಿದೆ. ಇನ್ನು ಚೀನ ಎರಡನೇ ತ್ತೈಮಾಸಿಕದಲ್ಲಿ ವ್ಯಾಪಾರ ವಹಿವಾಟು ಚಟುವಟಿಕೆಗಳಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡಿದ್ದು, ಆರ್ಥಿಕರ ದರ ಬೆಳವಣಿಗೆ ಕಾಣುತ್ತಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.